ದಂಗೆ ಎದ್ದವಳು

Author : ವಿಜಯಾ ಸುಬ್ಬರಾಜ್

Pages 84

₹ 60.00




Year of Publication: 2016
Published by: ನಂದಿ ಬುಕ್‌ ಹೌಸ್‌
Address: ನಂ.379, 1ನೇ ಮಹಡಿ, ಬೆಳ್ಳೂರು ಕ್ರಾಸ್‌, ನಾಗಮಂಗಲ ತಾಲ್ಲೂಕು, ಮಂಡ್ಯ

Synopsys

ವಿಜಯಾ ಸುಬ್ಬರಾಜ್ ಅವರ ’ದಂಗೆ ಎದ್ದವಳು’ ನಾಟಕ ಹದಿನಾಲ್ಕು ದೃಶ್ಯಗಳಲ್ಲಿ ಹರಡಿಕೊಂಡ ಕಥಾ ವಿನ್ಯಾಸವನ್ನು ಹೊಂದಿದೆ. ಒಂದು ಕಡೆ, ವಿಕ್ರಮ ರಾಯನ ರಾಜ ಪರಿವಾರ: ಇನ್ನೊಂದು ಕಡೆ ಮಲ್ಲನ ಗೌಡನ ಪ್ರಜಾ ಪರಿವಾರ, ನಡುವಿನ ಕೊಂಡಿಯಾಗಿ ಗೌಡರ ಮಗಳು 'ಮಾದೇವಿ' ಅವಳೇ ಈ ನಾಟಕದ ಕ್ರಿಯಾ ಬಿಂದು. ಭಾಗವತ ಮೇಳ, ಪ್ರೇಕ್ಷಕರು, ಪ್ರಾರ್ಥನೆ... ಹೀಗೆ ಸಾಂಪ್ರದಾಯಿಕ ಎನ್ನಬಹುದಾದ ಚೌಕಟ್ಟಿನಲ್ಲಿಯೇ ನಾಟಕದ ಪ್ರಾರಂಭ, ಆಶಯ ಕೂಡ ನಮ್ಮ ಜಾನಪದ ಕತೆಗಳದೇ. ನಾಡಿಗೆ ವಿಪತ್ತು ಬಂದಾಗ 'ಬಲಿ' ಕೊಡುವುದು. ಈ “ಬಲಿ” ಕೂಡ ಆಸಕ್ತ ಶಕ್ತಿಗಳ ಕಾರಸ್ಥಾನದ ಫಲವೇ, 'ಬಲಿ' ಯಾದ ವ್ಯಕ್ತಿ ದೈವೀ ಪಟ್ಟಕ್ಕೆ ಏರುವುದು ಮಾಮೂಲಿ. ಈ ನಾಟಕದ ವೈಶಿಷ್ಟ್ಯ ಇರುವುದು ಈ ಬಲಿದಾನದ ಪ್ರಕ್ರಿಯೆಯಲ್ಲಿ ವಿಜಯಾ ಅವರು ಮಾಡಿಕೊಂಡಿರುವ ಬದಲಾವಣೆಯಲ್ಲಿ, ಮಾದೇವಿ ಕೇವಲ ಹರಕೆಯ ಕುರಿಯಾಗದೆ ಎಚ್ಚೆತ್ತ ಮಹಿಳೆಯ ಧ್ವನಿಯಾಗುತ್ತಾಳೆ, ಶೋಷಕ ಸಮಾಜಕ್ಕೆ ನೇರವಾಗಿ ಸವಾಲು ಹಾಕುವ ಮೂಲಕ ದಂಗೆ ಏಳುತ್ತಾಳೆ. ಮೂಕ ಪ್ರಜೆಗಳಿಗೆ ಬಾಯಿ ಆಗುತ್ತಾಳೆ ಎನ್ನುವುದು ಇಲ್ಲಿಯ ಕಥಾ ವಸ್ತು.

About the Author

ವಿಜಯಾ ಸುಬ್ಬರಾಜ್
(20 April 1947)

ವಿಜಯಾ ಸುಬ್ಬರಾಜ್ ಅವರು ಬೆಂಗಳೂರಿನಲ್ಲಿ 1947 ಏಪ್ರಿಲ್‌ 20ರಂದು ಜನಿಸಿದರು. ತಾಯಿ ಲಕ್ಷ್ಮಿ, ತಂದೆ ಸೀತಾರಾಂ. ಇಂಗ್ಲಿಷ್‌ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.  ಕನ್ನಡ ಸಾಹಿತ್ಯ ಕ್ಷೇತ್ರದ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಬಿಯುಸಿಟಿಎ ನ ಉಪಾಧ್ಯಕ್ಷೆ, ಕನ್ನಡ ನುಡಿ ನಿಯತಕಾಲಿಕೆಯ ಸಂಪಾದಕಿ, ನಂಜನಗೂಡು ತಿರುಮಲಾಂಬ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.  ವಿಜಯಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ...

READ MORE

Related Books