ಹಿಂಸೆ ದೌರ್ಜನ್ಯಕ್ಕೊಳಗಾದ ಮಕ್ಕಳ ಮನೋವಿಕಾಸ

Author : ಕೆ.ಎಸ್.ಶುಭ್ರತಾ

Pages 116

₹ 50.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರ ಪಾರ್ಕ್ (ಪೂರ್ವ), ಬೆಂಗಳೂರು-560001
Phone: 0802216 1900

Synopsys

ಲೇಖಕಿ ಡಾ. ಕೆ.ಎಸ್. ಶುಭ್ರತಾ ಅವರ ಮನೋ ವೈಜ್ಞಾನಿಕ ಕೃತಿ-ಹಿಂಸೆ ದೌರ್ಜನ್ಯಕ್ಕೊಳಗಾದ ಮಕ್ಕಳ ಮನೋವಿಕಾಸ. ಅಪಾಯ ಎಂದಾಗ ಅದು ಸಾವಿರಬಹುದು, ವಿವಿಧ ರೀತಿಯ ದೌರ್ಜನ್ಯವಿರಬಹುದು, ಹಿಂಸೆ ಇರಬಹುದು. ವಿಶ್ವದಾದ್ಯಂತ ಪ್ರತೀ ವರ್ಷ ಮಿಲಿಯನ್‌ಗಟ್ಟಲೆ ಮಕ್ಕಳು ದೌರ್ಜನ್ಯಕ್ಕೆ-ಹಿಂಸೆಗೆ ಬಲಿಯಾಗುತ್ತಿದ್ದಾರೆ. ಮಕ್ಕಳನ್ನು ಕೇಂದ್ರೀಕರಿಸಿ ಇಂತಹ ಸಂಗತಿಗಳ ಕುರಿತು ಬರೆದಿರುವ ಈ ಕೃತಿಯು ಮಕ್ಕಳು ಸಮಾಜದಲ್ಲಿ, ಕುಟುಂಬದಲ್ಲಿ ದೌರ್ಜನ್ಯಕ್ಕೆ ಒಳಗಾಗಿ ನರಳುತ್ತಿರುವ ಕುರಿತು ಮನೋವೈಜ್ಞಾನಿಕ ಲೇಖನಗಳಿವೆ. ನಾಳಿನ ಭವಿಷ್ಯದ ಪ್ರಜೆಗಳಾಗಬೇಕಾದ ಮಕ್ಕಳು ದೌರ್ಜನ್ಯಕ್ಕೆ ಒಳಗಾಗಿ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಇಂತಹ ಘಟನೆಗಳು ಆಗದಂತೆ ಎಚ್ಚರಿಸುವತ್ತ ಈ ಕೃತಿಯು ತನ್ನದೇ ರೀತಿಯಲ್ಲಿ ಸಾಮಾಜಿಕ ಹೊಣೆಗಾರಿಕೆ ಮೆರೆದಿದೆ. ಈ ಕೃತಿಯು ದ. ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ (2014-15) ಟ್ರಸ್ಟ್, ಧಾರವಾಡ `ಬೇಂದ್ರೆ ಗ್ರಂಥ ಬಹುಮಾನ`ಪ್ರಶಸ್ತಿ ಪಡೆದಿದೆ.

About the Author

ಕೆ.ಎಸ್.ಶುಭ್ರತಾ

ಕೆ.ಎಸ್. ಶುಭ್ರತಾ ಅವರು ಮನೋವೈದ್ಯರು. ಶಿವಮೊಗ್ಗದಲ್ಲಿ ವೃತ್ತಿನಿರತರು. ಕೃತಿಗಳು: ಮನೋ-ದೈಹಿಕ ರೋಗವೆಂದರೇನು ಗೊತ್ತಾ?, ಹಿಂಸೆ ದೌರ್ಜನ್ಯಕ್ಕೊಳಗಾದ ಮಕ್ಕಳ ಮನೋವಿಕಾಸ ಇತ್ಯಾದಿ  ಕ್ಷೇಮಾ ಟ್ರಸ್ಟ್ ನ ವ್ಯವಸ್ಥಾಪಕ ಧರ್ಮದರ್ಶಿಯೂ ಆಗಿದ್ದಾರೆ. ವಿಶ್ವ ಬಯಾಲಜಿಕಲ್ ಸೈಕಿಯಾಟ್ರಿ ಸಂಸ್ಥೆಯಿಂದ 2019ನೇ ಸಾಲಿನ ಯುವ ಸಂಶೋಧಕಿ ಎಂಬ ಅಂತಾರಾಷ್ಟ್ರೀಯ ಪ್ರಶಸ್ತಿ ದೊರೆತಿದೆ. ...

READ MORE

Related Books