ಮುಂಬೈ ಎಂಬ ಮಾನಸಿಕ ಕ್ರಿಯೆ

Author : ವಿ.ಎಸ್. ಶಾನಭಾಗ

Pages 114

₹ 75.00




Year of Publication: 2017
Published by: ತೇಜು ಪಬ್ಲಿಕೇಷನ್
Address: # 233, 7ನೇ A ಅಡ್ಡರಸ್ತೆ, ಶಾಸ್ತ್ರೀನಗರ, ಬೆಂಗಳೂರು-560028
Phone: 9900195626

Synopsys

ಲೇಖಕ ವಿ.ಎಸ್. ಶ್ಯಾನಭಾಗ್ ಅವರು ಕಳೆದ ಎರಡು ದಶಕಗಳಿಂದ ಮುಂಬೈನಲ್ಲಿ ವಾಸಿಸುತ್ತಿದ್ದು, ಮಾಯಾನಗರಿಯ ಮಾಯಾಲೋಕವನ್ನು ಇಲ್ಲಿ ವಿವರಿಸಿದ್ದಾರೆ. ಮುಂಬೈಯನ್ನು ಒಬ್ಬ ವ್ಯಕ್ತಿಯಾಗಿ ಕಂಡು ಆತನಲ್ಲಿಯ ಹರ್ಷ, ಸಂತಸ, ನೋವು, ನಿರಾಶೆ-ಬೇಸರಗಳನ್ನು ದಾಖಲಿಸುತ್ತಾರೆ. ತೀರಾ ಸರಳ ಭಾಷೆಯಲ್ಲಿಯ ಈ ಬರೆಹವು ಮುಂಬೈ ಇತಿಹಾಸವನ್ನೂ ನೆನಪಿಸುತ್ತದೆ. ಮುಂಬೈಯ ಸ್ಥಳೀಯ ಭಾಷೆಯನ್ನೂ ಕಟ್ಟಿಕೊಟ್ಟಿದ್ದಾರೆ. ಲೇಖಕರ ಮುಂಬೈ ಜೀವನ ಪಯಣದ ಚಿತ್ರಣವೂ ಈ ಕೃತಿಯಲ್ಲಿದ್ದು, ಆಕರ್ಷಕ ಶೈಲಿಯು ಓದುಗರ ಗಮನ ಸೆಳೆಯುತ್ತದೆ.

About the Author

ವಿ.ಎಸ್. ಶಾನಭಾಗ

ಲೇಖಕ ವಿ.ಎಸ್. ಶಾನಭಾಗ (ವಿವೇಕ ಎಸ್. ಶಾನಭಾಗ) ಮೈಸೂರು ಜಿಲ್ಲೆಯ ರಿಪ್ಪನಪೇಟೆಯವರು. ಮೈಸೂರು ವಿ.ವಿ.ಯಿಂದ ಬಿ.ಎಸ್.ಸಿ ಹಾಗೂ ಮುಂಬೈ ವಿ.ವಿ.ಯಿಂದ ಎಂ.ಎ, ಪದವೀಧರರು. ಇವರು ಬೆಳೆದಿದ್ದು ಉಪ್ಪುಂದ ಕುಂದಾಪುರದಲ್ಲಿ. ತಟ್ಟೀರಾಯ ಮತ್ತು ನಾನು, ಹೊಳೆದಿದ್ದನ್ನು ಹೇಳಲಿಲ್ಲ, ಇದು ಅಂತರೆಂಗದ ಸುದ್ದಿ, ಶಬ್ದತೀರದ ಆಚೆ ಈಚೆ, ಮಾತು ಮೌನಗಳ ಮಧ್ಯೆ,ಒದ್ದೆ ಬಳಪದ ಹಾದಿ, ಪಕಳಿಗಳು (ಕವನ ಸಂಕಲನಗಳು), ಹೂವು ಬಿಡುವಾಗಿನ ಕನಸು ಹೊತ್ತು, ಹೊಳೆದಷ್ಟು ಸಾಲು ಸಾಲು, ಮುಂಬೈ ಎಂಬ ಮಾನಸಿಕ ಕ್ರಿಯೆ ಹೀಗೆ ಇತರೆ ಕೃತಿಗಳನ್ನು ರಚಿಸಿದ್ದಾರೆ. ಮುಂಬೈಯಲ್ಲಿ ನಡೆದ ಕನ್ನಡ ಕವಿಗೋಷ್ಠಿಗಳಲ್ಲಿ ಭಾಗಿ ಹಾಗೂ ಅಧ್ಯಕ್ಷತೆವಹಿಸಿದ್ದಾರೆ. ...

READ MORE

Related Books