ಸಾಹೇಬರು ಬರುತ್ತಾರೆ

Author : ಕೆ.ವಿ. ಸುಬ್ಬಣ್ಣ

Pages 72

₹ 45.00




Year of Publication: 2001
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಶ್ರೇಷ್ಠವಾದ ಪ್ರಹಸನಗಳು ವಾಸ್ತವದಲ್ಲಿರುವ ಅಸಂಬದ್ಧತೆಯನ್ನೂ, ಅಸಂಬದ್ಧತೆಯಲ್ಲಿರುವ ವಾಸ್ತವವನ್ನೂ, ಭಯಾನಕದಲ್ಲಿರುವ ಹಾಸ್ಯವನ್ನೂ, ಹಾಸ್ಯದಲ್ಲಿರುವ ಭಯಾನಕವನ್ನೂ ಕಾಣಿಸುತ್ತವೆ- ಎಂದೊಬ್ಬ ವಿಮರ್ಶಕ ಹೇಳುತ್ತಾನೆ. ‘ಸಾಹೇಬರು ಬರುತ್ತಾರೆ’ ಈ ಗುಣಗಳಿರುವಂತಹ ಒಂದು ಪ್ರಹಸನ. ಒಂದು ಸಾಧಾರಣ ಪೇಟೆಯ ವಾಸ್ತವವನ್ನು ಈ ನಾಟಕ ಚಿತ್ರಿಸುತ್ತದೆ. ಜತೆಗೇ ಆ ಜನರ ಅಂತಸ್ತಿನ ಕಲ್ಪನೆಯ ಅಸಂಬದ್ಧತೆಯನ್ನು ಸೂಚಿಸುತ್ತದೆ. ಅಧಿಕಾರದ ಬಗ್ಗೆ ಅವರಿಗಿರುವ ಭಯವನ್ನೂ ಕಾಣೀಸುತ್ತಲೇ ಆ ಭಯದಲ್ಲಿ ಅವರು ಸಿಕ್ಕಿ ಒದ್ದಾಡುವ ಹಾಸ್ಯಾಸ್ಪದ ಪ್ರಸಂಗಗಳನ್ನು ಚಿತ್ರಿಸುತ್ತದೆ.

ಪ್ರಹಸನ ಪ್ರಕಾರಕ್ಕೆ ಲಭ್ಯವಾಗುವ ಎಲ್ಲ ತಂತ್ರಗಳನ್ನೂ ಈ ನಾಟಕ ಬಳಸಿಕೊಳ್ಳುತ್ತದೆ- ಯಾವನೋ ಒಬ್ಬನನ್ನು ಇನ್ನೊಬ್ಬ ಎಂದು ಭಾವಿಸಿ ಗೊಂದಲಪಡುವ ವ್ಯಕ್ತಿವ್ಯತ್ಯಾಸ ಪ್ರಹಸನ: ತಾನಲ್ಲದ್ದನ್ನು ತಾನು ಎಂದು ತೋರಿಸುವ ಆರೋಪಿತ ನಡಾವಳಿಗಳ ಪ್ರಹಸನ: ಸಂದರ್ಭದ ಇಕ್ಕಟ್ಟಿನಲ್ಲಿ ಸಿಕ್ಕುಬಿದ್ದು ಹೊರಬರಲಾಗದೆ ಒದ್ದಾಡುವ ಸನ್ನಿವೇಶ ಪ್ರಹಸನ ಮತ್ತು ಸಾಮಾಜಿಕ ಅಂತಸ್ತಿನ ಮುಖವಾಡಗಳಲ್ಲಿ ಮನುಷ್ಯ ಮನುಷ್ಯನನ್ನು ಗುರುತಿಸಲಾಗದೆ ಹೋಗುವ ಬೌದ್ಧಿಕ ಪ್ರಹಸನ- ಇವಿಷ್ಟೂ ಈ ನಾಟಕದಲ್ಲಿ ಕೂಡಿಕೊಂಡಿವೆ. ಹಾಗಾಗಿಯೇ ಈ ನಾಟಕ ಹೊರಗಿಂದ ಬಂದು ಮಂಕುಬೂದಿ ಎರಚಿದ ಒಬ್ಬ ಲಫಂಗನ ಕಥೆಯಷ್ಟೇ ಆಗುವುದಿಲ್ಲ ಅಥವಾ ಕಥೆಯೂ ಆಗುವುದಿಲ್ಲ. ಬದಲು, ಇದು ಹಣ-ಅಂತಸ್ತು-ಅಧಿಕಾರಗಳ ಬೆನ್ನುಹತ್ತಿ ಸುಳ್ಳುಗಳ ಸರಮಾಲೆಯನ್ನೇ ತನ್ನ ಸುತ್ತ ಹೆಣೆದುಕೊಂಡಿರುವ ಮುಖವಾಡ ವ್ಯವಸ್ಥೆಗೆ ಮಿಂಚು ಹೊಡೆಸುವ ಕಥೆಯಾಗುತ್ತದೆ.

About the Author

ಕೆ.ವಿ. ಸುಬ್ಬಣ್ಣ
(20 February 1931)

ಕೆ.ವಿ. ಸುಬ್ಬಣ್ಣ ಕನ್ನಡದ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಎ. ಪದವಿ ಪಡೆದ ನಂತರ ಅವರು ಕೃಷಿಕಾಯಕ ಆರಂಭಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಅಚ್ಚರಿಪಡುವ ಹಾಗಿದೆ. ಕವಿ, ನಾಟಕಕಾರ, ಅನುವಾದಕರಾಗಿದ್ದ ಅವರು 'ಅಕ್ಷರ ಪ್ರಕಾಶನ' 'ನೀನಾಸಂ ರಂಗ ಚಟುವಟಿಕೆ'ಗಳನ್ನು ನಿರ್ವಹಿಸಿದವರು. ಭಾರತೀಯ ಸಂಸ್ಕೃತಿಗೆ ವಿಶಿಷ್ಟ ಮಾದರಿ ಎನ್ನುವ ಹಾಗೆ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಪುಟ್ಟಹಳ್ಳಿಯಲ್ಲಿ ನಡೆಸಿದ್ದು ಒಂದು ದಾಖಲೆ. ಮ್ಯಾಗ್ಸೆಸ್ಸೆ ಪ್ರಶಸ್ತಿಯಿಂದ ಹೆಗ್ಗೋಡು ಅಂತರರಾಷ್ಟ್ರೀಯ ನಕ್ಷೆಯಲ್ಲಿ ದಾಖಲಾಯಿತು. ಕೆ.ವಿ. ಸುಬ್ಬಣ್ಣ ಒಬ್ಬ ವ್ಯಕ್ತಿಯಲ್ಲ, ಮಹಾನ್ ಶಕ್ತಿ. ಅವರ ಬೆಳವಣಿಗೆ ವೈಯಕ್ತಿಕವಾದದ್ದಲ್ಲ, ಸಾಂಘಿಕವಾದದ್ದು. 'ಅಕ್ಷರ ಪ್ರಕಾಶನದ ಮೂಲಕ , 'ನೀನಾಸಂ' ಮೂಲಕ ಅನೇಕ ಪ್ರತಿಭೆಗಳನ್ನು ಅವರು ...

READ MORE

Related Books