ಬಾಳಿನ ಗುಟ್ಟು

Author : ಗೌರೀಶ ಕಾಯ್ಕಿಣಿ

Pages 204

₹ 1.00




Year of Publication: 1950
Published by: ಕನ್ನಡ ಸರಸ್ವತಿ ಭಾಂಡಾಗಾರ
Address: ಧಾರವಾಡ

Synopsys

ಲೇಖಕ ಗೌರೀಶ ಕಾಯ್ಕಿಣಿ ಅವರು ಬರೆದ ಕೃತಿ-ಬಾಳಿನ ಗುಟ್ಟು. ಬಾಳ್ವೆ ಮಾಡಲು ಸಂಸ್ಕಾರ ಬೇಕು. ಇಲ್ಲದಿದ್ದರೆ ಬಾಳ್ವೆ ಹದಗೆಡುತ್ತದೆ. ಜೀವನದ ಅರ್ಥ ತಿಳಿದು ಮತ್ತು ತಿಳಿಯದೇ ಬದುಕುವವರಿಗೂ ಇರುವ ವ್ಯತ್ಯಾಸವೆಂದರೆ -ಅರಿವು. ಈ ತಿಳಿವಳಿಕೆಯು ಬಾಳಿಗೆ ಬೆಳಕು ನೀಡುತ್ತದೆ. ಅಲ್ ಫ್ರೈಡ್ ಎಡ್ಲರ್ ಅವರ ‘ ಸೈನ್ಸ್ ಆಫ್ ಲಿವಿಂಗ್’ ಎಂಬ ಗ್ರಂಥದ ಅನುವಾದವಿದು. ವಿಚಾರಪೂರ್ಣವಾದ ದೀರ್ಘ ಬರೆಹವಿದು. ಅಲ್ ಫ್ರೈಡ್ ಎಡ್ಲರ್ ಹೇಳಿರುವ ಇಲ್ಲಿಯ ಯಾವ ವಿಚಾರಗಳೂ ಹೊಸತಲ್ಲ. ಆದರೆ, ತಿಳಿದೂ ನಾವು ಆಚಾರಿಸಿದ್ದೇವೆಯೇ? ಎಂಬುದು ಪ್ರಶ್ನೆ. ಈ ಹಿನ್ನೆಲೆಯಲ್ಲಿ ಬಾಳಿನ ಗುಟ್ಟು ಅತ್ಯಂತ ಮಹತ್ವದ ಗ್ರಂಥ ಎಂದು ಮುನ್ನುಡಿ ಬರೆದ ಸಂಸ್ಕೃತಿ ಸಂಶೋಧಕ ಶಂ.ಬಾ. ಜೋಶಿ ಅವರು ಪ್ರಶಂಸಿಸಿದ್ದಾರೆ.

About the Author

ಗೌರೀಶ ಕಾಯ್ಕಿಣಿ
(12 September 1912 - 14 November 2002)

ಸಾಹಿತಿ ಗೌರೀಶ್‌ ಕಾಯ್ಕಿಣಿ ಅವರು 1912 ಸೆಪ್ಟೆಂಬರ್‌ 12ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು. ತಂದೆ ವಿಠಲರಾವ್ ತಹಸೀಲ್ದಾರರು, ತಾಯಿ ಸೀರಾಬಾಯಿ. ಗೌರೀಶ ಹುಟ್ಟಿದ ಮೂರು ತಿಂಗಳಲ್ಲಿ ತಂದೆ ತೀರಿಕೊಂಡರು.  ಗೋಕರ್ಣ, ಕುಮುಟಾ ಹಾಗೂ ಧಾರವಾಡದಲ್ಲಿ ಶಿಕ್ಷಣ ಪಡೆದು, ಮುಂದಿನ ಶಿಕ಼್ಣ ಕುಮಟಾ ಹಾಗೂ ಧಾರವಾಡದಲ್ಲಿ ಮುಂದುವರಿಯಿತು.  ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ ಮುಂಬಯಿ ಪ್ರಾಂತ್ಯಕ್ಕೆ ಪ್ರಥಮರಾಗಿ ತೇರ್ಗಡೆಯಾದರು. ಅವರು ಹಿಂದಿಯಲ್ಲಿ ವಿಶಾರದರೂ ಆಗಿದ್ದರು.  ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ನಾಲ್ಕು ದಶಕಗಳ ಕಾಲ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಗೌರೀಶರು 1930ರಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡರು. ’ಶಾಂಡಿಲ್ಯ ಪ್ರೇಮಸುಧಾ’ ಕನ್ನಡ ಹಾಗೂ ಮರಾಠಿ ...

READ MORE

Related Books