ಕನ್ನಡತನ ಮತ್ತು ಭಾರತೀಯತೆ

Author : ಪಿ. ವಿ. ನಾರಾಯಣ

Pages 44

₹ 5.00




Year of Publication: 1991
Published by: ಸಾಹಿತಿಗಳ ಕಲಾವಿದರ ಬಳಗ
Address: ಬೆಂಗಳೂರು - 550040

Synopsys

‘ಕನ್ನಡತನ ಮತ್ತು ಭಾರತೀಯತೆ’ ಹಿರಿಯ ಲೇಖಕ, ಸಂಶೋಧಕ ಪಿ.ವಿ. ನಾರಾಯಣ ಕನ್ನಡ ಪರ ಚಳವಳಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ಭಾಷೆಯ ಕುರಿತು ಸ್ವಾಭಿಮಾನ ಬೆಳೆಸುವಂತಹ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಐತಿಹಾಸಿಕ ಪ್ರಜ್ಞೆ, ಜಗತ್ತಿನ ಇತರೆ ಭಾಗಗಳ ಆಗುಹೋಗುಗಳು, ಸಮಕಾಲೀನ ಅರಿವು ಹೀಗೆ ಭಾವಾವೇಶವಿಲ್ಲದ ಆದರೆ ಭಾವಪೂರ್ಣವಾದ ಚಿಂತನಶೀಲವಾದ ಬರೆಹಗಳು ಈ ಕೃತಿಯಲ್ಲಿವೆ.

About the Author

ಪಿ. ವಿ. ನಾರಾಯಣ
(18 December 1942)

ಡಾ. ಪಿ. ವಿ. ನಾರಾಯಣ, ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಪ್ರವಾಚಕರಾಗಿದ್ದರು. ತಂದೆ ಪಿ.ವೆಂಕಪ್ಪಯ್ಯ, ತಾಯಿ ನರಸಮ್ಮ. ಬೆಂಗಳೂರಿನಲ್ಲಿ 1942ರ ಡಿ.18 ರಂದು ಹುಟ್ಟಿದರು.  ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್), “ವಚನ ಸಾಹಿತ್ಯ: ಒಂದು ಸಾಂಸ್ಕೃತಿಕ ಅಧ್ಯಯನ” ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದಿದ್ದಾರೆ.. ವಿಮರ್ಶೆ/ಸಂಶೋಧನೆ-ಬಳ್ಳಿಗಾವೆ, ಕಾಯತತ್ತ್ವ, ಚಂಪೂಕವಿಗಳು, ವಚನ ಚಳವಳಿ, ವಚನ ವ್ಯಾಸಂಗ ಮೊದಲಾದ 16ಕೃತಿಗಳು. ಸಂಪಾದಿತ-ಬಸವ ಪುರಾಣ ಸಂಗ್ರಹ, ಪದ್ಮಿನೀ ಪರಿಣಯ ಮೊದಲಾದ 5 ಕೃತಿಗಳು. ಅನುವಾದ-ಮದುವೆ ಮತ್ತು ನೀತಿ, ಹನ್ನೆರಡನೇ ರಾತ್ರಿ, ಅಶ್ವತ್ಥಾಮನ್, ಬುವಿಯ ಬಸಿರಿಗೆ ಪಯಣ, ಪಂಪ ರಾಮಾಯಣ  ಮುಂತಾದ 12 ಕೃತಿಗಳು. ಕಾದಂಬರಿಗಳು-ಸಾಮಾನ್ಯ, ...

READ MORE

Related Books