ಸುಭಾಷರ ಕಣ್ಮರೆ; ಅನ್ಯಾಯದ ಅಧ್ಯಾಯ

Author : ಕೆ.ಎಸ್‍. ನಾರಾಯಣಾಚಾರ್ಯ

Pages 183

₹ 135.00

Buy Now


Year of Publication: 2013
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪೀಕರ್ ಬೀದಿ, ಹುಬ್ಬಳ್ಳಿ- 580020
Phone: 08362367676

Synopsys

ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರು ಬರೆದ ಕೃತಿ-ಸುಭಾಷರ ಕಣ್ಮರೆ; ಅನ್ಯಾಯದ ಅಧ್ಯಾಯ. ಸ್ವಾತಂತ್ಯ್ರ ಹೋರಾಟಗಾರ ಸುಭಾಶ್ಚಂದ್ರ ಬೋಸ್ ಅವರ ಸಾವು ಇಂದಿಗೂ ನಿಗೂಢ. ಅವರು ವಿದೇಶಿದಲ್ಲಿ ತೀರಿಕೊಂಡರೋ, ವಿಮಾನ ಅಪಘಾತದಲ್ಲಿ ತೀರಿಕೊಂಡರೋ ಇಲ್ಲವೇ ಭಾರತದಲ್ಲೇ ನಿಗೂಢವಾಗಿದ್ದು, ತೀರಿಕೊಂಡರೋ? ಸುಭಾಶ್ಚಂದ್ರ ಬೋಸರನ್ನು ತಮಗೆ ಒಪ್ಪಿಸಬೇಕು ಎಂಬ ಷರತ್ತಿನ ಮೇರೆಗೆ ಬ್ರಿಟಿಷರಿಂದ ಸ್ವಾತಂತ್ಯ್ರ ಪಡೆಯಲಾಗಿತ್ತು ಎಂಬ ವದಂತಿಗಳ ಹಿನ್ನೆಲೆಯಲ್ಲಿ ಸುಭಾ಼ಷರು ಕೊನೆಗೂ ರಹಸ್ಯವಾಗೇ ಉಳಿಯಲು ಕಾರಣ.. ಹೀಗೆ ಅವರ ಬಗ್ಗೆ ವದಂತಿಗಳೇ ಹೆಚ್ಚು. ವಾಸ್ತವವನ್ನು ದೇಶದ ಜನತೆ ತಿಳಿಯುವುದು ಅವರ ಹಕ್ಕು. ಈ ಕುರಿತು ಲೇಖಕರು ಜಿಜ್ಞಾಸೆ ನಡೆಸಿದ್ದೇ ಈ ಕೃತಿಯ ಜೀವಾಳ.

About the Author

ಕೆ.ಎಸ್‍. ನಾರಾಯಣಾಚಾರ್ಯ
(31 October 1933 - 26 November 2021)

ಹಿರಿಯ ವಿದ್ವಾಂಸ ಹಾಗೂ ಪ್ರವಚನಕಾರರೂ ಆಗಿರುವ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಮೂಲತಃ ಬೆಂಗಳೂರು ಜಿಲ್ಲೆಯ  (ಈಗಿನ ಕನಕಪುರ) ಕನಕನಹಳ್ಳಿಯವರು. ತಂದೆ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್. ತಾಯಿ ರಂಗನಾಯಕಮ್ಮ. ವೈದಿಕ ವಿದ್ವಾಂಸರ ಕುಟುಂಬ ಇವರದು.ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್.ಸಿ. ಪದವೀಧರರು. ನಂತರ ಬಿ.ಎ. ಆನರ್ಸ್‌ ಮಾಡಿ, ಆಧುನಿಕ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್‌ ಅವರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಆ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೇದಗಳು, ರಾಮಾಯಣ, ...

READ MORE

Related Books