ಹೇಳದೇ ಉಳಿದ ಅದ್ಭುತ ಕಥೆಗಳು

Author : ಬಿ.ಆರ್‌. ಮಂಜುನಾಥ್‌

Pages 70

₹ 85.00




Year of Publication: 2010
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

`ಹೇಳದೇ ಉಳಿದ ಅದ್ಭುತ ಕಥೆಗಳು' ಕೃತಿಯು ಡಾ. ಶಂಸುಲ್ ಇಸ್ಲಾಂ ಅವರ ಮೂಲ ಕೃತಿಯಾಗಿದ್ದು, ಕನ್ನಡಕ್ಕೆ ಬಿ.ಆರ್. ಮಂಜುನಾಥ್ ಅವರು ಅನುವಾದಿಸಿದ್ದಾರೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ದೂರದ ಇಂಗ್ಲೆಂಡ್‌ನಲ್ಲಿದ್ದ, ಮಹಾನ್ ಹೋರಾಟಗಾರರು ಹಾಗೂ ವಿದ್ವಾಂಸರಾಗಿದ್ದ ಕಾರ್ಲ್ ಮಾರ್ಕ್ಸ್ ಮತ್ತು ಫೆಡೆರಿಕ್ ಏಂಗೆಲ್ಸ್ ರವರು ಈ ಬಂಡಾಯದಲ್ಲಿ ತೀವ್ರ ಆಸಕ್ತಿಯನ್ನು ತಳೆದು, ಇದರ ದೂರಗಾಮಿ ಪರಿಣಾಮಗಳ ಬಗ್ಗೆ ವಿವರವಾಗಿ ಚರ್ಚಿಸಿದ್ದರು. ಅವರ ಮುನ್ನೋಟದಂತೆಯೇ ಈ ಮಹಾನ್ ಹೋರಾಟದ ನಂತರ ಭಾರತವು ಬಹಳ ದೊಡ್ಡ ಬದಲಾವಣೆಯನ್ನೇ ಕಂಡಿತು ಮತ್ತು ಮುಂದಿನ ರಾಷ್ಟ್ರೀಯ ವಿಮೋಚನಾ ಹೋರಾಟಗಳಿಗೆ ಬಹಳ ದೊಡ್ಡ ಕಾಣಿಕೆಯನ್ನು ನೀಡಿತು. ಈ ಸಂಗ್ರಾಮದ ಕುರಿತು ಪ್ರತಿ ತಲೆಮಾರಿನಲ್ಲಿಯೂ ಕೂಡ ಅನೇಕ ಹೊಸ ಹೊಸ ಸಂಪದ್ಭರಿತಗೊಳಿಸಿವೆ. ಹಾಗೂ ಆಳವಾಗಿಸುತ್ತಿವೆ. ಈ ಕಿರು ಹೊತ್ತಿಗೆಯಂತೂ ಇತಿಹಾಸದ ಪುನರ್ ರಚನೆ ಮತ್ತು ವ್ಯಾಖ್ಯಾನಕ್ಕೆ ಒದಗಿಸಿರುವ ಮಾಹಿತಿ ಮತ್ತು ವಾದಗಳು ನಮ್ಮ ಕಣ್ಣು ತೆರೆಸುವಂತಿವೆ ಮತ್ತು ಅರಿವಿನ ಕ್ಷಿತಿಜವನ್ನು ವಿಸ್ತರಿಸುವಂತಿವೆ. 1857ರ ಮಹಾಬಂಡಾಯವು ಒಂದೆರಡು ಉತ್ತರ ಭಾರತದ ಸಂಸ್ಥಾನಗಳಿಗೆ ಸೀಮಿತವಾದ ದಂಗೆಯಲ್ಲ, ಬದಲಿಗೆ ಭಾರತದಾದ್ಯಂತ ಕಂಡುಬಂದ ಪ್ರಘಟನೆ ಎಂಬುದು ಈ ಪುಸ್ತಕದಲ್ಲಿನ ಇನ್ನೊಂದು ಮುಖ್ಯವಾದ ಪ್ರತಿಪಾದನೆ. ದಕ್ಷಿಣ ಭಾರತದವರಾದ ಮತ್ತು ವಿಶೇಷವಾಗಿ ಕರ್ನಾಟಕದವರಾದ ನಾವು ಸಹ ಈ ಪ್ರತಿಪಾದನೆಯೊಂದಿಗೆ ನಮ್ಮ ದನಿಯನ್ನು ಸೇರಿಸಬಲ್ಲೆವು. ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಸುಪ್ರಸಿದ್ಧ, ಪ್ರಬಲ ಪ್ರತಿರೋಧದ ನಂತರವೂ ಕರ್ನಾಟಕದ ವಿವಿಧ ಮೂಲೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಬ್ರಿಟಿಷ್ ವಿರೋಧಿ ಹೋರಾಟಗಳು ಸ್ಫೋಟಗೊಂಡಿವೆ. ಬ್ರಿಟಿಷರ ಶಸ್ತ್ರಾಸ್ತ್ರ ಕಾಯಿದೆಯನ್ನು ವಿರೋಧಿಸಿ 1857ರಲ್ಲಿಯೇ ನಡೆದ ಮುಧೋಳ ತಾಲೂಕಿನ ಹಲಗಲಿ ಬೇಡರ ಹೋರಾಟ, ಸುರಪುರದ ವಿದ್ರೋಹ, ಮುಂಡರಗಿ ಭೀಮರಾಯ ಮತ್ತು ನರಗುಂದದ ಬಾಬಾ ಸಾಹೇಬರ ನೇತೃತ್ವದ ಬಂಡಾಯಗಳು ಬಹಳ ಮುಖ್ಯವಾದವು. ಇವರಲ್ಲಿ ಅನೇಕರಿಗೆ ಉತ್ತರ ಭಾರತದಲ್ಲಿ ನಡೆಯುತ್ತಿದ್ದ ಮಹಾನ್ ಹೋರಾಟದ ಸುದ್ದಿ ತಿಳಿದಿತ್ತು ಮತ್ತು ಅನೇಕರು ಪೇಶ್ವ ನಾನಾಸಾಹೇಬರೊಂದಿಗೆ ಸಂಬಂಧ ಸಂಪರ್ಕಗಳನ್ನು ಇಟ್ಟುಕೊಂಡಿದ್ದರು ಎಂಬುದು ಗಮನಾರ್ಹ. ಈ ಸಣ್ಣಪುಟ್ಟ ಬಂಡಾಯಗಳಲ್ಲಿ ಅಡಕವಾಗಿದ್ದ ಜನಪರ ಧೋರಣೆಗಳು, ಜನಸಾಮಾನ್ಯರ ಭಾಗವಹಿಸುವಿಕೆ, ರಾಷ್ಟ್ರವಾದದ ಅಂಕುರಗಳು ಇತ್ಯಾದಿಗಳ ಕುರಿತು ಇನ್ನಷ್ಟು ಸಂಶೋಧನೆ ಅಗತ್ಯವಾಗಿದೆ.

About the Author

ಬಿ.ಆರ್‌. ಮಂಜುನಾಥ್‌
(21 December 1940)

ಲೇಖಕ ಬಿ. ಆರ್‌. ಮಂಜುನಾಥ್ ಅವರು ತುರ್ತುಪರಿಸ್ಥಿತಿಯ ನಂತರದ ದಿನಗಳಲ್ಲಿ ಎಡಪಂಥೀಯ ವಿದ್ಯಾರ್ಥಿ ಚಳುವಳಿಗೆ, ಸಾಂಸ್ಕೃತಿಕ ಆಂದೋಲನಕ್ಕೆ ಧುಮುಕಿದವರು. ಜಾನ್ ರೀಡ್ ಅವರ 'ಟೆನ್ ಡೇಸ್ ದಟ್ ಶುಕ್ ದ ವರ್ಲ್‌, ಸಮಾಜವಾದಿ ವೈದ್ಯಕೀಯದ ಕುರಿತಾದ 'ರೆಡ್ ಮೆಡಿಸಿನ್', ಇ.ಎಚ್.ಕಾರ್‌ ಅವರ 'ವಾಟ್ ಈಸ್ ಹಿಸ್ಟರಿ' ಅವರ ಅನುವಾದಿತ ಕೃತಿಗಳಲ್ಲಿ ಕೆಲವು. ವಿವಿಧ ಸಾಂಸ್ಕೃತಿಕ, ವಿದ್ಯಾರ್ಥಿ-ಯುವಜನ ಪತ್ರಿಕೆಗಳ ಸಂಪಾದಕರಾಗಿದ್ದ ಅವರು ಭಗತ್ ಸಿಂಗ್‌ರ ಕುರಿತು ಪುಸ್ತಕಗಳನ್ನು ಬರೆದಿರುವುದಲ್ಲದೆ ಅನೇಕ ನಾಟಕ, ಬೀದಿ ನಾಟಕಗಳನ್ನು ಸಹ ರಚಿಸಿ ಆಡಿಸಿದ್ದಾರೆ. ಪ್ರಸ್ತುತ ಸಮಕಾಲೀನ ಸಾಮಾಜಿಕ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾಗಿದ್ದು ವಿವಿಧ ಜನಪರ ಆಂದೋಲನಗಳಲ್ಲಿ ...

READ MORE

Related Books