ಆದಿಕವಿ ವಾಲ್ಮೀಕಿ

Author : ಮಾಸ್ತಿ ವೆಂಕಟೇಶ್ ಅಯ್ಯಂಗಾರ್ (ಶ್ರೀನಿವಾಸ)

Pages 277

₹ 2.00




Year of Publication: 1955
Published by: ಜೀವನ ಕಾರ್ಯಾಲಯ
Address: ಬಸವನಗುಡಿ, ಬೆಂಗಳೂರು

Synopsys

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಬರೆದ ಕೃತಿ -ಆದಿಕವಿ ವಾಲ್ಮೀಕಿ. 1933 ಹಾಗೂ 1946 ಹೀಗೆ ಎರಡು ಮುದ್ರಣ ಕಂಡಿದೆ. ಮದರಾಸಿನ ಗೀರ್ವಾಣ ಭಾಷಾ ಪರಿಷತ್ತಿನಲ್ಲಿ ಇಂಗ್ಲಿಷಿನಲ್ಲಿ ಹಾಗೂ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡದಲ್ಲಿ ಮತ್ತು ಬೆಂಗಳೂರಿನ ತರುಣ ಜನರ ಕ್ರೈಸ್ತಕೂಟದಲ್ಲಿ ಇಂಗ್ಲಿಷಿನಲ್ಲಿ ’ಆದಿಕವಿ ವಾಲ್ಮೀಕಿ ’ ಕುರಿತು ಮಾಡಿರುವ ಉಪನ್ಯಾಸಗಳ ಸಾರವೇ ಈ ಕೃತಿ ಎಂದು ಲೇಖಕರು ಹೇಳಿದ್ದಾರೆ.

ರಾಮಾಯಣದ ಉಪೋದ್ಘಾತ, ಆರು ಕಾಂಡಗಳ ವಿಷಯ, ಕಥೆ ಪಾತ್ರಗಳ ಪರಿಶೀಲನೆ, ವಾಲ್ಮೀಕಿಯ ವರ್ಣನೆಗಳು, ವಾಲ್ಮೀಕಿಯ ಕಥಾಕೌಶಲ, ಕಾವ್ಯಚಿತ್ರಿಸುವ ಸಂಸ್ಕೃತಿ, ವಾಲ್ಮೀಕಿ ತುಲಾಭಾರ, ಕಾವ್ಯ ವೇದ, ಮಾನವ ದೇವ, ವಂದೇ ವಾಲ್ಮೀಕಿ ಕೋಕಿಲಂ ಹೀಗೆ 16 ವಿಷಯ ವೈವಿಧ್ಯತೆಯ ಲೇಖನಗಳನ್ನು ಈ ಕೃತಿ ಒಳಗೊಂಡಿದೆ. ರಾಮಾಯಣವನ್ನು ಮೊದಲು ಕಾವ್ಯವಾಗಿ ನೋಡಬೇಕು. ನಂತರದ ಪ್ರಶ್ನೆ ಮತಧರ್ಮದ್ದು ಎಂದು ಲೇಖಕರು ತಮ್ಮ ನಿಲುವನ್ನು ಪ್ರತಿಪಾದಿಸಿದ್ದಾರೆ.

About the Author

ಮಾಸ್ತಿ ವೆಂಕಟೇಶ್ ಅಯ್ಯಂಗಾರ್ (ಶ್ರೀನಿವಾಸ)
(08 June 1891 - 07 June 1986)

‘ಶ್ರೀನಿವಾಸ’ ಕಾವ್ಯನಾಮದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಕನ್ನಡ ಸಣ್ಣಕತೆಗಳ ರಚನೆಗೆ ಖಚಿತ ರೂಪ ನೀಡುವುದಕ್ಕೆ ಕಾರಣರಾದ ಆದ್ಯರು. ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ 1891ರ ಜೂನ್ 8ರಂದು ಜನಿಸಿದರು. ತಂದೆ ರಾಮಸ್ವಾಮಿ ಅಯ್ಯಂಗಾರ್ ತಾಯಿ ತಿರುಮಲ್ಲಮ್ಮ. ಪ್ರೌಢವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲೂ, ಎಫ್.ಎ. ಅನ್ನು ಮಹಾರಾಜ ಕಾಲೇಜಿನಲ್ಲೂ ಮುಗಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಮುಗಿಸಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂಎ ಪದವಿ (1914) ಪಡೆದರು. ಮೈಸೂರು ಸರ್ಕಾರದ ಅಸಿಸ್ಟೆಂಟ್ ಕಮೀಷನರ್ (1914) ಆಗಿ ಕೆಲಸಕ್ಕೆ ಸೇರಿದರು. ಸರ್ ಎಂ. ವಿಶ್ವೇಶ್ವರಯ್ಯನವರ ಕೈಕೆಳಗೆ ಕೆಲಸ ಮಾಡಿದ ...

READ MORE

Related Books