ಕರ್ಕರೆಯನ್ನು ಕೊಂದವರು ಯಾರು?

Author : ಸುರೇಶ ಭಟ್ ಬಾಕ್ರಬೈಲ್‌

Pages 290

₹ 200.00




Year of Publication: 2010
Published by: ಶೃತಿ ಪ್ರಕಾಶನ
Address: ಎಸ್. ವಿ ಟೆಂಪಲ್ ರೋಡ್, ಕಟಪಡಿ ಉಡುಪಿ - 574105

Synopsys

‘ಕರ್ಕರೆಯನ್ನು ಕೊಂದವರು ಯಾರು?’ ಕೃತಿಯು ಸುರೇಶ ಭಟ್ ಬಾಕ್ರಬೈಲ್ ಅವರ ಅನುವಾದಿತ ಕೃತಿಯಾಗಿದೆ. ಮಹಾರಾಷ್ಟ್ರದ ಮಾಜಿ ಪೊಲೀಸ್ ಮಹಾನಿರ್ದೇಶಕ ಎಸ್.ಎಂ. ಮುಶ್ರೀಫ್ ಅವರ ಮೂಲ ಕೃತಿ. ಮುಂಬೈ ಮೇಲಿನ ದಾಳಿಯ ಸಂದರ್ಭದಲ್ಲಿ ಭಯೋತ್ಪಾದಕ ನಿಗ್ರಹ ದಳದ ಮುಖ್ಯಸ್ಥ ಹಾಗೂ ನಿಷ್ಠಾವಂತ ಅಧಿಕಾರಿಯಾಗಿದ್ದ ಹೇಮಂತ ಕರ್ಕೆರರನ್ನು ಹತ್ಯೆ ಮಾಡಲಾಯಿತು. ಹಲವು ಮಹತ್ವದ ಪ್ರಕರಣಗಳನ್ನು ಬಯಲಿಗೆಳೆಯುವಲ್ಲಿ ಪಾತ್ರ ವಹಿಸಿದ್ದ ಒಬ್ಬ ಮಾಜಿ ಹಿರಿಯ ಪೊಲೀಸ್ ಅಧಿಕಾರಿ ತನ್ನ ದೀರ್ಘಾವಧಿಯ ಅನುಭವದ ನೆರವಿನೊಂದಿಗೆ ತೆರೆಯ ಹಿಂದಿದ್ದ ಸತ್ಯವನ್ನು ಈ ಪುಸ್ತಕಲ್ಲಿ ಹೊರಗೆಡವಿದ್ದಾರೆ. ಜನರನ್ನು ದಿಗ್ಬ್ರಮೆಗೊಳಪಡಿಸುವಂತಹ ಕೆಲವು ವಾಸ್ತವತೆ ಹಾಗೂ ವಿಶ್ಲೇಷಣೆಗಳೊಂದಿಗೆ ಈ ಪುಸ್ತಕ ಹೊರಬಂದಿದೆ. ಭಾರತದಲ್ಲಿ ಆರೋಪಿಸಲಾಗುತ್ತಿರುವ ಇಸ್ಲಾಮಿಕ್ ಭಯೋತ್ಪಾದನೆಯ ಹಿಂದಿರುವ ನಿಜವಾದ ಶಕ್ತಿಗಳನ್ನು ಮತ್ತು ಅವುಗಳನ್ನು ಬಯಲಿಗೆಳೆಯುವುದಕ್ಕಾಗಿ ತನ್ನ ಜೀವವನ್ನೇ ಬಲಿಕೊಟ್ಟ, ಮಹಾರಾಷ್ಟ್ರ, ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕೆರೆ ಅವರ ಹತ್ಯೆಯ  ಹಿಂದಿರುವ ಶಕ್ತಿಗಳ ಕೈವಾಡವನ್ನು ಬಹಿರಂಗ ಪಡಿಸಿದೆ.

About the Author

ಸುರೇಶ ಭಟ್ ಬಾಕ್ರಬೈಲ್‌

ಮಂಗಳೂರಿನವರಾದ ಸುರೇಶ ಭಟ್ ಬಾಕ್ರಬೈಲ್ ಅವರು ಸುರತ್ಕಲ್ ನ ಕೆ.ಆರ್.ಇ.ಸಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದವರು. ಮುಂಬಯಿಯಲ್ಲಿ ವಾಣಿಜ್ಯ ನೌಕೆ, ನೌಕಾ ನಿರ್ಮಾಣ, ಡೀಸಲ್ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಅವರು 2006ರಲ್ಲಿ ನಿವೃತ್ತರಾದರು. ನಿವೃತ್ತರಾದ ನಂತರ ಅವರು ಬರಹ ಹಾಗೂ ಮಾನವ ಹಕ್ಕು, ಕೋಮು ಸೌಹಾರ್ದ ಚಳವಳಿಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಕಾಲೀನ ವಿಷಯಗಳ ಬಗ್ಗೆ ಬರೆಯುವದರ ಜೊತೆಗೆ ಕೋಮುವಾದದ ವಿರುದ್ಧ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಕೇಸರಿ ಭಯೋತ್ಪಾದನೆ, ಮಂಕು ಬೂ(ಮೋ)ದಿ ಪುಸ್ತಕಗಳನ್ನು ಬರೆದಿದ್ದಾರೆ. ಹಾಗೆಯೇ ಕರ್ಕರೆಯನ್ನು ಕೊಂದವರು ಯಾರು?, ಜೈಲಿನ ...

READ MORE

Related Books