ಮುಳ್ಳಿನ ಕಿರೀಟ

Author : ಎಲ್. ಎನ್. ಮುಕುಂದರಾಜ್

Pages 70

₹ 60.00




Year of Publication: 2007
Published by: ಅಕ್ಕ ಪ್ರಕಾಶನ,
Address: ನಂ. 224, 8ನೇ ಕ್ರಾಸ್, 40 ಅಡಿರಸ್ತೆ, ಕೆಂಪೇಗೌಡ ನಗರ, ಬ್ಯಾಡರಹಳ್ಳಿ, ಬೆಂಗಳೂರು – 560091

Synopsys

ಸಾಹಿತಿ ನಾ. ಡಿಸೋಜ ಅವರ ಕೈತಾನ್ ಗಾಂಧಿಯ ಸ್ವಾತಂತ್ಯ್ರ ಹೋರಾಟ ಕಾದಂಬರಿಯನ್ನು ಆಧರಿಸಿ ರಚಿಸಿರುವ ನಾಟಕ ’ ಮುಳ್ಳಿನ ಕಿರೀಟ’.

ಈ ನಾಟಕವನ್ನು ಲೇಖಕ, ಅನುವಾದಕರಾದ ಎಲ್.ಎನ್.ಮುಕುಂದರಾಜ್ ಅವರು ರಚಿಸಿದ್ದಾರೆ.

ಭಾರತ ಸ್ವಾತಂತ್ಯ್ರ ಸಂಗ್ರಾಮ ಚಳುವಳಿಯ ಮುಂಚೂಣಿಗೆ ಗಾಂಧೀಜಿ ಬಂದ ಮೇಲೆ ’ಮಾಡು ಇಲ್ಲವೆ ಮಡಿ’ ಎನ್ನುವ ಕರೆಗೆ ಓಗೊಟ್ಟು  ಲಕ್ಷಾಂತರ ಜನರು ಸೇರಿದರು. ಬಡವರು, ವಿದ್ಯಾರ್ಥಿಗಳು, ಹೆಂಗಸರು, ಮಕ್ಕಳು, ವೃದ್ಧರು, ಮತ್ತು ಹಿಂದೂ ಮುಸ್ಲಿಂ, ಸಿಖ್ ಜನಾಂಗದವರೂ ಇದ್ದರು. ಇಂತಹ ಮಹಾಸಂಗ್ರಾಮದ ಸಂಕಥನದಲ್ಲಿ ಕ್ರೈಸ್ತರ ಕಾಣಿಕೆ ಏನು ಎಂಬ ಶೋಧಕ್ಕೆ ಎಲ್.ಎನ್. ಮುಕುಂದರಾಜ್ ಅವರ ’ಮುಳ್ಳಿನ ಕಿರೀಟ’ ನಾಟಕ ಸಾಕ್ಷಿಯಾಗುತ್ತದೆ.

About the Author

ಎಲ್. ಎನ್. ಮುಕುಂದರಾಜ್

ಎಲ್. ಎನ್. ಮುಕುಂದರಾಜ್  ಹೊಸ ತಲೆಮಾರಿನ ಹೆಸರಾಂತ ಲೇಖಕರು, ಕನ್ನಡ ಎಂ.ಎ. ಪಡೆದ ಇವರು ವಿವಿಧ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. - ದೇಶ ಕೋಶ ದಾಸವಾಳ, ನಿರಂಕುಶ ಮುಂತಾದ ಕವನ ಸಂಕಲನಗಳು, ವೈಶಂಪಾಯನ ತೀರ, ಇಗೋ ಪಂಜರ ಅಗೋ ಮುಗಿಲು, ಸಂಗ್ರಾಮ ಭಾರತ ಮುಂತಾದ ನಾಟಕಗಳು, ಅನೇಕ ಜೀವನ ಚರಿತ್ರೆಗಳು ಹಾಗೂ ಅನುವಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ ಆಕಾಶವಾಣಿ ಹಾಗೂ ದೂರದರ್ಶನ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಲ್ಲದೆ ನಟಿಸಿದ್ದಾರೆ. ಅನೇಕ ಕವಿಗೋಷ್ಠಿಗಳಲ್ಲಿ ಭಾಗವಹಿಸುವುದಲ್ಲದೆ, ಪ್ರತಿಭಾವಂತ ಸಂಸದೀಯ ಪಟು ಪುಸ್ತಕ ಮಾಲಿಕೆ, ಸುವರ್ಣ ಸಂಭ್ರಮಗಳ ಸಂಪಾದಕರಾಗಿಯೂ ದುಡಿದಿದ್ದಾರೆ. ಶಿಕ್ಷಕ ...

READ MORE

Related Books