ಕಾವೇರಿ ಹರಿದು ಬಂದ ದಾರಿ

Author : ಟಿ. ಆರ್. ಅನಂತರಾಮು

Pages 184

₹ 100.00




Year of Publication: 2012
Published by: ಕೀರ್ತನ ಪ್ರಕಾಶನ
Address: #85, ಗಿರಿದರ್ಶಿನಿ, 3ನೇ ಕ್ರಾಸ್, ಮೌಟ್ ಜಾಯ್ ಬಡಾವಣೆ, ಹನುಮಂತನಗರ ಬೆಂಗಳೂರು-560019

Synopsys

`ಕಾವೇರಿ ಹರಿದು ಬಂದ ದಾರಿ’ ಕೃತಿಯು ಕನ್ನಡ ಸಾಹಿತ್ಯ, ವಿಜ್ಞಾನ ಸಾಹಿತ್ಯ ಹಾಗೂ ಆರ್. ಎ. ಸಂಚಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಒಳಗೊಂಡಿದೆ. ಈ ಸಂಕಲನದಲ್ಲಿ ಸೇರಿರುವ ಲೇಖನಗಳು ಕೆಲವು ಪತ್ರಿಕೆಗಳಲ್ಲಿ ಬೆಳಕುಕಂಡಿವೆ. ಈ ಕೃತಿಯು 20 ಅಧ್ಯಾಯಗಳಾದ, ನಾಡ ನಲಿದಾಡಿಸುವ ಜೀವನದಿ ಕಾವೇರಿ, ಕಾವೇರಿ ಕಣಿವೆಯ ಜೀವಸಂಪನ್ಮೂಲ, ಮಶೀರ್ ಬೇಟೆಯ ರೋಚಕ ನೆನಪುಗಳು, ಬತ್ತುತ್ತಿರುವ ಕಾವೇರಿ, ಇಂತು ತೀರ್ಥೋದ್ಭವ, ಎಂಥ ಮರಳಯ್ಯ ಇದು ಎಂಥ ಮರಳು!, ತಲಕಾಡಿನ ಮರಳು ರಾಶಿಯತ್ತ ಹೊರಳುನೋಟ, ಕಾವೇರಿ ನದಿಯ ಭೂವೈಜ್ಞಾನಿಕ ವಿಕಾಸ, ಮೇಕೆದಾಟು; ಕಾವೇರಿಯ ಶಿಲ್ಪಕಲಾ ಶಾಲೆ, ಕಾವೇರಿಯ ಮಾಲಿನ್ಯ: ಮುಂದಿನ ಊರಿಗೆ, ಮುಂದಿನ ಪೀಳಿಗೆ, ಕಾವೇರಿ: ಗಗನದಿಂದ ಕಂಡಂತ, ಕಾವೇರಿ ನೀರಿಗೆ ರಾಜಕೀಯ ರಾಡಿ, ಕಾವೇರಿ ಮತ್ತು ನೀರಾವರಿ ಅಭಿವೃದ್ದಿ, ಕಾವೇರಿ ಕಣಿವೆಯ ಅಂತರ್ಜಲ ಸಂಪನ್ಮೂಲ, ಪರ್ಯಾಯ ಬೆಳೆ ನದಿ ನೀರಿನ ಸಮಸ್ಯೆಗೆ ಪರಿಹಾರ,ಗಂಗಾ ಕಾವೇರಿ ಸಮರ್ಪಕ ನಾಲೆ, ಅಂತರ್ ರಾಜ್ಯ ನದಿ ನೀರು ವಿವಾದ, ಅಗಸ್ತ್ಯನ ವಿವಾದ, ಅನುಬಂಧಗಳನ್ನು ಒಳಗೊಂಡಿದೆ.

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books