ದೇಶ ವಿಭಜನೆಯ ದುರಂತ ಕಥೆ

Author : ಹೂ.ವೆ. ಶೇಷಾದ್ರಿ

Pages 240

₹ 150.00




Year of Publication: 1995
Published by: ಸಾಹಿತ್ಯ ಸಿಂಧು ಪ್ರಕಾಶನ
Address: ಬೆಂಗಳೂರು.

Synopsys

`ದೇಶ ವಿಭಜನೆಯ ದುರಂತ ಕಥೆ' ರಾಷ್ಟ್ರೀಯ ವಿಚಾರ ಬರಹಗಳ ಇಂಗ್ಲಿಷ್ ಸಂಕಲನವನ್ನು ಲೇಖಕ ಹೊ.ವೆ. ಶೇಷಾದ್ರಿ ಅವರು ರಚಿಸಿದ್ದಾರೆ. ಲೇಖಕ ನಾಗರಾಜ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. 1947ರಲ್ಲಿ ದೇಶ ವಿಭಜನೆ ಅನಿವಾರ್ಯವಾಗಿತ್ತೇ? ದುಃಖಪೂರ್ಣವಾದ ಭಾರತ ವಿಭಜನೆಯು ಮುಂದಿನ ಪೀಳಿಗೆಗೆ ನೀಡುವ ಪಾಠಗಳೇನು? ಚರಿತ್ರೆಯು ಪುನರಾರ್ವತನೆಯಾಗದಂತೆ ಮಾಡುವ, ನಮ್ಮ ನಾಯಕರನ್ನು ಎಚ್ಚರಗೊಳಿಸುವ ಏನಾದರೂ ಸಂಗತಿಗಳುಂಟೇ?- ಮುಂತಾದ ಅಂಶಗಳನ್ನು ಸಮಾಧಾನವಾಗಿ ವಿವರಿಸಲಾಗಲೀ, ತರ್ಕಬದ್ಧವಾಗಿ ಉತ್ತರಿಸಲಾಗಲೀ ಇದುವರೆಗೆ ಯತ್ನಿಸಲಾಗಿಲ್ಲ ಎನ್ನಬೇಕಾಗುತ್ತದೆ. ಬಹುಕಾಲದಿಂದಲೂ ಅಪೂರ್ಣವಾಗಿ ಉಳಿದಿದ್ದ ಕೊರತೆಯೊಂದನ್ನು ಈ ಪುಸ್ತಕವು ಪೂರೈಸುತ್ತದೆ. ನಮ್ಮ ಚರಿತ್ರೆಯ ಬಗೆಗೆ ಹೊಸ ಸಂಶೋಧನೆಗಳನ್ನು ನಡೆಸಲು ಇತಿಹಾಸ ಸಂಶೋಧಕರಿಗೆ ಪ್ರೇರಣೆ ನೀಡಬಲ್ಲದು; ಸರ್ವಸಾಮಾನ್ಯ ಜನರಿಗೆ ನಮ್ಮೀ ದೇಶದ ಅಖಂಡತೆಗೆ ಇಂದು ಒದಗಿರುವ ಅಪಾಯದ ಚಾರಿತ್ರಿಕ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಲು ಈ ಕೃತಿಯು ಅವಕಾಶ ಒದಗಿಸಿಕೊಟ್ಟೀತು.

About the Author

ಹೂ.ವೆ. ಶೇಷಾದ್ರಿ
(26 May 1926 - 14 August 2005)

ಖ್ಯಾತ ಲೇಖಕ ಶೇಷಾದ್ರಿಯವರು (26-05-1926) ಹುಟ್ಟಿದ್ದು ಹೊಂಗಸಂದ್ರದಲ್ಲಿ. ತಂದೆ ವೆಂಕಟರಾಮಯ್ಯ, ತಾಯಿ ಪಾರ್ವತಮ್ಮ. ಬೆಂಗಳೂರಿನ (19476) ಸೆಂಟ್ರಲ್ ಕಾಲೇಜಿನಿಂದ ರಸಾಯನ ಶಾಸ್ತ್ರದಲ್ಲಿ ಸ್ವರ್ಣಪದಕದೊಂದಿಗೆ ಎಂ.ಎಸ್ಸಿ. ಪದವೀಧರರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೂರ್ಣಾವಧಿ ಕಾರ್ಯಕರ್ತರು. 1980ರಲ್ಲಿ ಕ್ಷೇತ್ರೀಯ (ಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡು) ಪ್ರಚಾರ ಕಾರ‍್ಯ ನಿರ್ವಹಣೆ, ಸಂಘದ ಪ್ರಧಾನ ಕಾರ‍್ಯದರ್ಶಿಯಾಗಿಯೂ ಆಗಿದ್ದರು.ಸಂಘದ ವೈಚಾರಿಕ ಹಾಗೂ ಸೈದ್ಧಾಂತಿಕ ಬರಹಗಳನ್ನು ಬರೆದರು.  ವಿಕ್ರಮ, ಉತ್ಥಾನ-ಕನ್ನಡ ಪತ್ರಿಕೆಗಳಲ್ಲಿ, ಇಂಗ್ಲಿಷ್‌ನ ಆರ್ಗನೈಸರ್, ಹಿಂದಿಯ ಪಾಂಚಜನ್ಯ ಹಾಗೂ ದೇಶದ ಇತರ ಭಾಷೆಗಳ ನಿಯತ ಕಾಲಿಕೆಗಳಲ್ಲಿ ಲೇಖನ, ವಿಮರ್ಶಾತ್ಮಕ ವಿಶ್ಲೇಷಣೆಗಳನ್ನು ಬರೆದರು. ಕೃತಿಗಳು-ಯುಗಾವತಾರ, ಅಮ್ಮಾ ಬಾಗಿಲು ತೆಗೆ, ಚಿಂತನಗಂಗಾ, ದೇಶ ...

READ MORE

Related Books