ಜಾತಿಯವನೇ ಬೇಕು

Author : ಹೇಮಾ ಪಟ್ಟಣಶೆಟ್ಟಿ

Pages 148

₹ 140.00




Year of Publication: 2021
Published by: ಅನನ್ಯ ಪ್ರಕಾಶನ, ಧಾರವಾಡ
Address: ಹೂಮನೆ, ಶ್ರೀದೇವಿನಗರ, ವಿದ್ಯಾಗಿರಿ, ಧಾರವಾಡ-580004
Phone: 94488 61604

Synopsys

ಹೇಮಾ ಪಟ್ಟಣಶೆಟ್ಟಿ ಅವರ ’ಜಾತಿಯವನೇ ಬೇಕು’ ಕೃತಿ  ವಿಜಯ ‘ತೆಂಡುಲಕರ ಅವರ ಪಾಹಿಜೆ ಜಾತೀಜೆ ನಾಟಕದ ಕನ್ನಡಾನುವಾದವಾಗಿದೆ. ಭಾರತೀಯ ಸಮಾಜದಲ್ಲಿ ಪ್ರಚಲಿತವಿರುವ ಅನಿಷ್ಟ ಸಂಪ್ರದಾಯಗಳಾದ ಜಾತಿವಾದ, ಊಳಿಗಮಾನ್ಯ ಪದ್ಧತಿ, ಸ್ವಜನ ಪಕ್ಷಪಾತ, ಪಿತೃಪ್ರಧಾನತೆ ಮತ್ತು ನಮ್ಮ ಶಿಕ್ಷಣವಿಧಾನದ ಅರೆ-ಕೊರೆಗಳ ಮೇಲೆ ಬೆಳಕು ಬೀರುತ್ತದೆ ಹಾಗೂ ಅವುಗಳನ್ನು ಈ ಕೃತಿಯು ವಿಮರ್ಶಿಸುತ್ತದೆ. ಇಲ್ಲಿಯ ಕಥಾನಾಯಕ, ಹೋರಾಳು ಮಹಿಪತ ಬಭ್ರುವಾಹನ ಹಳ್ಳಿಯ ಬಡ ಕುಟುಂಬದಲ್ಲಿ ಹುಟ್ಟಿದ ಕೆಳಜಾತಿಯ ಯುವಕ. ಎಂ.ಎ ಆಗಲೇಬೇಕು ಎಂಬ ಏಕಮಾತ್ರ ಗುರಿ ಹೊಂದಿದವ. ಅದಕ್ಕಾಗಿ ಹಲವು ಸಂಕಷ್ಟ ಎದುರಿಸಿ , ಕೊನೆಗೂ ಎಂ.ಎ ಪಾಸಾಗುತ್ತಾನೆ. ಅಸಂಖ್ಯ ನಕಾರಗಳನ್ನು ಇದಿರುಗೊಳ್ಳುತ್ತಲೇ, ಹೇಳಹೆಸರಿಲ್ಲದ ಹಳ್ಳಿಯ ಕಾಲೇಜೊಂದರಲ್ಲಿ ಪ್ರೊಫೆಸರ್ ಆಗುತ್ತಾನೆ. ಅಲ್ಲಿ ನಿರಂಕುಶ ವಿದ್ಯಾರ್ಥಿಗಳು , ಅಧಿಕಪ್ರಸಂಗಿ ಸಹೋದ್ಯೋಗಿಗಳು, ಪಕ್ಷಪಾತಿ ಆಡಳಿತ ಮುತಾಂಧ ಹೊಸ ಸವಾಲುಗಳಿಗೆ ಅವನು ಮುಖಾಮುಖಿಯಾಗುತ್ತಾನೆ ಎನ್ನುವ ವಿಚಾರಗಳು ಇಲ್ಲಿವೆ. ಕಾಲೇಜು ಕಮಿಟಿಯ ಚೇರಮನ್ ನ ಅಣ್ಣನ ಮಗಳು ಮೇಲುಜಾತಿಯ ನಳಿನಿ, ಅವನ ಸಹೋದ್ಯೋಗಿಯಾಗಿ ಸೇರಿಕೊಂಡಾಗ, ಅವರಿಬ್ಬರ ನಡುವೆ ಪ್ರಣಯ ಅಂಕುರಿಸುತ್ತದೆ. ನಂತರ ಯುವಕ ತನ್ನ ನೌಕರಿ ಉಳಿಸಿಕೊಳ್ಳಲು ಪಡುವ ಪಾಡನ್ನು ವಿಶ್ಲೇಷಿಸಲಾಗಿದೆ.

About the Author

ಹೇಮಾ ಪಟ್ಟಣಶೆಟ್ಟಿ
(10 February 1954)

  ಕವಯತ್ರಿ, ಬರಹಗಾರ್ತಿ ಹೇಮಾ ಪಟ್ಟಣಶೆಟ್ಟಿ ಅವರು ಮನೋವಿಜ್ಞಾನ ಹಾಗೂ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಬರೆದಿರುವ ಪ್ರಮುಖ ಕೃತಿಗಳೆಂದರೆ ವಿರಹೋತ್ಸವ, ಹೊಸಹಾಡು, ಕಣ್ಣುಗಳಲಿ ಕನಸು ತುಂಬಿ, ಮುಸುಕಿದೀ ಮಬ್ಬಿನಲಿ, ಬಗಾಟ ಬಗರಿ, ತುಂಟ ಮಕ್ಕಳ ತಂಟೆ, ಹೆಣ್ಣು. ವಿಮರ್ಶೆ/ವಿಚಾರ ಸಾಹಿತ್ಯ : ಮರ್ಯಾದೆಯ ಮುಸುಕಿನಲ್ಲಿ, ಅನುಲೇಖ ಮುಂತಾದವು. ಸಾಹಿತ್ಯ ಕ್ಷೇತ್ರಕ್ಕೆ ಇವರು ನೀಡಿರುವ ಕೊಡುಗೆಗೆ ಅಂತರರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ, ಮಲ್ಲಿಕಾ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ.  ಅನನ್ಯ ಪ್ರಕಾಶನ ಸ್ಥಾಪಿಸಿ 90ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ...

READ MORE

Related Books