ಇದು ಬರಿ ಬೆಡಗಲ್ಲೋ ಅಣ್ಣ

Author : ಕೆ.ಎಸ್. ನಿಸಾರ್ ಅಹಮದ್

₹ 100.00




Year of Publication: 2012
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ. ಗಾಂಧಿನಗರ, ಬೆಂಗಳೂರು, 560009
Phone: 080 4011 4455

Synopsys

ಕೆ.ಎಸ್. ನಿಸಾರ್ ಆಹಮದ್ ಅವರ ಚೊಚ್ಚಲ ಗದ್ಯ ಲೇಖನಗಳ ಸಂಗ್ರಹ 'ಇದು ಬರಿ ಬೆಡಗಲ್ಲೊ ಅಣ್ಣ: ವಿಮರ್ಶಾತ್ಮಕ ಲೇಖನಗಳು, 20ನೇ ಶತಮಾನದ 60-70 ದಶಕಗಳಲ್ಲಿ ರಚಿಸಿದ ಬರಹಗಳು, ಉಪನ್ಯಾಸದ ಸಂಗ್ರಹಗಳು ಇಲ್ಲಿವೆ.

‘ಕನ್ನಡ ಕಾವ್ಯದ ಭವಿಷ್ಯ, ಕವಿಯಾಗಿ ನನ್ನ ಅನುಭವ, ನಾನು ಮತ್ತು ನನ್ನ ಕಾವ್ಯ, ಕಾವ್ಯದ ಬಗೆಗೆ ಕೆಲವು ತಾತ್ವಿಕ ಚಿಂತನೆಗಳು, ಕುವೆಂಪು ಕಾವ್ಯದಲ್ಲಿ ವೈಚಾರಿಕತೆ, ಬೇಂದ್ರೆ ಕಾವ್ಯದಲ್ಲಿ ವೈಚಾರಿಕತೆ, ಪಂಜೆಯವರ ಕವಿತೆಗಳು, ಜಿ.ಪಿ. ರಾಜರತ್ನಂ ಅವರ ಪದ್ಯಗಳು, ಕುವೆಂಪು ಕಾದಂಬರಿಗಳಲ್ಲಿ ಪ್ರಾದೇಶಿಕತೆ ಅವಲೋಕನ, ಕೆ.ಎಸ್. ನ. ಅವರ 'ತೆರೆದ ಬಾಗಿಲು', ಬಿ.ಜಿ.ಎಲ್. ಸ್ವಾಮಿ ಅವರ 'ಹುಸುರು ಹೊನ್ನು’, ಬೇಂದ್ರೆ ಅವರ 'ಮನದನ್ನೆ’, ಕಡೆಂಗೋಡ್ಲು ಶಂಕರ ಭಟ್ಟರ 'ಮಾದ್ರಿಯ ಚಿತೆ', ಪಾಬ್ಲೊ ನೆರುಡ : ವ್ಯಕ್ತಿ ಮತ್ತು ಕಾವ್ಯ ಸಂಸ್ಕಾರ ಸಭ್ಯತೆಗಳ ಅಪೂರ್ವ ಚೇತನ : ವಿ:ಸೀ’ -ಹೀಗೆ ಮಹತ್ವದ ಲೇಖನಗಳ ಸಂಗ್ರಹ ಇದಾಗಿದೆ.

About the Author

ಕೆ.ಎಸ್. ನಿಸಾರ್ ಅಹಮದ್
(05 February 1936 - 03 May 2020)

ಭಾವಗೀತೆಗಳ ಮೊದಲ ಕನ್ನಡ ಧ್ವನಿಸುರುಳಿ ‘ನಿತ್ಯೋತ್ಸವ’ದ ಕವಿ ಕೆ.ಎಸ್. ನಿಸಾರ್ ಅಹಮದ್ ಅವರು ಕವಿತೆ, ವಿಮರ್ಶೆ, ಅನುವಾದದ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಅವರ ತಂದೆ ಮೈಸೂರು ಸರ್ಕಾರದಲ್ಲಿ ರೆವೆನ್ಯೂ ಅಧಿಕಾರಿಯಾಗಿದ್ದ ಕೆ.ಎಸ್. ಹೈದರ್ ಮತ್ತು ತಾಯಿ ಗೃಹ ವಿಜ್ಞಾನ ಪದವೀಧರೆ ಹಮೀದಾ ಬೇಗಂ. 1936ರ ಫೆಬ್ರುವರಿ 5ರಂದು ಜನಿಸಿದರು. ಬೆಂಗಳೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು, ಹೊಸಕೋಟೆಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿಗಳಿಸಿದ ಇವರು ಭೂವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಗಳಿಸಿದರು. ಮೈಸೂರು ಸರಕಾರ ಭೂವಿಜ್ಞಾನ ಇಲಾಖೆಯಲ್ಲಿ ಒಂದಿಷ್ಟು ಕಾಲ ಸೇವೆ ಸಲ್ಲಿಸಿದರು. ಅನಂತರ ಕಾಲೇಜು ...

READ MORE

Related Books