ಗಾನಯೋಗಿ ಭೈರವಿ ಕೆಂಪೇಗೌಡ

Author : ಸಿ. ವೀರಣ್ಣ

Pages 87

₹ 75.00




Year of Publication: 2018
Published by: ಕರ್ನಾಟಕ ಸಾಹಿತ್ಯ ಪರಿಷತ್‌
Address: 83/ಇ, 15 ನೇ ಮುಖ್ಯರಸ್ತೆ , ವಿಜಯನಗರ, ಬೆಂಗಳೂರು 560040
Phone: 9448119060

Synopsys

ಕರ್ನಾಟಕ ಸಂಗೀತ ಪರಂಪರೆಯಲ್ಲಿ ಭೈರವಿ ಕೆಂಪೇಗೌಡರು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಪ್ರಸಿದ್ಧಿಯಾದವರು. ಅಪ್ಪಟ ಗ್ರಾಮೀಣ ಸತ್ವದಲ್ಲಿ ಅರಳಿದ ಅವರು ಅರಮನೆಯ ನೆರಳಿನಲ್ಲಿದ್ದ ಶಾಸ್ತ್ರೀಯ ಸಂಗೀತವನ್ನು ಕರಗತ ಮಾಡಿಕೊಂಡಿದ್ದರು. ದರ್ಬಾರ್‌ ದಿರಿಸು, ಆಸ್ಥಾನದ  ಶಿಷ್ಟಾಚಾರಗಳನ್ನು ನಿರಾಕರಿಸಿದ ಅವರು , ಹೊಲ ಗದ್ದೆಗಳ ಬದುವಿನಲ್ಲೂ ಶಾಸ್ತ್ರೀಯ ಸಂಗೀತ ಹಾಡಲು ಉತ್ಸುಕರಾಗಿದ್ದರು. ಈ ನಾಟಕವು ಈ ಸಂಗೀತಗಾರನ ಜೀವನ ಸಾಧನೆಯ ಬಗ್ಗೆ ವಿವರಿಸುತ್ತದೆ.

About the Author

ಸಿ. ವೀರಣ್ಣ

ಡಾ. ಸಿ. ವೀರಣ್ಣಅವರು ಸಂಶೋಧಕ, ಸಾಮಾಜಿಕ ಚಿಂತಕ. 1942 ಜೂನ್ 15ರಂದು ಜನನ. ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಎಂ.ಎ ಪದವಿಯನ್ನು ಪಡೆದಿರುವ ಅವರು ಐಚ್ಛಿಕ ಕನ್ನಡದಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ(1967) ಅತಿಹೆಚ್ಚು ಅಂಕಗಳಿಸಿ ”ಪ್ರೊ.ಎ.ಆರ್.ಕೃಷ್ಣಶಾಸ್ತ್ರೀ ಸ್ಮಾರಕ ಸುವರ್ಣ ಪದಕವನ್ನು ಪಡೆದಿರುತ್ತಾರೆ. ಹಂಪಾ ನಾಗರಜಯ್ಯ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ಕಾವ್ಯ ಕಂಡ ಹೆಣ್ಣು’ ಪ್ರಬಂಧ ಮಂಡಿಸಿ ಪಿ.ಎಚ್.ಡಿ ಪದವಿಯನ್ನು ಪಡೆದಿರುತ್ತಾರೆ. ತಮ್ಮ ಅಧ್ಯಾಪಕ ವೃತ್ತಿ ಜೀವನವನ್ನು ಆಚಾರ್ಯ ಪದವಿ ಕಾಲೇಜಿನಲ್ಲಿಆರಂಭಿಸಿದ ಅವರು, ಎರಡು ವರ್ಷಗಳ ನಂತರ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ 'ಡಾ.ಜಿ.ಎಸ್.ಶಿವರುದ್ರಪ್ಪ ಅವರ ಕನ್ನಡ ಅಧ್ಯಯನ ಕೇಂದ್ರ'ದಲ್ಲಿ ಸಂಶೋಧನಾ ಸಹಾಯಕರಾಗಿ ...

READ MORE

Related Books