ರಸಗಂಗಾಧರ

Author : ವಿಕ್ರಮ ವಿಸಾಜಿ

Pages 74

₹ 80.00




Year of Publication: 2017
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟನ ಅಂಚೆ, ಬಳ್ಳಾರಿ, 583 113
Phone: 9480353507

Synopsys

ಸಂಸ್ಕೃತ ’ಕಾವ್ಯ ಮೀಮಾಂಸೆ’ಯಲ್ಲಿ ಪ್ರಮುಖ ರಸ ಸಿದ್ಧಾಂತ ಮಂಡಿಸುವ ಪಂಡಿತ ಜಗನ್ನಾಥ ’ಗಂಗಾಲಹರಿ’ಯಂತಹ ಕಾವ್ಯದ ಕವಿಯೂ ಹೌದು. ಪಂಡಿತರಾಜ ಜಗನ್ನಾಥನ ಪ್ರೇಮ, ಮೊಗಲ್ ರಾಜಕೀಯ, ದಾರಾನ ಪ್ರೀತಿ- ಔರಂಗಜೇಬನ ದ್ವೇಷ, ಸಹ ವಿದ್ವಾಂಸರ ಅಸಹನೆಗಳನ್ನು ಒಳಗೊಂಡ ಸೊಗಸಾದ ನಾಟಕವಿದು. ಕವಿ-ವಿಮರ್ಶಕ ವಿಕ್ರಮ ವಿಸಾಜಿ ಅದನ್ನು ನಾಟಕಕ್ಕೆ ಅಳವಡಿಸಿದ್ದಾರೆ. ಕಾವ್ಯಾತ್ಮಕ ಸಾಲುಗಳು ನಾಟಕದ ಓದನ್ನು ಸಹ್ಯಗೊಳಿಸುತ್ತವೆ. ನಾಟಕದ ಬಗ್ಗೆ ವಿ.ಎಂ. ಮಂಜುನಾಥ ’ಮೊಗಲ್ ಯುಗದ ನಾಟಕ ’ರಸಗಂಗಾಧರ’ದೊಳಗಿನ ಕಾವ್ಯಾತ್ಮಕ ಭಾಷೆಯ ಬೇಟೆಯಲ್ಲಿ ನುಗ್ಗಿದ ರೂಪಕಗಳ ಗೂಳಿ ಪ್ರೇಮದ ಆಕಾರದಲ್ಲಿ ಉರಿದುರಿದು ಬೂದಿಯಾಗುವುದು ಅಥವಾ ರಣಕೆಂಡವಾಗುವುದರ ದಿಟ್ಟರೂಪ ಇಲ್ಲಿದೆ. ವಿಕ್ರಮ ವಿಸಾಜಿ ಅವರ ನಾಟಕ ಕೃತಿ ಜೀವಂತವಾಗುವುದು ಹೀಗೆ’ ಎಂದು ಬರೆದರೆ ಹಿರಿಯ ಕವಿ ಎಚ್.ಎಸ್. ಶಿವಪ್ರಕಾಶ ಅವರು ’ಆಧುನಿಕ ಕನ್ನಡ ನಾಟಕಗಳ ಪರಂಪರೆಯಲ್ಲಿ ಪ್ರೇಮದ ವಸ್ತು ಇಲ್ಲವೇ ಇಲ್ಲ’ ಎನ್ನುವಷ್ಟು ವಿರಳ. ಈ ಕೊರತೆಯನ್ನು ನೀಗಿಸುವಲ್ಲಿ ವಿಕ್ರಮ ಪ್ರಯತ್ನಿಸಿದ್ದಾರೆ. ಈ ನಾಟಕವು ಸಾಹಿತ್ಯ ಮತ್ತು ಸಾಂಸ್ಕೃತಿಕ ಸನ್ನಿವೇಶಗಳನ್ನು ಅಚ್ಚರಿಯಾಗುವ ಹಾಗೆ ಅಪರೂಪದ ಕ್ರಮಗಳಿಂದ ಒಳಗಿಳಿಸಿಕೊಂಡಿದೆ. ಈ ಮೂಲಕ ಈವರೆಗಿನ ನಾಟಕ ರಚನೆಯ ವ್ಯಾಕರಣದಿಂದ ಭಿನ್ನವಾದ ಹಾದಿಯನ್ನು ತುಳಿದಿದೆ. ಕಥನ ಮತ್ತು ಭಾವಗೀತಾತ್ಮಕ ಸಂಭಾಷಣೆಗಳ ಮೂಲಕ ಇಲ್ಲಿನ ವಸ್ತು ತೆರೆದುಕೊಳ್ಳುತ್ತಾ ಹೋಗಿ ಮತ-ಮತಗಳ ವೈಷಮ್ಯ, ಅಧಿಕಾರ ಅಂತಸ್ತುಗಳ ಆಟಾಟೋಪ ಇತ್ಯಾದಿಗಳ ಬಿರುಮಳೆ ಮತ್ತು ಸಿಡಿಲುಗಳ ಹೊಡೆತದಲ್ಲಿ ವಿನಾಶಗೊಂಡ ನಿಷ್ಕಲ್ಮಶ ಪ್ರೇಮದ ದುರಂತ ವಸ್ತುಸ್ಥಿತಿಯನ್ನು ನವೀರಾಗಿ ರೇಖಿಸಿದೆ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ವಿಕ್ರಮ ವಿಸಾಜಿ

ಕಲಬುರ್ಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕರಾಗಿರುವ ವಿಕ್ರಮ ವಿಸಾಜಿ ಅವರು ಕವಿ-ವಿಮರ್ಶಕ. ಬೀದರ ಜಿಲ್ಲೆಯ ಭಾಲ್ಕಿಯವರಾದ ವಿಕ್ರಮ ಅವರ ತಂದೆ ಹೆಸರಾಂತ ಕವಿ-ಲೇಖಕರು. ಬಾಲ್ಯದಲ್ಲಿಯೇ ಕವಿತೆ ಬರೆಯುವುದನ್ನು ಆರಂಭಿಸಿದ ವಿಕ್ರಮ ಅವರು ಹೈಸ್ಕೂಲಿನಲ್ಲಿದ್ದಾಗಲೇ ಕವನ ಸಂಕಲನ ಪ್ರಕಟಿಸಿದ್ದರು.  ಕಲಬುರ್ಗಿಯ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಎಂ.ಎ) ಪದವಿ ಪಡೆದ ಅವರು ಕಂಬಾರರ ಕಾವ್ಯದ ಮೇಲೆ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್‌.ಡಿ. ಪದವಿ ಪಡೆದಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ ಸೊಂಡೂರು, ರಾಯಚೂರು ಸ್ನಾತಕೋತ್ತರ ಕೇಂದ್ರಗಳಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು.  ಕನ್ನಡ ಸಾಹಿತ್ಯ ಪರಿಷತ್ತು ...

READ MORE

Conversation

Related Books