ನಿರಂಜನ ಚಿರಸ್ಮರಣೆಯ ಕಯ್ಯೂರು

Author : ನಿರಂಜನ

Pages 48

₹ 30.00




Year of Publication: 2018
Published by: ಬಹುರೂಪಿ ಪ್ರಕಾಶನ
Address: ಎಂಬೆಸ್ಸೆ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಕುಮಾರಪಾರ್ಕ್‌ ಪಶ್ಚಿಮ, ಬೆಂಗಳೂರು
Phone: 9945440841

Synopsys

ಕಯ್ಯೂರಿನ ರೈತರ ಹೋರಾಟದ ಭಾಗವೇ ಈ ಕೃತಿಯಾಗಿದೆ. ಕಯ್ಯೂರು ಇರುವುದು ಕೇರಳದಲ್ಲಿ. ನಿರಂಜನ ಅವರು ಬರೆದಿರುವ ಚಿರಸ್ಮರಣೆ ಕಾದಂಬರಿಯು ಘಟಿಸುವುದು ಕಯ್ಯೂರಿನಲ್ಲಿ. ಈ ಕೃತಿಯಲ್ಲಿ ಚಿರಸ್ಮರಣೆಯನ್ನು ಬರೆದ ಲೇಖಕರೇ ಹಲವು ವರ್ಷಗಳ ಕಾಲ ತಾವು ಕಂಡ, ಕಯ್ಯೂರಿನ ರೈತ ವೀರರ ವಿಚಾರಣೆಯನ್ನು ಖುದ್ದು ಹಾಜರಿದ್ದು ನೋಡಿದ, ಪತ್ರಿಕೆಗಳಿಗೆ ವರದಿ ಮಾಡಿದ, ಕಯ್ಯೂರು ರೈತರ ಮರಣದಂಡನೆ ತಪ್ಪಿಸಲು ಸಹಿ ಸಂಗ್ರಹ ನಡೆಸಿದ ಅನುಭವವನ್ನ ದಾಖಲು ಮಾಡಿದ್ದರು. ಇಂದಿನ ಪೀಳಿಗೆಯವರು ಓದಲೇಬೇಕಾದ ಪುಸ್ತಕವಿದು. 

About the Author

ನಿರಂಜನ
(15 June 1924 - 12 March 1992)

ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು.    ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...

READ MORE

Related Books