ಗಾಂಧೀ ಕತೆಗಳು

Author : ಸಿದ್ದವನಹಳ್ಳಿ ಕೃಷ್ಣಶರ್ಮ

Pages 102

₹ 1.00




Year of Publication: 1942
Published by: ಗಾಂಧೀ ಸಾಹಿತ್ಯ ಭಾಂಡಾರ
Address: ಬೆಂಗಳೂರು

Synopsys

ಗಾಂಧೀಜಿಯ ನಿತ್ಯ ಜೀವನದ ಕೆಲವು ರಸ ಪ್ರಸಂಗಗಳನ್ನು ಒಂದೆಡೆ ಸಂಗ್ರಹಿಸಿದ ಮಹದೇವ ದೇಸಾಯಿ ಅವರ ಶ್ರಮಕ್ಕೆ ಸಂಪಾದನೆಯ ಚೌಕಟ್ಟು ಒದಗಿಸಿದವರು ಸಿದ್ದವನಹಳ್ಳಿ ಕೃಷ್ಣಶರ್ಮರು. ಗಾಂಧೀಜಿ ಅವರು ಕರ್ನಾಟಕದ ನಂದಿಬೆಟ್ಟಕ್ಕೆ ಬಂದಾಗಿನ ಕೆಲ ರಸ ನಿಮಿಷಗಳು, ಬ್ರಿಟಿಷ್ ಅಧಿಕಾರಿಗಳೊಂದಿಗೆ ನೇರ ಉತ್ತರಿಸಿ ಬಾಯಿ ಮುಚ್ಚಿಸಿದ ಪ್ರಕರಣಗಳು, ಗಾಂಧೀಜಿ ಮಕ್ಕಳೊಡನೆ ಬೆರೆತಾಗಿನ ಪ್ರಸಂಗಗಳು, ತಾವು ಲಂಡನ್ ನಲ್ಲಿದ್ದಾಗ ಭಾರತೀಯತೆಯನ್ನು ಎತ್ತಿ ಹಿಡಿದು, ವಿದೇಶೀಯತೆಯನ್ನೂ ಗೌರವಿಸುವ ಮನೋಧರ್ಮದ ಬಗ್ಗೆ ಹೇಳಿದಾಗ ....ಇಂತಹ ಹತ್ತು ಹಲವು ಪ್ರಸಂಗಗಳು ಗಾಂಧೀಜಿಯನ್ನು ಎಲ್ಲ ಆಯಾಮಗಳಿಂದ ಅಧ್ಯಯನ ಮಾಡಲು ಇಲ್ಲಿ ಆಕರಗಳು ಸಿಗುತ್ತವೆ. .

About the Author

ಸಿದ್ದವನಹಳ್ಳಿ ಕೃಷ್ಣಶರ್ಮ
(31 July 1904 - 02 October 1973)

ಪ್ರಸಿದ್ಧ ಪತ್ರಿಕೋದ್ಯಮಿ, ಸಾಹಿತಿ, ಗಾಂಧೀವಾದಿ ಸಿದ್ದವನಹಳ್ಳಿ ಕೃಷ್ಣಶರ್ಮ ಚಿತ್ರದುರ್ಗ ಜಿಲ್ಲೆಯ ಸಿದ್ದವನಹಳ್ಳಿಯವರು. ಅವರು 1904 ಜುಲೈ 31ರಂದು ಜನಿಸಿದರು. ಚಿತ್ರದುರ್ಗ, ಮೈಸೂರುಗಳಲ್ಲಿ ಪ್ರಥಮ ಬಿ. ಎ. ತರಗತಿವರೆಗೆ ಓದಿದರು. ಭಾರತ ಸ್ವಾತಂತ್ರ್ಯ ಸಂಗ್ರಾಮದ ಪ್ರಭಾವಕ್ಕೆ ಒಳಗಾಗಿ ಓದನ್ನು ಬಿಟ್ಟು ದೇಶ ಸೇವೆಗೆ ದುಮುಕಿದರು. ಜೊತೆಗೆ ಪತ್ರಿಕೋದ್ಯಮ, ಬರೆವಣಿಗೆ ಕೆಲಸವನ್ನೂ ನಡೆಸಿದರು. 1942ರ ಕ್ವಿಟ್ ಇಂಡಿಯ ಚಳವಳಿಯಲ್ಲಿ ಭಾಗವಹಿಸಿ ಸೆರೆಮನೆ ಶಿಕ್ಷೆಗೆ ಒಳಗಾಗಿದ್ದರು. ಕನ್ನಡ ಪತ್ರಿಕೋದ್ಯಮದ ಏಳ್ಗೆಗೆ ಶ್ರಮಿಸಿದವರಲ್ಲಿ ಸಿದ್ಧವನಹಳ್ಳಿ ಪ್ರಮುಖರು. ಕನ್ನಡದಲ್ಲಿ ’ಹರಿಜನ’ ಪತ್ರಿಕೆ ಪ್ರಕಟಿಸಿದ ಅವರು ’ವಿಶ್ವ ಕರ್ನಾಟಕ’ ಪತ್ರಿಕೆಗೆ ಕೆಲಕಾಲ ಸಂಪಾದಕರಾಗಿದ್ದರು. ಆ ಪತ್ರಿಕೆಯಲ್ಲಿ ...

READ MORE

Related Books