ವಿದ್ಯಾರ್ಥಿ ರ್‍ಯಾಂಕ್ ಗಳಿಸಬೇಕೆ? ಜ್ಞಾನ-ಕೌಶಲಗಳನ್ನು ಸಂಪಾದಿಸಬೇಕೆ?

Author : ಸಿ.ಆರ್. ಚಂದ್ರಶೇಖರ್

Pages 80

₹ 54.00




Year of Publication: 2020
Published by: ಸಪ್ನ ಬುಕ್ ಹೌಸ್
Address: ಗಾಂಧಿನಗರ, ಬೆಂಗಳೂರು

Synopsys

ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರು ಬರೆದ ಕೃತಿ-ವಿದ್ಯಾರ್ಥಿ ರ್‍ಯಾಂಕ್ ಗಳಿಸಬೇಕೇ? ಜ್ಞಾನ ಸಂಪಾದಿಸಬೇಕೇ?. ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯನ್ನು ಅವರು ಪಡೆಯುವ ಅಂಕಗಳಿಂದ ನಿರ್ಧರಿಸುತ್ತಿದ್ದೇವೆ. ಆದರೆ, ಪ್ರಕ್ರಿಯೆ ವಿದ್ಯಾರ್ಥಿಯ ಪ್ರತಿಭೆಯನ್ನು ತಿಳಿಯಲು ಅವಕಾಶವೇ ನೀಡದು. ಆತನಿಗೆ ಯಾವ ವಿಷಯದಲ್ಲಿ ಆಸಕ್ತಿ ಇದೆ ಎಂಬುದನ್ನು ತಿಳಿಯಲು ಪಾಲಕರು ವಿಫಲರಾಗುತ್ತಾರೆ. ಕಡಿಮೆ ಅಂಕ ಗಳಿಸಿದರೆ ವಿದ್ಯಾರ್ಥಿ ದಡ್ಡ ಎಂಬ ನಿಧಾರ ಸರಿಯಲ್ಲ. ಬುದ್ದಿವಂತಿಕೆಯಲ್ಲಿ ಪ್ರತಿಯೊಂದು ಮಗುವು ತನ್ನ ವಿಭಿನ್ನತೆಯಿಂದ ಪ್ರತ್ಯೇಕವಾಗಿ, ವಿಶಿಷ್ಟವಾಗಿ ಗುಣಧರ್ಮಗಳನ್ನು ಹೊಂದಿರುತ್ತದೆ. ಪಾಲಕರು ಈ ವಿಭಿನ್ನತೆಯನ್ನು ಪರಿಗಣಿಸಬೇಕು. ಜ್ಞಾನಾರ್ಜನೆಗಾಗಿ ಮಾತ್ರ ಶಿಕ್ಷಣವಿದೆ. ಕೇವಲ ಅಂಕ ಗಳಿಸಲು ಅಲ್ಲ. ವಿದ್ಯಾರ್ಥಿಗಳ ಆಸಕ್ತಿ-ಪ್ರತಿಭೆ ಆಧರಿಸಿ ಅವರಿಗೆ ಶಿಕ್ಷಣ ನೀಡಬೇಕು ಎಂಬುದರ ಮಾಹಿತಿಯು ಈ ಕೃತಿ ಒಳಗೊಂಡಿದೆ.

About the Author

ಸಿ.ಆರ್. ಚಂದ್ರಶೇಖರ್
(12 December 1948)

ಡಾ. ಸಿ.ಆರ್. ಚಂದ್ರಶೇಖರ್  ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ,  ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು  ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...

READ MORE

Related Books