ಬಾಪೂ ನಂತರದ ಭಾರತ ಸಂಪುಟ-2

Author : ಜಿ.ಎನ್. ರಂಗನಾಥ ರಾವ್

Pages 526

₹ 290.00




Year of Publication: 2010
Published by: ವಸಂತ ಪ್ರಕಾಶನ
Address: # 360, 10 ನೇ ’ ಬಿ’ ಮುಖ್ಯರಸ್ತೆ, 3 ನೇ ಬ್ಲಾಕ್ ಜಯನಗರ, ಬೆಂಗಳೂರು- 560011
Phone: 080 2244 3996

Synopsys

ಹಿರಿಯ ಲೇಖಕ-ಪತ್ರಕರ್ತ-ಅನುವಾದಕ ಜಿ.ಎನ್. ರಂಗನಾಥ ರಾವ್ ಅವರು ಅನುವಾದಿಸಿರುವ ಕೃತಿ-ಬಾಪೂ ನಂತರದ ಭಾರತ. ಹಿರಿಯ ಲೇಖಕ ರಾಮಚಂದ್ರ ಗುಹ ಅವರು ಇಂಗ್ಲಿಷಿನಲ್ಲಿ ಬರೆದ ಕೃತಿಯ ಕನ್ನಡಾನುವಾದವಾಗಿದೆ. ಗತಕಾಲದಲ್ಲಿಓದುಗರನ್ನು ಮುಳುಗಿಸಿ ವರ್ತಮಾನದಲ್ಲಿ ತೇಲಿಸುವ ಕಥಾನಕವಾಗಿದೆ ಈ ಕೃತಿ. ಬ್ರಿಟಿಷ್ ಸೇನೆ ಮತ್ತು ಸಿವಿಲ್ ಸೇವೆಗಳು, ತನ್ನ ಭೂಪ್ರದೇಶದ, ತೆರಿಗೆ ನೀತಿಗಳು ಹಾಗೂ ದೇಶಿಯ ಸಂಸ್ಥಾನಗಳ ವಿಚಿತ್ರ-ವಿಲಕ್ಷಣ ಸ್ಥಿತಿ- ಸ್ಥಾನಮಾನಗಳನ್ನು ಸ್ಟ್ರಾಚೆ ನಿರೂಪಿಸಿದ್ದಾನೆ ಎನ್ನುವಂತಹ ಕಥಾನಕ ಇಲ್ಲಿದೆ. ಪಕ್ಷ ರಾಜಕೀಯದ ಕುರಿತ ಚಿಂತನೆಗಳು, ವಿಭಜನೆಯ ತರ್ಕ, ಸ್ವಾತಂತ್ಯ್ರ ಮತ್ತು ಪಿತೃಹತ್ಯೆ ಹೀಗೆ ಅನೇಕ ವಿಚಾರಧಾರೆಗಳ ತುಣುಕುಗಳು ಈ ಕೃತಿಯಲ್ಲಿ ಪ್ರಸ್ತಾಪವಾಗಿವೆ.

About the Author

ಜಿ.ಎನ್. ರಂಗನಾಥ ರಾವ್
(12 January 1942 - 09 October 2023)

ನಾಡಿನ ಖ್ಯಾತ ಪತ್ರಕರ್ತ, ಹಿರಿಯ ಲೇಖಕ ಜಿ.ಎನ್.ರಂಗನಾಥ ರಾವ್ ಮೂಲತಃ ಬೆಂಗಳೂರಿನ ಹಾರೋಹಳ್ಳಿಯವರು. 1942 ರಲ್ಲಿ ಜನಿಸಿದ ಅವರು, ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಮೈಲಿಗಲ್ಲುಗಳನ್ನು ನಿರ್ಮಿಸಿದ್ದಾರೆ.   ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ’ನವರಂಗ’ ಕಾವ್ಯನಾಮದಿಂದ ಕೂಡ ಬರವಣಿಗೆ ಮಾಡಿದ್ದರು. ಅಲ್ಲದೇ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕಾರ್ಯ ನಿರ್ವಹಿಸಿದ್ದ ರಂಗನಾಥ ರಾವ್ ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧ ಸೇರಿದಂತೆ ಸಾಹಿತ್ಯದ ಹಲವು  ಪ್ರಕಾರಗಳಲ್ಲಿ ...

READ MORE

Related Books