ಹಬ್ಬಗಳ ಸಿರಿ

Author : ವೈ.ಬಿ. ಕಡಕೋಳ

Pages 232

₹ 200.00




Year of Publication: 2021
Published by: ಎಸ್. ಎಲ್. ಎನ್. ಪಬ್ಲಿಕೇಷನ್
Address: # 3437,(ನೆಲಮಾಳಿಗೆ) 4ನೇ ಮುಖ್ಯರಸ್ತೆ, 9ನೇ ಶಾಸ್ತ್ರೀನಗರ, ಬನಶಂಕರಿ, 2ನೇ ಹಂತ, ಬೆಂಗಳೂರು-28
Phone: 9972129376

Synopsys

`ಹಬ್ಬಗಳ ಸಿರಿ'  ಲೇಖಕ ವೈ.ಬಿ.ಕಡಕೋಳ ಅವರ 71 ಲೇಖನಗಳ ಕೃತಿ. ಸಾಹಿತಿ ಡಾ. ವ್ಹಿ. ಬಿ. ಸಣ್ಣ ಸಕ್ಕರಗೌಡರ ಅವರು ಕೃತಿಗೆ ಮುನ್ನುಡಿ ಬರೆದು ‘ಶಾಲೆಯಲ್ಲಿ ಕಂಠಪಾಠ ಮಾಡಿಸುತ್ತಿದ್ದ ‘ಚೈತ್ರ ವೈಶಾಖ ದಂತಹ ನೆನಪು ಮತ್ತೆ ನೆನಪಿಗೆ' ತರುವಂತ ಪ್ರಯತ್ನ ಲೇಖಕರು ಮಾಡಿದ್ದಾರೆ. ಇಲ್ಲಿ ಚೈತ್ರ ಮಾಸದಿಂದ ಹಿಡಿದು ಪಾಲ್ಗುಣ ಮಾಸದ ವರೆಗೆ ಅಂದರೆ ಆಯಾ ಮಾಸಗಳಲ್ಲಿ ಬರುವ ಹುಣ್ಣಿಮೆ, ಅಮವಾಸ್ಯೆ, ಜಯಂತಿ, ಉತ್ಸವಗಳ ಸುಂದರ ಹೂದೋಟ ಅರಳಿ ನಿಂತಿದೆ ಚಂದದಿಂದ. ನೋಡಗರ ಮನಸ್ಸು ಆನಂದದ ಹೊಳೆಯಲ್ಲಿ ತೇಲಿಸುವದು ಸಹಜತೆಯಲ್ಲಿ. ದೇಶಿಯ ಸೊಗಡಿನ ಹಬ್ಬಗಳನ್ನು ಮನದುಂಬಿ ಬಣ್ಣಿಸಿ ಅವುಗಳ ವೈಶಿಷ್ಟ್ಯವನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಕಾಮದಹನದ ಐತಿಹ್ಯಕಥೆಗಳನ್ನು ಲೇಖನಕ್ಕೆ ಪೂರಕವಾಗಿ ಬಳಸಿ ಕೊಂಡಿದ್ದಾರೆ. ಕೃತಿಯ ಕೊನೆಯ ಲೇಖನ ‘ಶ್ರೀರಾಮಕೃಷ್ಣ ಜಯಂತಿ’ ಬರಹವು ಭಾರತೀಯ ಸಂಸ್ಕೃತಿಯ ಮೇಲೆ, ಸಂಪ್ರದಾಯ, ತಿಥಿ, ನಕ್ಷತ್ರ, ಪಂಚಾಗದ ಬಗ್ಗೆ ಬರೆಯುವ ಲೇಖಕರು ನಮ್ಮ ಮೂಲ ಸಂಸ್ಕೃತಿಯ ವೈಶಿಷ್ಟ್ಯಗಳನ್ನು ಮರೆಯಬಾರದು ಎಂಬ ಕಳಕಳಿಯು ಇಲ್ಲಿಯ ಬರಹಗಳಲ್ಲಿ ಕಾಣಬಹುದು’ ಎಂದು ಪ್ರಶಂಸಿಸಿದ್ದಾರೆ. 

 

About the Author

ವೈ.ಬಿ. ಕಡಕೋಳ

ಲೇಖಕ ವೈ.ಬಿ.ಕಡಕೋಳ ಅವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯವರು.ಸವದತ್ತಿಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ವಿಕಲಚೇತನ ಮಕ್ಕಳ ಸಂಪನ್ಮೂಲ ಶಿಕ್ಷಕರಾಗಿದ್ದಾರೆ. ಸರಕಾರಿ ಪ್ರಾಥಮಿಕ ಶಾಲೆ ತೆಗ್ಗಿಹಾಳದಲ್ಲಿ 17 ವರ್ಷ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಂತರ ಮೂರು ವರ್ಷಗಳ ಕಾಲ ಅರ್ಟಗಲ್ ಕ್ಲಸ್ಟರ್ ಸಿ.ಆರ್.ಪಿ ಯಾಗಿ. ನಿಯೋಜಿತ ಬಿ.ಆರ್.ಪಿ ಯಾಗಿ ಮೂರು ವರ್ಷ ಕಾಲ ಸೇವೆ ಸಲ್ಲಿಸಿದ್ದಾರೆ. ಮುನವಳ್ಳಿ: ಒಂದು ಸಾಂಸ್ಕೃತಿಕ ಅಧ್ಯಯನ ವಿಷಯವಾಗಿ ಅವರು ಹಂಪಿಯ ಕನ್ನಡ ವಿ.ವಿ.ಗೆ ಸಂಶೋಧನಾ ಪ್ರಬಂಧ ಮಂಡಿಸಿ ಎಂ.ಫಿಲ್ ಪದವಿ ಪಡೆದಿದ್ದಾರೆ.  ಕೃತಿಗಳು:  ಸಾವು ಬದುಕಿನ ನಡುವೆ (ಕಥಾ ಸಂಕಲನ) ಸಂಸ್ಕಾರ ಫಲ (ಮಕ್ಕಳ ಕಥಾ ಸಂಕಲನ) ಚರಿತ್ರೆಗೊಂದು ...

READ MORE

Related Books