ಮಧ್ಯಯುಗೀನ ಭಾರತ ಅಂತ್ಯಜರ ತತ್ತ್ವ ಚಿಂತನೆಗಳು

Author : ಬಂಜಗೆರೆ ಜಯಪ್ರಕಾಶ

Pages 166

₹ 150.00




Year of Publication: 2023
Published by: ಚಾರು ಪ್ರಕಾಶನ
Address: # 83, ನೇ ಹಂತ ಪ್ರೈಡ್ ಪ್ಲಾಜಾ ಕಾಂಪ್ಲೆಕ್ಸ್, ಆದರ್ಶ ಕಾಲೇಜು ಹತ್ತಿರ, 5ನೇ ಮುಖ್ಯರಸ್ತೆ, ಬೆಂಗಳೂರು- 560018
Phone: 9448380637

Synopsys

ಪಂಚರಾತ್ರ, ಅಹಿರ್ ಬುದ್ನ್ಯ ಸಂಹಿತೆ, ಭಾಗವತ, ದತ್ತಪಂಥ, ನಾಥಪಂಥ, ಶರಣಪಂಥ, ಭಕ್ತಿಪಂಥ ಹೀಗೆ ಸಾಲುಸಾಲಾಗಿ ತಳಾದಿ ಜನರ ನಡುವಿಂದ ಒಡಮೂಡಿ ಬಂದಿರುವ ತತ್ತ್ವ ಚಿಂತನೆಗಳು, ಆರಾಧನಾ ವಿಧಿಗಳು ಹಾಗೂ ಸಾಮಾಜಿಕ ಆಚರಣೆಗಳನ್ನು ಹಿಡಿದು ನೋಡಿದರೆ ನಾವೀಗ “ನೀವು ಹಿಂದೂಗಳಲ್ಲ ಮತ್ತು ನೀವು ಪಾಲಿಸುತ್ತಿರುವ ನೀತಿ ಹಿಂದೂ ಧರ್ಮದ್ದಲ್ಲ' ಎಂದು ಹೇಳುವ ಮುಖಾಂತರ ಅವರನ್ನು ಈ ವಕ್ತಾರರ ಹುದ್ದೆಯಿಂದ ಬಿಡುಗಡೆ ಮಾಡುವ ಕಡೆಗೆ ಆಲೋಚಿಸಬೇಕಿದೆ. ಈ ಛದ್ಮವೇಷದ ಪಂಜರವನ್ನು ಮುರಿಯಬೇಕೆಂದರೆ ಆ ವೇಷದ ಸೂತ್ರಧಾರಿಯಾಗಿ ನಿಂತಿರುವ ಬ್ರಾಹ್ಮಣ್ಯದ ವಾದಗಳನ್ನು ದೂರೀಕರಿಸಬೇಕು.

About the Author

ಬಂಜಗೆರೆ ಜಯಪ್ರಕಾಶ
(17 June 1965)

ಕವಿ, ಸಂಸ್ಕೃತಿ ಚಿಂತಕ, ವಿಮರ್ಶಕ, ಅಂಕಣಕಾರ, ಅನುವಾದಕ ಮತ್ತು ಜನಪರ ಹೋರಾಟಗಾರರಾಗಿರುವ ಬಂಜಗೆರೆ ಜಯಪ್ರಕಾಶ್ ಹುಟ್ಟಿದ್ದು ಜೂನ್ 17-1965ರಲ್ಲಿ. ಹಿಂದುಳಿದ ಬುಡಕಟ್ಟು ಜಾತಿಯ ರೈತಾಪಿ ಕುಟುಂಬದ ಹಿನ್ನೆಲೆ ಇರುವ ಬಂಜಗೆರೆ ಜಯಪ್ರಕಾಶ್ ಅವರು ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೋಕಿನ ಬಂಜಗೆರೆಯವರು.  ಚಳ್ಳಕೆರೆ ಚಿತ್ರದುರ್ಗಗಳಲ್ಲಿ ಪಿಯುಸಿವರೆಗೆ ವಿದ್ಯಾಭ್ಯಾಸ. 1985ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಪತ್ರಿಕೋದ್ಯಮ ಪದವಿ. 1987 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎಸ್.ಡಬ್ಲ್ಯು ಪದವಿ. ಕನ್ನಡ ವಿಶ್ವವಿದ್ಯಾಲಯದಿಂದ 1999ರಲ್ಲಿ ಡಾಕ್ಟರ್ ಆಫ್ ಲಿಟರೇಚರ್ (ಡಿ.ಲಿಟ್)ಪದವಿ. ಕಳೆದ ಎರಡು ಮೂರು ದಶಕಗಳಿಂದ ಜನಪರ ಚಳುವಳಿಗಳಲ್ಲಿ ಸಕ್ರಿಯ ಪಾತ್ರ. ಕನ್ನಡ ವಿಶ್ವವಿದ್ಯಾಲಯವು ...

READ MORE

Related Books