1962 ಯುದ್ಧಕಾಂಡ

Author : ಯಡೂರ ಮಹಾಬಲ

Pages 256

₹ 300.00




Year of Publication: 2019
Published by: ಚಿಂತನ ಚಿಲುಮೆ ಪ್ರಕಾಶನ
Address: ಟ್ರೇಡ್‌ ಯೂನಿಯನ್‌ ಆಫೀಸ್‌, 4ನೇ ಮುಖ್ಯರಸ್ತೆ, 9ನೇ ಕ್ರಾಸ್‌, ಚಾಮರಾಜಪೇಟೆ, ಬೆಂಗಳೂರು -560018

Synopsys

1962 ಅಕ್ಟೋಬರ್ 20 ರಿಂದ ನವೆಂಬರ್ 22 ರ ವರೆಗಿನ ಕಾಲಘಟ್ಟದಲ್ಲಿ ನಡೆದ ರಾಜಕೀಯ ವಿದ್ಯಮಾನಗಳ ಕುರಿತು ಲೇಖಕ ಯಡೂರ ಮಹಾಬಲ ಅವರು ಇಲ್ಲಿ ಚರ್ಚಿಸಿದ್ದಾರೆ. ಕನ್ನಡದಲ್ಲಿ ಯುದ್ದ ಸಾಹಿತ್ಯ ವಿರಳ ಎನಿಸುವ ಹೊತ್ತಿನಲ್ಲಿಯೇ ಈ ಕೃತಿ ಹೊರಬಂದಿದೆ. 

ಭಾರತ-ಚೈನಾ ಯುದ್ಧದ ಚಿತ್ರಣ ಮತ್ತು ದುರಾಳ ರಾಜಕೀಯ ನಿಲುವು ಬಗ್ಗೆ ಬೆಳಕು ಚೆಲ್ಲಿದ್ದಾರೆ. ಅಂದು ಗಡಿ ವಿವಾದಗಳು ಮಾತ್ರ ಯುದ್ಧಕ್ಕೆ ಕಾರಣ ಮಾತ್ರವಲ್ಲ; ಬೇರೆ ಕಾರಣಗಳೂ ಇದ್ದವು. ಮರೆಯಾಗಿದ್ದ ಕೆಲವು ವಿಷಯಗಳ ಬಗ್ಗೆ, ಯುದ್ದಾನಂತರದಲ್ಲಿ ನಡೆದ ಹಲವು ಬಿಕ್ಕಟ್ಟುಗಳ ಕುರಿತ ಚಿಂತನಾ ಬರಹಗಳಿವೆ. 

About the Author

ಯಡೂರ ಮಹಾಬಲ
(11 June 1954)

ಯಡೂರ ಮಹಾಬಲ ಅವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಯಡೂರು ಗ್ರಾಮದವರು.ಭಾರತ ವಿದ್ಯಾರ್ಥಿ ಫೆಡರೇಶನ್, ಸಮುದಾಯ ಸಾಂಸ್ಕೃತಿಕ ಸಂಘಟನೆ, ನೌಕರ ಮತ್ತು ಕಾರ್ಮಿಕರ ಹೋರಾಟ ಸಂಘಟನೆಗಳಲ್ಲಿ ಭಾಗಿಯಾಗಿದ್ದರು.  ಹುಬ್ಬಳ್ಳಿಯಲ್ಲಿ ಗೆಳೆಯರೊಂದಿಗೆ ಸಮತಾ ಪ್ರಕಾಶನ ಕಾರ್ಯದಲ್ಲಿ ತೊಡಗಿ ಅನೇಕ ಕಿರುಹೊತ್ತಿಗೆಗಳನ್ನು ಹೊರತಂದಿದ್ದಾರೆ. ಬ್ಯಾಂಕ್ ಅಧಿಕಾರಿಯಾಗಿ 2014 ರಲ್ಲಿ ನಿವೃತ್ತಿಹೊಂದಿದ್ದಾರೆ.  ‘ಲೋಹಿಯಾ ವಿಚಾರಗಳ ಒಂದು ವಿಮರ್ಶೆ’, ‘ಕ್ವಿಟ್ ಇಂಡಿಯಾ ಚಳವಳಿಯ ಒಳಗುಟ್ಟುಗಳು’, ‘ದೋಕ್ಲಾಂ ಕರ್ಮಕಾಂಡ’, ‘ಅವಿಸ್ಮರಣೀಯ ಅರುಣಾಚಲ, ಅದರ ಚಿತ್ರ ವಿಚಿತ್ರ ಇತಿಹಾಸ’, ನಿಗೂಢ ಟಿಬೇಟ್, ಅಕ್ಸಾಯ್ ಚಿನ್ ವಿವಾದದ ಇತಿಹಾಸ, ‘ಯುದ್ಧಪೂರ್ವ ಕಾಂಡ’ ‘1962 ಯುದ್ಧ ಕಾಂಡ' ಕೃತಿಗಳನ್ನು ...

READ MORE

Related Books