ನೆನಪಿಗೊಂದು ಕೌನ್ಸೆಲಿಂಗ್

Author : ಗಂಗಾಧರ ಬೆಳ್ಳಾರೆ

Pages 96

₹ 45.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580

Synopsys

ಗಂಗಾಧರ ಬೆಳ್ಳಾರೆ ಅವರು ಬರೆದ ಕೃತಿ-ನೆನಪಿಗೊಂದು ಕೌನ್ಸೆಲಿಂಗ್. ನೆನಪು ಹಾಗೂ ಮರೆವು -ನೈಜ ಅರ್ಥದಲ್ಲಿ ವರವೇ ಆಗಿವೆ. ಕೆಲವೊಂದು ಸಂಗತಿಗಳನ್ನು ಮರೆಯುವುದರಿಂದ ಲಾಭವುಂಟು ಮತ್ತು ಕೆಲವೊಂದು ಸಂಗತಿಗಳನ್ನು ನೆನಪಿಟ್ಟುಕೊಳ್ಳುವುದರಿಂದ ಹಾನಿಯೂ ಉಂಟು. ಆದ್ದರಿಂದ, ಮನಸ್ಸಿನ ನೆಮ್ಮದಿ ಹಾಳು ಮಾಡುವ ಯಾವುದೇ ನೆನಪುಗಳನ್ನು ನೆನಪಿನಲ್ಲಿರಿಸಿಕೊಳ್ಳಬಾರದು. ಅವುಗಳನ್ನು ಮರೆತು ಬಿಡಬೇಕು ಕೆಲವೊಂದು ನೆನಪುಗಳನ್ನು ಸದಾ ಸ್ಮರಿಸಿಕೊಳ್ಳುತ್ತಲೇ ಇರಬೇಕು. ಎಲ್ಲರಿಗೂ ಈ ರೀತಿ ಮಾಡುವುದು ಸಾಧ್ಯವಾಗದು. ಆದ್ದರಿಂದ, ಅವರಿಗೆ ಆಪ್ತ ಸಮಾಲೋಚನೆ (ಕೌನ್ಸೆಲಿಂಗ್) ಅಗತ್ಯ. ಈ ಹಿನ್ನೆಲೆಯಲ್ಲಿ ನೆನಪಿಗೊಂದು ಕೌನ್ಸೆಲಿಂಗ್ ಕೃತಿ ಹೊಸ ಹೊಳವುಗಳನ್ನು ನೀಡುತ್ತದೆ. ಈ ಕೃತಿಗೆ ಅಕಲಂಕ ಪ್ರತಿಷ್ಠಾನದ ‘ಅಕಲಂಕ ಪುಸ್ತಕ ಪುರಸ್ಕಾರ’ (2009) ದೊರೆತಿದೆ.

About the Author

ಗಂಗಾಧರ ಬೆಳ್ಳಾರೆ

ಆಪ್ತಸಲಹೆಗಾರ, ಮನೋವಿಜ್ಞಾನಿ ಹಾಗೂ ಸಾಹಿತಿಯಾಗಿರುವ  ಗಂಗಾಧರ ಬೆಳ್ಳಾರೆ ಹುಟ್ಟಿದ್ದು 1965ರಲ್ಲಿ. ಮನೋವಿಜ್ಞಾನ ವ್ಯಾಸಂಗದೊಂದಿಗೆ ಪದವಿ ಹಾಗೂ ಕೌನ್ಸೆಲಿಂಗ್ ಮತ್ತು ಸೈಕೋಥೆರಪಿಯಲ್ಲಿ ಸ್ನಾತಕೋತ್ತರ ಪದವೀಧರರು. ಯಕ್ಷಗಾನ ಕಲಾವಿದ, ಮೃದಂಗವಾದಕ, ಮೇಕಪ್‌ ಕಲಾವಿದ, ನೃತ್ಯರೂಪಕ ಹಾಗೂ ನಾಟಕಗಳ ಕಲಾವಿದರಾಗಿಯೂ ಪ್ರಸಿದ್ಧರು. ಸೈಕೋಥೆರಪಿ, ಗ್ರೂಪ್ ಕೌನ್ಸೆಲಿಂಗ್, ಕ್ಲಿನಿಕಲ್ ಹಿಪ್ನೋಸಿಸ್ ಚಿಕಿತ್ಸಕರು.  ‘ಚಿಲಿಪಿಲಿ, ಗಾಜಿನ ತೇರು, ತಬ್ಬಲಿಯು ನೀನಲ್ಲ ಮಗಳೆ, ಕಲಿಕೆ ಹಾದಿಯ ಮಗು, ಕನಸು ಹೆಕ್ಕುವ ಮನಸು, ಇವರು ನೀವಲ್ಲ, ತಪ್ಪು ತಿದ್ದುವ ತಪ್ಪು, ಮೌನಗರ್ಭ’ ಅವರ ಕೃತಿಗಳು. ‘ನೆನಪಿಗೊಂದು ಕೌನ್ಸೆಲಿಂಗ್’ ಕೃತಿಗೆ ‘ಅಕಲಂಕ ಪುಸ್ತಕ ಪುರಸ್ಕಾರ ಪ್ರಶಸ್ತಿ’ ದೊರೆತಿದೆ.  ...

READ MORE

Related Books