ಜನತೆಯ ರಾಜ ಶಾಹೂ

Author : ಸಿ. ವೀರಣ್ಣ

Pages 80

₹ 80.00




Year of Publication: 2015
Published by: ಕರ್ನಾಟಕ ಸಾಹಿತ್ಯ ಪರಿಷತ್‌
Address: 83/ಇ, 15ನೇ ಮುಖ್ಯರಸ್ತೆ ವಿಜಯನಗರ, ಬೆಂಗಳೂರು-560040
Phone: 9448119060

Synopsys

ಭಾರತ ದೇಶವನ್ನು ಆಳಿದ ಅನೇಕ ರಾಜರುಗಳಲ್ಲಿ ಕೊಲ್ಲಾಪುರದ  ಛತ್ರಪತಿ ಶಾಹೂ ಮಹಾರಾಜರು ಕೂಡ ಒಬ್ಬರು. ಇವರು 28 ವರ್ಷಗಳ ಕಾಲ ಆಡಳಿತವನ್ನು ನಡೆಸಿದ್ದಾರೆ. ಅಸ್ಪೃಶ್ಯತೆಯನ್ನು ನಿವಾರಿಸಲು, ಬಡ ಶೂದ್ರರ ಮಕ್ಕಳಿಗೆ ಅಕ್ಷರ ಕಲಿಸಲು, ಉಚಿತ ಮತ್ತು ಕಡ್ಡಾಯ ಶಿಕ್ಚಣ  ನೀಡಲು, ಹೆಣ್ಣು ಮಕ್ಕಳಿಗೆ ಹಲವು ಬಗೆಯ ಹಕ್ಕು ನೀಡಲು, ನೇಕಾರರಿಗೆ ಧೈರ್ಯ ತುಂಬಲು, ರೈತರಿಗೆ ಬೆಂಬಲ ಕೊಡಲು ಛತ್ರಪತಿ ಶಾಹೂ ಮಹಾರಾಜರು ಕೈಗೊಂಡ ಕಾರ್ಯಗಳ ವಿವರಗಳನ್ನು ಈ ಕೃತಿಯೂ ನಮಗೆ ನೀಡುತ್ತದೆ. ಸಾಮಾಜಿಕ ರಾಜಕೀಯ ಕ್ಷೇತ್ರದ ಉಜ್ವಳ ಅಧ್ಯಾಯಗಳು ಈ ಕೃತಿಯಲ್ಲಿದೆ.  ಛತ್ರಪತಿ ಶಾಹೂ ಮಹಾರಾಜರ ಕುರಿತ ಹಲವು ಪ್ರಮುಖ ವಿಷಯಗಳನ್ನು ಒಳಗೊಂಡಿದೆ.

About the Author

ಸಿ. ವೀರಣ್ಣ

ಡಾ. ಸಿ. ವೀರಣ್ಣಅವರು ಸಂಶೋಧಕ, ಸಾಮಾಜಿಕ ಚಿಂತಕ. 1942 ಜೂನ್ 15ರಂದು ಜನನ. ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಎಂ.ಎ ಪದವಿಯನ್ನು ಪಡೆದಿರುವ ಅವರು ಐಚ್ಛಿಕ ಕನ್ನಡದಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ(1967) ಅತಿಹೆಚ್ಚು ಅಂಕಗಳಿಸಿ ”ಪ್ರೊ.ಎ.ಆರ್.ಕೃಷ್ಣಶಾಸ್ತ್ರೀ ಸ್ಮಾರಕ ಸುವರ್ಣ ಪದಕವನ್ನು ಪಡೆದಿರುತ್ತಾರೆ. ಹಂಪಾ ನಾಗರಜಯ್ಯ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ಕಾವ್ಯ ಕಂಡ ಹೆಣ್ಣು’ ಪ್ರಬಂಧ ಮಂಡಿಸಿ ಪಿ.ಎಚ್.ಡಿ ಪದವಿಯನ್ನು ಪಡೆದಿರುತ್ತಾರೆ. ತಮ್ಮ ಅಧ್ಯಾಪಕ ವೃತ್ತಿ ಜೀವನವನ್ನು ಆಚಾರ್ಯ ಪದವಿ ಕಾಲೇಜಿನಲ್ಲಿಆರಂಭಿಸಿದ ಅವರು, ಎರಡು ವರ್ಷಗಳ ನಂತರ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ 'ಡಾ.ಜಿ.ಎಸ್.ಶಿವರುದ್ರಪ್ಪ ಅವರ ಕನ್ನಡ ಅಧ್ಯಯನ ಕೇಂದ್ರ'ದಲ್ಲಿ ಸಂಶೋಧನಾ ಸಹಾಯಕರಾಗಿ ...

READ MORE

Related Books