ಶಾಲಾಮಕ್ಕಳ ಪೋಷಕರಿಗೆ ಕಿವಿಮಾತು

Author : ಶಾಂತಾ ನಾಗರಾಜ್

Pages 128

₹ 70.00




Year of Publication: 2011
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ ಬಳಿ, ಕುಮಾರಪಾರ್ಕ್ ಪೂರ್ವ, ಬೆಂಗಳೂರು-560001
Phone: 0802216 1900

Synopsys

ಲೇಖಕಿ ಶಾಂತಾ ನಾಗರಾಜ್ ಅವರು ಮಕ್ಕಳ ಪೋಷಕರಿಗಾಗಿ ಬರೆದ ಕೃತಿ-ಶಾಲಾ ಮಕ್ಕಳ ಪೋಷಕರಿಗೆ ಕಿವಿ ಮಾತು. ವ್ಯಕ್ತಿತ್ವ ವಿಕಸನಮಾಲೆಯಡಿ ಈ ಕೃತಿ ಪ್ರಕಟಿಸಿದೆ. ಕೃತಿಯ ಸಂಪಾದಕರು-ಡಾ. ಸಿ.ಆರ್. ಚಂದ್ರಶೇಖರ. ಮಕ್ಕಳನ್ನು ಹೆರುವುದು ಮಾತ್ರವಲ್ಲ; ಪೋಷಕರು ಅವರನ್ನು ಬೆಳೆಸುವ ರೀತಿಯ ಬಗ್ಗೆ ತಿಳಿದಿರಬೇಕು. ಮಕ್ಕಳ ಅಗತ್ಯಗಳನ್ನು ಪೂರೈಸಬೇಕು. ಆಗಲೇ, ತಂದೆ-ತಾಯಿ-ಪೋಷಕರ ಹೊಣೆಗಾರಿಕೆ ನಿರ್ವಹಿಸಿದಂತೆ ಆಗುತ್ತದೆ. ಮಕ್ಕಳ ಮನಸ್ಸನ್ನು ಅರಿಯುವುದು ಮೊದಲ ಹೊಣೆಗಾರಿಕೆ. ಅವರ ಮನಸ್ಸಿನ ಮೇಲೆ ನಮ್ಮತನವನ್ನು ಹೇರಬಾರದು. ಮಾನಸಿಕವಾಗಿ ಮಕ್ಕಳು ಕುಗ್ಗುತ್ತಾರೆ. ತಮ್ಮ ಆಂತರಿಕ ಸಾಮಾರ್ಥ್ಯವನ್ನು ತಿಳಿಯುವಲ್ಲಿ ಕಷ್ಟ-ಭೀತಿ-ಆತಂಕವನ್ನು ಎದುರಿಸುತ್ತವೆ. ಆದ್ದರಿಂದ, ಪೋಷಕರು ಮೊದಲು ಮಕ್ಕಳಿಗೆ ಅವರ ಸಾಮರ್ಥ್ಯ-ದೌರ್ಬಲ್ಯಗಳನ್ನು ತಿಳಿಸಬೇಕು ಇತ್ಯಾದಿ ಅಂಶಗಳು ಸಲಹೆ ರೂಪದಲ್ಲಿ ಒಳಗೊಂಡ ಕೃತಿ ಇದು.

About the Author

ಶಾಂತಾ ನಾಗರಾಜ್
(10 October 1943)

ಹಿರಿಯ ಲೇಖಕಿ ಶಾಂತಾ ನಾಗರಾಜ್ ಅವರು ಎಂ..ಎ. (ಕನ್ನಡ) ಪದವೀಧರರು. ತಂದೆ ಎಸ್.ವಿ. ಹರಿದಾಸ್, ತಾಯಿ ಸೀತಾಬಾಯಿ. ವೃತ್ತಿಯಲ್ಲಿ ಉಪನ್ಯಾಸಕರು. ಆಪ್ತ ಸಲಹೆಗಾರರೂ ಆಗಿದ್ದಾರೆ.  ಕೃತಿಗಳು: ನೀವು ಯಶಸ್ವಿ ಗೃಹಿಣಿಯೆ?, ಶಾಲಾ ಮಕ್ಕಳ ಪೋಷಕರಿಗೆ ಕಿವಿಮಾತು (2017), ದುಗುಡ ಕಳೆಯುವ ಮಾರ್ಗ(2009) ವ್ಯಕ್ತಿವಿಕಸನ ಮಾಲೆಯ ಕೃತಿಗಳು.. ಕಿತ್ತು ತಿನ್ನುವ ಮುಪ್ಪು (1989) ಕಾದಂಬರಿ, ಬಾಲಾಪರಾಧಿಗಳು (1984), ಸ್ವಉದ್ಯೋಗ ತೆರೆದ ಹೆಬ್ಬಾಗಿಲು ಕವನ ಸಂಕಲನ ಪ್ರಕಟಿಸಿದ್ದಾರೆ. ಡಾಲರ್ ಹಕ್ಕಿ (2002) ಪ್ರವಾಸ ಕಥನ ಮತ್ತು ಯಾನ ಸಂಸ್ಕತಿ ಇವರ ಕಥಾಸಂಕಲನ. ಪಟ್ಟದಗೊಂಬೆಯೂ ಪರದೇಶವೂ (2009)ರಲ್ಲಿ,  ಭಾಷಾಂತರ (ಇತರರೊಂದಿಗೆ): ಅಭಿವೃದ್ಧಿ ಆಳಿಕೆ ಮತ್ತು ಮಾನವೀಯ ಮೌಲ್ಯಗಳು, ರೆಕ್ಕೆಯ ...

READ MORE

Related Books