ಅಸಮಾಧಾನದಿಂದ ಸಮಾಧಾನದ ಕಡೆಗೆ

Author : ಸಿ.ಆರ್. ಚಂದ್ರಶೇಖರ್

Pages 160

₹ 120.00




Year of Publication: 2020
Published by: ವಸಂತ ಪ್ರಕಾಶನ
Address: #360, 10 ನೇ ʼಬಿʼ ಮುಖ್ಯರಸ್ತೆ, 3ನೇ ಬ್ಲಾಕ್, ಜಯನಗರ ಬೆಂಗಳೂರು 560011

Synopsys

ಲೇಖಕ ಸಿ. ಆರ್‌ ಚಂದ್ರಶೇಖರ್‌ ಅವರ ʼಅಸಮಾಧಾನದಿಂದ ಸಮಾಧಾನದ ಕಡೆಗೆʼ ಕೃತಿಯು ಮನಸ್ಸಿನ ತುಮುಲಗಳನ್ನು ನಿವಾರಿಸಿಕೊಳ್ಳುವ ಅಂಶವನ್ನೊಳಗೊಂಡಿದೆ. ಮನಸ್ಸು ಸಮಾಧಾನದಿಂದ ಇದ್ದರೆ ನಮಗೆ ಆನಂದ ಮತ್ತು ಆರೋಗ್ಯ. ಅಸಮಾಧಾನವಿದ್ದರೆ ಆನಂದವಿಲ್ಲ, ಆರೋಗ್ಯವು ಇರುವುದಿಲ್ಲ. ಮನಸ್ಸಿನಲ್ಲಿ ತುಮುಲಗಳು ಹೆಚ್ಚಾದಾಗ ಭಯ, ದುಃಖ, ಸಿಟ್ಟು ನಮ್ಮನ್ನು ಆವರಿಸಿಕೊಳ್ಳುತ್ತವೆ. ನಮ್ಮ ಶಕ್ತಿ ಸಾಮರ್ಥ್ಯಗಳು ಕಡಿಮೆಯಾಗುತ್ತವೆ. ಆಹಾರ ಸೇವನೆ, ನಿದ್ರೆ, ಮೈಥುನಗಳು ಏರುಪೇರಾಗುತ್ತವೆ. ನಮ್ಮ ರೋಗನಿರೋಧಕ ಶಕ್ತಿ, ಕುಗ್ಗಿ, ರೋಗಾಣುಗಳ ದಾಳಿಗೆ ಶರೀರ ಒಳಗಾಗುತ್ತದೆ. ಅಸಮಾಧಾನಕ್ಕೆ ಕಾರಣಗಳು ಹಲವಾರು ಆಗಿದ್ದು, ಇದರಿಂದ ಗುರಿ ಸಾಧನೆಗಳಿಗೆ ತೊಡಕಾಗುತ್ತದೆ, ಒಂಟಿತನದ ಭಾವನೆ ದಟ್ಟವಾಗಿ ಬೆಳೆದು ಕಾಡುವ ಕಾಯಿಲೆಗೆ ಸೂಕ್ತ ಚಿಕಿತ್ಸೆ ದೊರೆಯುವುದಿಲ್ಲ ಎಂಬ ವಿಚಾರಗಳನ್ನು ಕೃತಿಯಲ್ಲಿ ವಿವರಿಸಲಾಗಿದೆ. ಈ ಅಸಮಾಧಾನದಿಂದ ಹೊರಬರುವುದು ಹೇಗೆ? ಸಮಾಧಾನ ಚಿತ್ತರಾಗುವುದು ಹೇಗೆ? ಎಂಬುದನ್ನು ಅರಿತುಕೊಳ್ಳಲು ಈ ಕೃತಿಯು ಸಹಾಯಕವಾಗುತ್ತದೆ ಎಂಬುದು ಲೇಖಕರ ಅಭಿಪ್ರಾಯವಾಗಿದೆ.

About the Author

ಸಿ.ಆರ್. ಚಂದ್ರಶೇಖರ್
(12 December 1948)

ಡಾ. ಸಿ.ಆರ್. ಚಂದ್ರಶೇಖರ್  ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ,  ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು  ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...

READ MORE

Related Books