ಬಾಪೂ ನಂತರದ ಭಾರತ

Author : ಜಿ.ಎನ್. ರಂಗನಾಥ ರಾವ್

Pages 514

₹ 290.00




Year of Publication: 2010
Published by: ವಸಂತ ಪ್ರಕಾಶನ
Address: # 360, 10 ನೇ ’ ಬಿ’ ಮುಖ್ಯರಸ್ತೆ, 3 ನೇ ಬ್ಲಾಕ್ ಜಯನಗರ, ಬೆಂಗಳೂರು- 560011
Phone: 08022443996

Synopsys

ಹಿರಿಯ ಲೇಖಕ-ಸಾಹಿತಿ-ಅನುವಾದಕ ಜಿ.ಎನ್ ರಂಗನಾಥ ರಾವ್ ಅವರು ಅನುವಾದಿಸಿದ ಕೃತಿ- ’ ಬಾಪೂ ನಂತರದ ಭಾರತ ’. ಮೂಲ ಕೃತಿಯನ್ನು ಲೇಖಕ ರಾಮಚಂದ್ರ ಗುಹ ಅವರು ಇಂಗ್ಲಿಷಿನಲ್ಲಿ ರಚಿಸಿದ್ದಾರೆ. ಈ ಕೃತಿಯು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಅಪೂರ್ವ ಇತಿಹಾಸವಾಗಿದೆ. ಮೈ ಜುಂ ಎನ್ನಿಸುವ ಕಥಾನಕ. ಗತಕಾಲದಲ್ಲಿ ಓದುಗರನ್ನು ಮುಳುಗಿಸಿ ವರ್ತಮಾನದಲ್ಲಿ ತೇಲಿಸುವ ಈ ಕಥಾನಕದಲ್ಲಿ ಸ್ವಾತಂತ್ಯ್ರೊತ್ತರ ಭಾರತದ ಅರವತ್ತೈದು ವರ್ಷಗಳ ಜ್ವಲಂತ ಚಿತ್ರಣವಿದೆ. ಸ್ವಾತಂತ್ಯ್ರದ ಸಂಭ್ರಮ, ವಿಭಜನೆಯ ನೋವು, ರಾಜಮಹಾರಾಜರ ತಂಟೆ -ತಕರಾರು, ಈಶಾನ್ಯದಲ್ಲಿ ಸಿಡಿದ ಕಿಡಿಗಳು, ಕಾಶ್ಮೀರದ ತವಕ ತಲ್ಲಣಗಳು , ತುರ್ತು ಪರಿಸ್ಥಿತಿಯ ಅತಿರೇಕಗಳು, ಪಕ್ಷ ರಾಜಕೀಯ, ಅಭಿವೃದ್ಧಿಯ ಆಯಾಮಗಳು, ಆರ್ಥಿಕ ಪ್ರಗತಿ, ಜನ ಸಾಮಾನ್ಯರ ದಿನಮಾರ್ದನಿಗಳು, ದುಃಖ-ದುಮ್ಮಾನಗಳು ಇವೆಲ್ಲವೂ ಒಳಗೊಂಡಿವೆ. ಜೊತೆಗೆ, ಗಾಂಧೀಜಿ, ನೆಹರು, ಪಟೇಲ್, ಅಂಬೇಡ್ಕರ್, ಜಿನ್ನಾ, ಮುರಾರ್ಜಿ , ಶಾಸ್ತ್ರಿ, ಜೆಪಿ, ಇಂದಿರಾ ಗಾಂಧಿ, ಚರಣ್ ಸಿಂಗ್.. ಹೀಗೆ ತಮ್ಮ ವರ್ಚಸ್ಸಿನಿಂದ , ಸಾಧನೆಗಳಿಂದ ಇತಿಹಾಸ ನಿರ್ಮಿಸಿದವರೆಲ್ಲರೂ ಈ ಕಥಾನಕದಲ್ಲಿದ್ದಾರೆ.

About the Author

ಜಿ.ಎನ್. ರಂಗನಾಥ ರಾವ್
(12 January 1942 - 09 October 2023)

ನಾಡಿನ ಖ್ಯಾತ ಪತ್ರಕರ್ತ, ಹಿರಿಯ ಲೇಖಕ ಜಿ.ಎನ್.ರಂಗನಾಥ ರಾವ್ ಮೂಲತಃ ಬೆಂಗಳೂರಿನ ಹಾರೋಹಳ್ಳಿಯವರು. 1942 ರಲ್ಲಿ ಜನಿಸಿದ ಅವರು, ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಮೈಲಿಗಲ್ಲುಗಳನ್ನು ನಿರ್ಮಿಸಿದ್ದಾರೆ.   ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ’ನವರಂಗ’ ಕಾವ್ಯನಾಮದಿಂದ ಕೂಡ ಬರವಣಿಗೆ ಮಾಡಿದ್ದರು. ಅಲ್ಲದೇ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕಾರ್ಯ ನಿರ್ವಹಿಸಿದ್ದ ರಂಗನಾಥ ರಾವ್ ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧ ಸೇರಿದಂತೆ ಸಾಹಿತ್ಯದ ಹಲವು  ಪ್ರಕಾರಗಳಲ್ಲಿ ...

READ MORE

Related Books