
ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರ ಕೃತಿ-ಜೀವನ ಕ್ರಮ ಜೀವನ ಮೌಲ್ಯಗಳು. ಜೀವನಕ್ಕೆ ನಿರ್ದಿಷ್ಟ ಕ್ರಮ ಇಲ್ಲದಿದ್ದರೆ ಅದು ಹಾಳಾಗುತ್ತದೆ. ಜೀವನಕ್ಕೆ ಮೌಲ್ಯಗಳು ಸ್ಪರ್ಶ ನೀಡದಿದ್ದರೆ ಅಂದರೆ ಮೌಲ್ಯಾಧಾರಿತ ಬದುಕು ಇರದಿದ್ದರೆ ಅದು ಬದಕೇ ಅಲ್ಲ ಎನ್ನಿಸುವಷ್ಟರ ಮಟ್ಟಿಗೆ ನಿಸ್ಸಾರವಾಗುತ್ತದೆ. ಅದಕ್ಕಾಗಿ ಜೀವನಕ್ಕೆ ನಿರ್ದಿಷ್ಟ ಕ್ರಮದ ಹಾಗೂ ಮೌಲ್ಯಗಳ ಅಗತ್ಯವಿದೆ. ಉತ್ತಮ ಬದುಕಿಗೆ ಈ ಎರಡೂ ಅಂಶಗಳ ಅಳವಡಿಕೆ ಅನಿವಾರ್ಯ. ಈ ಹಿನ್ನೆಲೆಯಲ್ಲಿ, ಲೇಖಕರು ಮನೋವೈಜ್ಞಾನಿಕವಾಗಿ ಚರ್ಚಿಸಿದ ಚಿಂತನೆಗಳು ಈ ಕೃತಿಯಲ್ಲಿವೆ.
©2025 Book Brahma Private Limited.