ಅಂಜು ಮಲ್ಲಿಗೆ

Author : ಗಿರೀಶ ಕಾರ್ನಾಡ

Pages 92

₹ 80.00




Year of Publication: 2010
Published by: ಮನೋಹರ ಗ್ರಂಥ ಮಾಲಾ
Address: ಲಕ್ಷ್ಮಿ ಭವನ, ಸುಭಾಸ ರಸ್ತೆ, ಧಾರವಾಡ-1
Phone: 98454 47002

Synopsys

ಗಿರೀಶ ಕಾರ್ನಾಡ ಅವರು ಐತಿಹಾಸಿಕ-ಪೌರಾಣಿಕ ಕತೆಗಳನ್ನು ಆಧರಿಸಿ ನಾಟಕ ಬರೆಯುತ್ತಾರೆ ಎಂಬ ಆರೋಪ ಸರ್ವೇಸಾಮಾನ್ಯ. ಕಾರ್ನಾಡರ ’ಅಂಜುಮಲ್ಲಿಗೆ’ ಅದಕ್ಕೆ ಅಪವಾದದಂತಿದೆ. ಇದೊಂದು ಸಾಮಾಜಿಕ ಕಥಾವಸ್ತು ಉಳ್ಳ ನಾಟಕ. ನಾಟಕೀಯ ಅಂಶಗಳು ಈ ಕೃತಿಯಲ್ಲಿ ಇವೆ. ಆದರೆ, ರಂಗದ ಮೇಲೆ ಮಾತ್ರ ಈ ನಾಟಕ ಯಶಸ್ಸು ಕಾಣಲಿಲ್ಲ. ಓದು ನಾಟಕವಾಗಿ ಪ್ರಿಯವಾಗುತ್ತದೆಯಾದರೂ ಗಾಢವಾಗಿ ತಟ್ಟುವುದಿಲ್ಲ.

ಮಾಸ್ಟರ್‌ ಕ್ರಾಫ್ಟಮನ್ ಅವರ ಸಾಧಾರಣ ಅನ್ನಿಸುವ ವಿಭಿನ್ನ ಪ್ರಯತ್ನ ಈ ನಾಟಕದಲ್ಲಿದೆ. ಯಮ-ಯಮಿಯರ ಕತೆಯನ್ನು ಹೋಲುವ ಈ ನಾಟಕ ಆಧುನಿಕ ಮನೋಭಾವದ ಕನ್ನಡಿಯಂತಿದೆ. ಇದು ಕಾರ್ನಾಡ ಅವರ ವಿಭಿನ್ನ ಪ್ರಯತ್ನ.

About the Author

ಗಿರೀಶ ಕಾರ್ನಾಡ
(19 May 1934 - 10 June 2019)

ನಾಟಕಕಾರ ಗಿರೀಶ್ ಕಾರ್ನಾಡ್ ಅವರು  ರಂಗಭೂಮಿ- ಚಲನಚಿತ್ರ ನಟರಾಗಿ, ನಿರ್ದೇಶಕರಾಗಿ,  ಸಂಗೀತ- ನಾಟಕ ಅಕಾಡೆಮಿಗಳ ಅಧ್ಯಕ್ಷರಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾಗಿದ್ದಾರೆ. ಕತೆ, ವಿಮರ್ಶೆ ಮತ್ತು ತಮ್ಮ ಆತ್ಮಕತೆ ‘ಆಡಾಡತ ಆಯುಷ್ಯ’ಗಳನ್ನು ಬರೆದಿದ್ದರೂ ನಾಟಕಕಾರ ಎಂದೇ ಚಿರಪರಿಚಿತರು. ಗಿರೀಶ್ 1934ರ ಮೇ 19ರಂದು ಮಹಾರಾಷ್ಟ್ರದ ಮಾಥೇರದಲ್ಲಿ ಜನಿಸಿದರು. ಉತ್ತರಕನ್ನಡದ ಶಿರಸಿಯಲ್ಲಿ ಪ್ರಾಥಮಿ ಶಿಕ್ಷಣ ಧಾರವಾಡದ  ಬಾಸೆಲ್ ಮಿಶನ್ ಪ್ರೌಢಶಿಕ್ಷಣ, ಹಾಗೂ ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣ  ಪಡೆದ ಬಳಿಕ ಪ್ರತಿಷ್ಠಿತ ರೋಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್ ಫರ್ಡಿನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದರು.  ಆಕ್ಸ್ ಫರ್ಡಿನ ಡಿಬೇಟ್ ಕ್ಲಬ್ಬಿಗೆ ಅಧ್ಯಕ್ಷರಾಗಿ ಆಯ್ಕೆಯಾದ ...

READ MORE

Related Books