ಹಸ್ತಿನಾವತಿ

Author : ಜೋಗಿ (ಗಿರೀಶ್ ರಾವ್ ಹತ್ವಾರ್)

Pages 408

₹ 450.00




Year of Publication: 2023
Published by: ಅಂಕಿತ ಪುಸ್ತಕ
Address: ಪ್ರಕಾಶಕರು : ಅಂಕಿತ ಪುಸ್ತಕ, #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

ಹಸ್ತಿನಾವತಿ ಇದು ಭಾರತದ ಕಥೆ ಜೋಗಿ ಅವರ ಕಾದಂಬರಿಯಾಗಿದೆ. ಕರ್ಣ ಮತ್ತೆ ಹುಟ್ಟುತ್ತಾನೆ, ಕುಂತಿ ಮತ್ತು ಮಗನಿಗಾಗಿ ತಪಿಸುತ್ತಾಳೆ, ಅರ್ಜುನ ಇನ್ನೊಮ್ಮೆ ತನ್ನ ಅಣ್ಣನನ್ನು ಕೊಲ್ಲುತ್ತಾನೆ. ಕೃಷ್ಣ ಎಲ್ಲವನ್ನೂ ನೋಡುತ್ತಾ ಮುಗುಳನ್ನು 'ಯೋಗಕ್ಷೇಮಂ ವಹಾಮ್ಯಹಂ ಅನ್ನುತ್ತಾನೆ. ದುಹಾಭಾರತ ಮರುಕಳಿಸುತ್ತದೆ. ಇದು ಭಾರತದ ಕತೆ. ಮತ್ತದೇ ಪಾತ್ರಗಳ ರಿಂಗಾ, ಮತ್ತದೇ ಮಾತುಗಳ ಅನುರಣನ, ಸೂರಿಮೊನೆಯಷ್ಟು ಭೂಮಿಗಾಗಿ, ಸಿಂಹಾಸನಕ್ಕಾಗಿ, ಗೆಲುವಿಗಾಗಿ, ಸೇಡಿಗಾಗಿ ಅಹೋರಾತ್ರಿ ನಡೆಯುತ್ತಲೇ ಇರುತ್ತದೆ ಕದನ. ಇತಿಹಾಸ ಮರುಕಳಿಸುತ್ತದೆ. ಪುರಾಣದ ಪುನರಾವರ್ತನೆಯಾಗುತ್ತದೆ. 'ಸಂಭವಾಮಿ ಯುಗೇ ಯುಗೇ ಅಂದದ್ದು ಸುಳ್ಳಲ್ಲ, ಅಳಿದದ್ದು ಮತ್ತೆ ನಮ್ಮೊಳಗೇ ಹುಟ್ಟುತ್ತಲೇ ಇರುತ್ತದೆ. ಮನಸು ಧರ್ಮಕ್ಷೇತ್ರ, ಮನಸು ಕುರುಕ್ಷೇತ್ರ! ಮನಸ್ಸೇ ಮಹಾಭಾರತ! ( ಪುಸ್ತಕದ ಬೆನ್ನುಡಿಯಿಂದ)

'ನಮ್ಮನ್ನು ಒಡೆಯೋದಕ್ಕೆ ಹಲವಾರು ಶಕ್ತಿಗಳು ಪ್ರಯತ್ನ ಪಡ್ತಾ ಇರ್ತವೆ. ಆದರೆ ಒಗ್ಗಟ್ಟಾಗಿ ನಿಲ್ಲೋದು ನಮ್ಮ ಕರ್ತವ್ಯ. ಎಷ್ಟು ದಿನ ಸಾಧ್ಯವೋ ಅಷ್ಟು ದಿನ, ನಮ್ಮ ದೇಶಕ್ಕಾಗಿ ಏನು ಮಾಡೋದಕ್ಕೆ ಸಾಧ್ಯವೋ ಮಾಡೋಣ. ನಾವು ಬದುಕಿರೋ ತನಕ ಈ ದೇಶದಲ್ಲಿ ಆತ್ಮಗೌರವ ಮತ್ತು ಸಮಾನತೆಯ ಆಶಯಕ್ಕೆ ಭಂಗ ಬರದ ಹಾಗೆ ನೋಡ್ಕೊಳ್ಳೋಣ. ನಮ್ಮೆಲ್ಲರ ತಲೆಯ ಮೇಲೂ ತಿರುಗೋ ಚಕ್ರ ಇದೆ. ಅದನ್ನು ಮತ್ತೊಬ್ಬನ ತಲೆಗೆ ವರ್ಗಾಯಿಸದೇ ನಾವು ನಿವೃತ್ತರಾಗೋದಕ್ಕೆ ಆಗೋದಿಲ್ಲ. ಅರ್ಹನಾದ ಮತ್ತೊಬ್ಬ ಬರೋ ತನಕ ಈ ಬವಣೆ ತಪ್ಪಿದ್ದಲ್ಲ. ದಿಸ್ ಈಸ್ ಯುವ‌ ಫೇಟ್, ಮೈ ಮ್ಯಾನ್' ಅಂತ ಸಹದೇವನ ಭುಜ ತಟ್ಟಿದರು.

 

About the Author

ಜೋಗಿ (ಗಿರೀಶ್ ರಾವ್ ಹತ್ವಾರ್)
(16 November 1965)

ಜೋಗಿ, ಜಾನಕಿ, ಎಚ್‌. ಗಿರೀಶ್‌ ರಾವ್, ಸತ್ಯವ್ರತ...... ಹೀಗೆ ವಿವಿಧ ಅಂಕಿತನಾಮಗಳ ಮೂಲಕವೇ ಓದುಗರನ್ನು ತಲುಪಿದವರು ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ). ವೃತ್ತಿಯಲ್ಲಿ ಪತ್ರಕರ್ತರಾಗಿರುವ ಜೋಗಿ ಅವರು ಹುಟ್ಟಿದ್ದು 1965 ನವೆಂಬರ್‌ 16ರಂದು. ಮೂಲತಃ ಸೂರತ್ಕಲ್‌ ಸಮೀಪದ ಹೊಸಬೆಟ್ಟು ಊರಿನವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.  ಹಾಯ್‌ ಬೆಂಗಳೂರು ವಾರಪತ್ರಿಕೆಯಲ್ಲಿ ‘ರವಿ ಕಾಣದ್ದು’, ‘ಜಾನಕಿ ಕಾಲಂ’ ಅಂಕಣ ಬರಹಗಳ ಮೂಲಕ ಓದುಗರಿಗೆ ಪರಿಚಯವಾದ ಜೋಗಿ ಅವರು ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ವೃತ್ತಿ ಜೊತೆ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಹಲವಾರು ಕೃತಿಗಳನ್ನು ...

READ MORE

Related Books