ನಮ್ಮ ಶಿಡ್ಲಘಟ್ಟ

Author : ಡಿ.ಜಿ. ಮಲ್ಲಿಕಾರ್ಜುನ

Pages 400

₹ 450.00




Year of Publication: 2017
Published by: ಬಿ.ವಿರೂಪಾಕ್ಷಪ್ಪ ಚಾರಿಟೆಬಲ್ ಟ್ರಸ್ಟ್,
Address: ಸಂದೀಪ್ ಜಗದೀಶ್ವರ್, ಅಧ್ಯಕ್ಷರು, ಅಶೋಕ ರಸ್ತೆ, ಶಿಡ್ಲಘಟ್ಟ
Phone: 9945042110

Synopsys

ನಮ್ಮ ಶಿಡ್ಲಘಟ್ಟ-ಎಂಬುದು ತಮ್ಮ ಊರನ್ನು ದಾಖಲಿಸುವ ಪ್ರಯತ್ನವಾಗಿ ಲೇಖಕ ಡಿ.ಜಿ. ಮಲ್ಲಿಕಾರ್ಜುನ ಅವರು ರಚಿಸಿದ ಕೃತಿ ಇದು. ಕುತೂಹಲ, ಬೆರಗು, ಸೋಜಿಗದ ದೃಷ್ಟಿಯಿದ್ದರೆ ಪ್ರತಿಯೊಂದು ಸ್ಥಳವೂ ಅನೇಕ ಕತೆ ಹೇಳುತ್ತವೆ. ನಮ್ಮ ಊರಿನ ಬಗ್ಗೆ, ನಮ್ಮ ಸುತ್ತಲಿನ ಜನರ ಬಗ್ಗೆ ಕುತೂಹಲದ ಕಣ್ಣಿರದಿದ್ದರೆ, ಯಾವ ದೇಶದ ಯಾವ ಸ್ಥಳ ನೋಡಿಬಂದರೂ ‘ನಾನೂ ಹೋಗಿ ಬಂದೆ’ ಎಂದಾಗುತ್ತದೆಯೇ ವಿನಃ ಬೇರೇನೂ ಪ್ರಯೋಜನವಾಗಿರುವುದಿಲ್ಲ.

ಕರ್ನಾಟಕದ ಸಾಂಸ್ಕೃತಿಕ ಬದುಕಿನಲ್ಲಿ ಶಿಡ್ಲಘಟ್ಟ ತನ್ನದೇ ಆದ ಕೊಡುಗೆಗಳನ್ನು ನೀಡಿದೆ. ಶಿಡ್ಲಘಟ್ಟ ಕುರಿತಾದ ನೂರೆಂಟು ಸಂಗತಿಗಳಲ್ಲಿ ಹಲವನ್ನು ಕ್ರೋಡಿಕರಿಸಿ ಪುಸ್ತಕವನ್ನಾಗಿಸುವ ಪ್ರಯತ್ನವಿದು. ಶಿಡ್ಲಘಟ್ಟದ ವಿಶೇಷಗಳು, ಸಾಧಕರು, ಸ್ಥಳಗಳು, ಶಾಸನಗಳು, ಜೀವವೈವಿಧ್ಯ ಮುಂತಾದವುಗಳನ್ನು ಕನ್ನಡಿಗರಿಗೆ ಪರಿಚಯಿಸುವ ಸದುದ್ದೇಶದಿಂದ ‘ನಮ್ಮ ಶಿಡ್ಲಘಟ್ಟ’ ಪುಸ್ತಕ ಐತಿಹಾಸಿಕ ಮೆರಗು ಪಡೆದಿದೆ. 

About the Author

ಡಿ.ಜಿ. ಮಲ್ಲಿಕಾರ್ಜುನ

ಚಿಕ್ಕಬಳ್ಳಾಪುರದ ಶಿಡ್ಲಘಟ್ಟದವರಾದ ಡಿ.ಜಿ. ಮಲ್ಲಿಕಾರ್ಜುನ ಅವರು ಓದಿದ್ದು ಮೆಕ್ಯಾನಿಕಲ್‌ ಎಂಜಿನಿಯರಿಂಗ್. ಪ್ರಸ್ತುತ ಪ್ರಜಾವಾಣಿ ಮತ್ತು ಡೆಕನ್‌ ಹೆರಲ್ಡ್‌ ದಿನಪತ್ರಿಕೆಗೆ ಶಿಡ್ಲಘಟ್ಟ ತಾಲ್ಲೂಕು ವರದಿಗಾರರಾಗಿ ಕೆಲಸ ಮಾಡುತ್ತಿರುವ ಇವರು ಛಾಯಾಗ್ರಹಣದಲ್ಲಿ ಬಾಂಬೆ ನ್ಯಾಚುರಲ್‌ ಹಿಸ್ಟರಿ ಸೊಸೈಟಿಯಿಂದ ಪ್ರಮಾಣ ಪತ್ರ ಪಡೆದಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ನಮ್ಮ ಶಿಡ್ಲಘಟ್ಟ, ಕ್ಲಿಕ್, ಭೂತಾನ್, ಅರೆಕ್ಷಣದ ಅದೃಷ್ಟ, ರಸ್ಕಿನ್ ಬಾಂಡ್ ಕತೆಗಳು, ಯೋರ್ಡಾನ್ ಪಿರೆಮಸ್- ಜೋರ್ಡಾನ್ ಈಜಿಪ್ಟ್ ಪ್ರವಾಸ ಕಥನ ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ಯೋರ್ಡಾನ್ ಪಿರೆಮಸ್ ಪ್ರವಾಸ ಕಥನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ...

READ MORE

Excerpt / E-Books

ಇದು ನಮ್ಮ ಊರು ಎಂಬ ಹೆಮ್ಮೆ, ಅಭಿಮಾನ ಮಲ್ಲಿಕಾರ್ಜುನರಿಂದ ಇಷ್ಟು ವಿವರವಾದ ಪುಸ್ತಕವನ್ನು ಬರೆಸಿಕೊಂಡಿದೆ. ಈ ಗೆಳೆಯನ ಕಣ್ಣಿಗೆ ಸಾಮಾನ್ಯವಾದದೂ ಮುಖ್ಯವಾಗಿ ಕಾಣುತ್ತದೆ. ಹಾಗಾಗಿ ಅದಕ್ಕೂ ಪುಟದ ಮೀಸಲು. ಚಿಕ್ಕದು ಎಂದು ಬಿಡದೆ ದಾಖಲಿಸಬೇಕೆಂಬ ಹಂಬಲಿಗ ಮಲ್ಲಿಕಾರ್ಜುನ. ಹಾಗಾಗಿ ಸಿಕ್ಕಿದ್ದನ್ನು ಹೃದಯದಲ್ಲಿ ಬಾಚಿ ಅಕ್ಷರಗಳಲ್ಲಿ ಸುರಿದಿದ್ದಾರೆ. ಹೀಗೆ ಸುರಿಯುವಾಗ ನಿರೂಪಣೆಯಲ್ಲಿ ಪತ್ರಕರ್ತನ ವರದಿಯ ಗುಣ, ಲೇಖನದ ಲಕ್ಷಣ, ಗದ್ಯದ ಸರಳ ಶೈಲಿಯಲ್ಲಿ ಬರಹಗಳು ಮೂಡಿವೆ.

ಛಾಯಾಚಿತ್ರಕಾರನಾಗಿ ಹೆಸರು ಮಾಡಿರುವ ಈತ ಕ್ಯಾಮೆರಾ ಕಣ್ಣನ್ನು ಬಳಸಿಕೊಂಡು ಸಚಿತ್ರ ಲೇಖನಗಳನ್ನಾಗಿ ಮಾಡಿರುವುದು ಗಮನಾರ್ಹ ಅಂಶ. ಚಿತ್ರಗಳು ನುಡಿಗೆ ಸಾಕ್ಷಿಗಳಾಗುತ್ತವೆ. ನುಡಿ-ಚಿತ್ರಗಳಿಂದ ಸಿಂಗಾರಗೊಂಡ ’ಜ್ಞಾಪಕ ಚಿತ್ರಶಾಲೆ’ ಎಂದರೆ ಇದಕ್ಕೊಂದು ಪೂರ್ಣಾರ್ಥ ಸಿಗುತ್ತದೆ. ಶಿಡ್ಲಘಟ್ಟ ಹಾಗೂ ತಾಲ್ಲೂಕಿನ ಒಡಲೊಳಗೆ ಇಷ್ಟೊಂದು ಸಿರಿವಂತಿಕೆ ಉಂಟೆ ಎಂಬ ಬೆರಗು ಮೂಡಿಸುವ ಈ ಕೃತಿ ಅನೇಕ ವಿಷಯಗಳ ದಾಖಲೆಯಿಂದಾಗಿ ಸಂಶೋಧನೆಗಳಿಗೆ ಕೈಪಿಡಿಯಾಗುವುದಲ್ಲದೆ, ಪ್ರಾಥಮಿಕ ಮಾಹಿತಿಯನ್ನೂ ಒದಗಿಸುತ್ತದೆ.

ಪ್ರೀತಿಯಿಲ್ಲದೆ ಏನೂ ಮಾಡಲಾಗದು. ಮಲ್ಲಿಕಾರ್ಜುನರಲ್ಲಿ ಅದು ಧಾರಾಳವಾಗಿದೆ. ಅದರಿಂದಲೇ ಈ ಕೃತಿ ಮೂಡಿದೆ. ವ್ಯಾಪಕ ಕ್ಷೇತ್ರ ಸಂಚಾರದ ಫಲ ಈ ಕೃತಿ. ಇದನ್ನು ’ತಾಲ್ಲೂಕು ದರ್ಶನ’ವೆಂದಷ್ಟೇ ಪರಿಗಣಿಸಲಾಗದು. ಏಕೆಂದರೆ ಅಂಥ ಕೃತಿಗಳಿಗಿಂತ ಸಾಕಷ್ಟು ಭಿನ್ನವಾಗಿದೆ, ಇದು. ಜನಜೀವನ, ಸಸ್ಯ-ಪ್ರಾಣಿ ಪರಿಸರ, ಗತ ಹಾಗೂ ವರ್ತಮಾನದ ಚಹರೆಗಳನ್ನು ಬಿಡಿಸಿರುವ ಈ ಕೃತಿ, ಕಾಲ, ಕಾರ್ಯ, ಕಾರಣಗಳತ್ತಲೂ ಗಮನ ಸೆಳೆಯುತ್ತದೆ.

-ಸ.ರಘುನಾಥ, ಸಾಹಿತಿ, ಶ್ರೀನಿವಾಸಪುರ

Related Books