ಅಂಕೆ ತಪ್ಪಿದ ಆರ್ಥುರೋ ಊಯಿ

Author : ಕೆ.ವಿ. ನಾರಾಯಣ

Pages 96

₹ 50.00




Year of Publication: 2009
Published by: ಅಭಿನವ ಪ್ರಕಾಶನ
Address: ಅಭಿನವ, 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಜರ್ಮನಿಯ ಕವಿ, ನಾಟಕಕಾರ, ನಿರ್ದೇಶಕನಾದ ಬರ್ಟೋಲ್ಟ್ ಬ್ರೆಕ್ಟ್ ನಾಟಕದ ಕನ್ನಡಾನುವಾದ ’ಅಂಕೆ ತಪ್ಪಿದ ಆರ್ಥುರೋ ಊಯಿ ’. ಜಗತ್ತಿನ ಶ್ರೇಷ್ಠ ನಾಟಕಕಾರನಾದ ಬ್ರೆಕ್ಟ್ ಕನ್ನಡ ರಂಗಭೂಮಿಯಲ್ಲಿ ಕಾಣಿಸಿಕೊಂಡಿದ್ದು 1970-71 ರ ಸುಮಾರಿಗೆ. ರಾಷ್ಟ್ರೀಯ ನಾಟಕ ಶಾಲೆಯ ತಂಡದವರು ಶ್ರೀ ಪೆನ್ನಿ ಅಪೆರಾ ಮತ್ತು ಕಕೇಶಿಯನ್ ಚಾಕ್ ಸರ್ಕಲ್ ನಾಟಕಗಳ ಹಿಂದಿ ರೂಪಗಳನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಸ್ತುತಪಡಿಸಿದರು. ಆ ನಾಟಕಗಳಲ್ಲಿ ನಟಿಸಿದ ಕೆಲವು ನಟರು ಭಾರತದ ಬಹುಶ್ರೇಷ್ಠ ನಟನಟಿಯರಾಗಿ ಮುಂದಿನ ದಶಕಗಳಲ್ಲಿ ಬೆಳೆದರು. ಕನ್ನಡದ ಬಿ.ಜಯಶ್ರೀಯವರೂ ಆ ತಂಡದಲ್ಲಿದ್ದರು. ಬಳಿಕ ಬ್ರೆಕ್ಟ್ ನ ನಾಟಕಗಳು ಬಗೆಬಗೆಯಲ್ಲಿ ಕನ್ನಡ ರಂಗಭೂಮಿಯಲ್ಲಿ ಮೈತಳೆಯತೊಡಗಿದವು. ಬ್ರೆಕ್ಟ್ ನಾಟಕಗಳು ಮತ್ತು ಸಿದ್ಧಾಂತಗಳ ಮೋಹದ ಮೂಲಕವೇ ರಂಗಭೂಮಿಗೆ ಬಂದು, ಬೆಳೆದ ನಾಟಕಕಾರ ಸಿ.ಜಿ.ಕೃಷ್ಣಸ್ವಾಮಿ 1990 ರಲ್ಲಿ ದ ರೆಸಿಸ್ಟಬಲ್ ರೈಸ್ ಆಫ್ ಆರ್ಥರೋ ಲೂಯಿ ಎಂಬ ಬ್ರೆಕ್ಟ್ ನಾಟಕವನ್ನು ಕನ್ನಡಕ್ಕೆ ತರಲು ಕೆ.ವಿ.ನಾರಾಯಣರಿಗೆ ಸೂಚಿಸಿದ್ದರು. ಇಂಗ್ಲಿಷ್ ಆವೃತ್ತಿಯ ನಾಟಕವನ್ನು ನೋಡಿದ್ದ ಕೆ.ವಿ.ನಾರಾಯಣ ಅವರು ಆ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಮೂಲ ನಾಟಕವನ್ನು ಕೊಂಚ ರೂಪಾಂತರಿಸಿ ಕನ್ನಡ ರಂಗಭೂಮಿಗೆ ಹೊಂದುವಂತೆ ಆ ನಾಟಕವನ್ನು ಅನುವಾದಿಸಲಾಗಿದೆ. 

About the Author

ಕೆ.ವಿ. ನಾರಾಯಣ
(20 October 1948)

ಕಂಪಲಾಪುರ ವೀರಣ್ಣ ನಾರಾಯಣ ಅವರು ಜನಿಸಿದ್ದು 1948ರಲ್ಲಿ. ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕು ಕಂಪಲಾಪುರ. ಅಮ್ಮ ಕೆಂಚಮ್ಮ ಮತ್ತು ಅಪ್ಪ ವೀರಣ್ಣ. ಮೊದಲ ಹಂತದ ಓದು ಪುತ್ತೂರು ಮತ್ತು ತಾಲ್ಲೂಕು ಕೇಂದ್ರ ಪಿರಿಯಾಪಟ್ಟಣದಲ್ಲಿ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನವನ್ನು ತೆಗೆದುಕೊಂಡು ಪಿ.ಯು.ಸಿ. ಓದಿದರು. ಇಂಜಿನಿಯರಿಂಗ್ ಮಾಡಲು ಅವಕಾಶವಿದ್ದರೂ ಎಂಜಿನಿಯರ್ ಆಗಕೂಡದೆಂದು ತೀರ್ಮಾನಿಸಿದ ಕೆ.ಎ.ಎಸ್ ಮತ್ತೆ ಮೈಸೂರಿನ ಯುವರಾಜ ಕಾಲೇಜಿನಲ್ಲಿ ವಿಜ್ಞಾನದ ಅಭ್ಯಾಸವನ್ನು ಮುಗಿಸಿದರು. ಆನಂತರದಲ್ಲಿ ಬಿ.ಎಡ್. ಮುಗಿಸಿ ಆರಂಭಿಸಿದ್ದು ಹೈಸ್ಕೂಲಿನಲ್ಲಿ ಅಧ್ಯಾಪನ. ಮುಂದಿನ ಓದಿಗಾಗಿ ಮತ್ತೆ ಬೆಂಗಳೂರಿನತ್ತ ಪಯಣ. ಆ ಹೊತ್ತಿಗೇನೆ ಸಾಹಿತ್ಯದ ಓದಿಗೂ ಬಿದ್ದು ಬರವಣಿಗೆಯಲ್ಲೂ ...

READ MORE

Related Books