thrilling ವೀರಪ್ಪನ್

Author : ಕಟ್ಟೆ ಗುರುರಾಜ್

Pages 148

₹ 100.00




Year of Publication: 2016
Published by: ಚಿನ್ಮಯ ಪ್ರಕಾಶನ
Address: ಬೆಂಗಳೂರು

Synopsys

ಲೇಖಕ ಕಟ್ಟೆ ಗುರುರಾಜ್ ಅವರು ಬರೆದ ಕೃತಿ-thrilling ವೀರಪ್ಪನ್. ಕಾಡುಗಳ್ಳ ವೀರಪ್ಪನ್ ಅವರ ಸಹಚರ ಏಳುಮಲೈ ಅವರು ಹೇಳಿದ ರಾಜ್ ಕಥೆಗಳು ಎಂಬ ಉಪಶೀರ್ಷಿಕೆಯಡಿ ರಾಜ್ ಅವರ ಅಪಹರಣ ಕುರಿತು ಮಹತ್ವದ ವಿದ್ಯಮಾನಗಳನ್ನು, ರಾಜ್ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ರೀತಿಯಲ್ಲಿ ಬರೆಹಗಳು ದಾಖಲಿಸಲಾಗಿದೆ. ಆ ಮೂಲಕ, ಅಪಹರಣದ ಸಂದರ್ಭದಲ್ಲಿ ಕಾಡುಗಳ್ಳ ವೀರಪ್ಪನ್, ಡಾ. ರಾಜ್ ಮಧ್ಯೆ ಇದ್ದ ತಿಳಿವಳಿಕೆ, ಬಂಧನದಿಂದ ಬಿಡುಗಡೆಗೊಳಿಸಲು ನಡೆದ ರಾಜಕಾರಣ ಇತ್ಯಾದಿ ವಿದ್ಯಮಾನಗಳನ್ನು ಕಥೆಗಳ ರೂಪದಲ್ಲಿ ದಾಖಲಿಸಿದೆ..

About the Author

ಕಟ್ಟೆ ಗುರುರಾಜ್
(06 October 1977)

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರದವರಾದ ಕಟ್ಟೆ ಗುರುರಾಜ್‌ ವೃತ್ತಿಯಲ್ಲಿ ಪತ್ರಕರ್ತರು.  ತಂದೆ - ಕೆ.ರಾಮಚಂದ್ರರಾವ್, ತಾಯಿ ಸಾವಿತ್ರಮ್ಮ. ಊರಲ್ಲೇ ಪ್ರಾಥಮಿಕ ಶಿಕ್ಷಣ ಹಾಗೂ ಪದವಿ ಶಿಕ್ಷಣ ಪಡೆದ ಇವರು, ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಮೈಸೂರು ವಿವಿ, ಸ್ನಾತಕೋತ್ತರ ಪತ್ರಿಕೋದ್ಯಮ ಪದವಿ ಪಡೆದಿದ್ದಾರೆ.  ಪತ್ರಿಕೋದ್ಯಮ ವೃತ್ತಿ ಸೇರಿದ ಮೇಲೆ ಸಂಗೀತ, ಓದು, ಬರಹ, ಚಿತ್ರಕಲೆ, ಸಿನಿಮಾ, ಸುತ್ತಾಟ ಇವರ ಪ್ರವೃತ್ತಿ. ಕಳೆದ 16 ವರ್ಷಗಳಲ್ಲಿ ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಕನ್ನಡಪ್ರಭದಲ್ಲಿ ಕಾರ್ಯನಿರ್ವಹಿಸಿರುವ ಇವರು ಪ್ರಸ್ತುತ ಉದಯವಾಣಿಯಲ್ಲಿ ಹಿರಿಯ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. 'ಕರಗುತಿರುವ ಹಿಮಾಲಯದ ನೀರ್ಗಲ್ಲುಗಳು' ಬರಹಕ್ಕೆ 2008ರ ‘ಚರಕ ಪ್ರಶಸ್ತಿ’ ...

READ MORE

Related Books