ಗಾಂಧಿ-ನೆಹರು ಬಳುವಳಿ

Author : ಪ್ರಕಾಶ್‌ ಕೆ.

Pages 52

₹ 25.00




Year of Publication: 2011
Published by: ಕ್ರಿಯಾ ಪ್ರಕಾಶನ
Address: ಸಂ. 40, ಸುರಿಭವನ, 16ನೇ ಅಡ್ಡರಸ್ತೆ, 2ನೇ ಬಿ ಮುಖ್ಯರಸ್ತೆ, ಸಂಪಂಗಿ ರಾಮನಗರ, ಬೆಂಗಳೂರು-560027
Phone: 080-22234369/9448578021

Synopsys

ಇಎಂಎಸ್ ಭಾರತೀಯ ಕಮ್ಯುನಿಸ್ಟ್ ಚಿಂತಕರಲ್ಲಿ ಒಂದು ವಿಶಿಷ್ಟ ಸ್ಥಾನ ಹೊಂದಿದ್ದಾರೆ ಎನ್ನುತ್ತಾರೆ ಪ್ರಸಿದ್ದ ಆರ್ಥಿಕ ತಜ್ಞ ಪ್ರೊ. ಪ್ರಭಾತ್ ಪಟ್ನಾಯಕ್. ಅವರದ್ದು ಭಾರತೀಯ ಇತಿಹಾಸದೊಳಗಿನ ಒಂದು ಪ್ರಮಾಣಪೂರಿತ ಅನ್ವೇಷಣೆ ಎನ್ನುವ ಪಟ್ನಾಯಕ್, ಸಹಜವಾಗಿಯೇ ಇಂತಹ ಅನ್ವೇಷಣೆಗಳಲ್ಲಿ ಯಾಂತ್ರಿಕ ವಿಶ್ಲೇಷಣೆಗಾಗಲಿ, ಸರಳೀಕರಣಕ್ಕಾಗಲೀ ಅವಕಾಶ ಇಲ್ಲ, ಮಹಾತ್ಮ ಗಾಂಧಿ ಮತ್ತು ಜವಾಹರಲಾಲ ನೆಹರೂರವರ ನೇತೃತ್ವವನ್ನು ಶ್ರಮಜೀವಿ ವರ್ಗದ ಕಣ್ನೋಟದಿಂದ ಪರಿಶೀಲಿಸುವಾಗಲೇ ರಾಷ್ಟ್ರೀಯ ಆಂದೋಲನದಲ್ಲಿ ಆಧುನಿಕ ಭಾರತದ ನಿರ್ಮಾಣದಲ್ಲಿ ಅವರ ಅಮೋಘ ಪಾತ್ರದ ಕುರಿತು ಒಳನೋಟಗಳಿಂದ ಕೂಡಿದ ವಿಶ್ಲೇಷಣೆಗಳು ಕಾಣುತ್ತವೆ. ಉದಾರೀಕರಣ ಜಾಗತೀಕರಣದ ಈ ಯುಗದಲ್ಲಿ ಕಾಂಗ್ರೆಸ್ ಪಕ್ಷ ಗಾಂಧಿ-ನೆಹರೂ ಪರಂಪರೆಯಿಂದ ದೂರ ಸರಿದಿದೆ ಎಂಬ ಕಳವಳದ ಮಾತುಗಳು ಕೇಳಬರುತ್ತಿವೆ. ಇದು ಎಷ್ಟರ ಮಟ್ಟಿಗೆ ಸರಿ? ನಿಜವಾಗಿಯೂ ಗಾಂಧಿ-ನೆಹರೂ ಬಳುವಳಿ ಎಂದರೆ ಏನು? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ನೆರವಾಗುವಂತಹ ಅವರ ಬರವಣಿಗೆಗಳ ಒಂದು ಕಿರುಸಂಗ್ರಹ ಇದು.

About the Author

ಪ್ರಕಾಶ್‌ ಕೆ.

ಲೇಖಕ ಡಾ. ಪ್ರಕಾಶ್ ಕೆ. ಅವರು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು ಮತ್ತು ಸಿಐಟಿಯು ರಾಜ್ಯ ಉಪಾಧ್ಯಕ್ಷರಾಗಿದ್ದಾರೆ.  ಹಂಪಿ ಕನ್ನಡ ವಿವಿಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳುವಳಿಯ ಉಗಮ ಮತ್ತು ಬೆಳವಣಿಗೆ ವಿಚಾರದಲ್ಲಿ ಪಿಹೆಚ್‌ಡಿ ಮಾಡಿರುವ ಇವರು ಅನುವಾದಕರೂ ಹೌದು.  ಕೃತಿಗಳು : ಆಧುನಿಕೋತ್ತರವಾದ (ಭಾಷಾಂತರ), ಫಿಡೆಲ್ ಕ್ಯಾಸ್ಟ್ರೋ ( ಭಾಷಾಂತರ), ನಿರುದ್ಯೋಗ: ಒಂದು ಪೆಡಂಭೂತ, ಭಯೋತ್ಪಾದನೆ- ಸಿಐಎ, ಜಿಹಾದಿ, ಹಿಂದುತ್ವ, ಸಮಬಾಳಿನ ಸಂಘರ್ಷ: ಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳುವಳಿಯ ಒಂದು ನೋಟ. ...

READ MORE

Related Books