ಕತ್ತೆ ಪುರಾಣ

Author : ಬಿ. ಗಂಗಾಧರಮೂರ್ತಿ

Pages 56

₹ 40.00




Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

 

ಧರ್ಮ-ರಾಜಕಾರಣಗಳು ಭಾರತದಲ್ಲಿ ಮಹಾಕಾವ್ಯದ ಕಾಲದಿಂದಲೇ ಪುರೋಹಿತಶಾಹಿ ವ್ಯವಸ್ಥೆಯನ್ನು ಒಳಗೊಂಡಿದೆ.  ಭಾರತೀಯ ಪುರಾಣ ಪರಂಪರೆಯಲ್ಲಿ ಆದರ್ಶೀಕರಿಸಿರುವ ವ್ಯಕ್ತಿಗಳನ್ನು ದೈವತ್ವದ ಮಟ್ಟಕ್ಕೇರಿಸಿ ನೈತಿಕಮೌಲ್ಯಗಳನ್ನು ಪೋಷಿಸಿಕೊಂಡು ಬರಲಾಗಿದೆ. ಇದೇ ಮಾದರಿಯನ್ನು ಅನುಸರಿಸಿಕೊಂಡು ’ಕತ್ತೆ ಪುರಾಣ’  ನಾಟಕ ವಸ್ತುವನ್ನು ಬಿಂಬಿಸಲಾಗಿದೆ. 

ಬಹುಪಾಲು ನಾಟಕದ ವಸ್ತುಗಳು ಸಾಮಾಜಿಕ, ರಾಜಕೀಯ, ಆರ್ಥಿಕ ಸ್ಥಿತ್ಯಂತರಗಳ ನಂತರ ಬಹಳಕಾಲ ಉಳಿಯುವುದಿಲ್ಲ. ಕತ್ತೆಪುರಾಣ ನಾಟಕದ ವಸ್ತುವಿನ್ಯಾಸದಲ್ಲಿ ಜೀವವಿರೋಧಿ ಐಷಾರಾಮಿ ಪರಂಪರೆಯನ್ನು ಉಳಿಸಿಕೊಳ್ಳುವ, ಇತಿಹಾಸವನ್ನು ನಿರ್ಮಿಸುವ ಸಲುವಾಗಿ ಕಿರೀಟದ ಸೈಜಿಗೆ ತಲೆಯನ್ನು ಬೆಳೆಸಿಕೊಳ್ಳಲು ಹಂಬಲಿಸುವ ರಾಜನ ಮಹತ್ವಾಕಾಂಕ್ಷೆ, ಗೋಲ್ ಗುರೂಜಿಯ ಸಲಹೆ ಸೂಚನೆಗಳು ಇವತ್ತಿನ ರಾಜಕೀಯ ನಡೆಗೆ ಕನ್ನಡಿಯಂತಿವೆ. ನಗಬಾರದೆಂಬ ಕಟ್ಟಪ್ಪಣೆ, ಮಾಧ್ಯಮಗಳ ಪ್ರಚಾರಪ್ರಿಯ ವ್ಯಾಮೋಹ, ಶಿಸ್ತಿನ ಸಿಪಾಯಿಗಳು. ರಾಜನ ಸುತ್ತಲಿರುವ ಹೊಗಳುಭಟ್ಟಂಗಿಗಳ ಚುರುಕು ಮಾತುಗಳು ವಸ್ತುವನ್ನು ಯಾವತ್ತೂ ಸಲ್ಲುವಂತೆ ಕಟೆದು ನಿಲ್ಲಿಸಿವೆ.

 

About the Author

ಬಿ. ಗಂಗಾಧರಮೂರ್ತಿ - 10 September 2022)

ಲೇಖಕ ಪ್ರೊ. ಬಿ. ಗಂಗಾಧರ ಮೂರ್ತಿ ಅವರು ಮೂಲತಃ  ಹೊಳೆನರಸೀಪುರದವರು. ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವೀಧರರು. ಸುಮಾರು 30 ಬೊಧನೆ ಮಾಡಿದವರು. ’’ನವ್ಯ ಕತೆಗಳು” ಅವರು ಬರೆದ ವಿಮರ್ಶಾ ಲೇಖನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ ನೀಡಿ ಗೌರವಿಸಿದೆ. ಅನುವಾದ ಕ್ಷೇತ್ರದಲ್ಲಿ ಇವರ ಸೇವೆ ಗಮನಿಸಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಪ್ರಶಸ್ತಿ ನೀಡಿ ಗೌರವಿಸಿದೆ. ಸೂಫಿ ಕಲ್ಚರ್ ಸಂಪಾದಕ  ಸಮಿತಿಯಲ್ಲಿ ಪ್ರವಾಚಕರಾಗಿದ್ದರು. ಭಾರತ ಜ್ಞಾನ-ವಿಜ್ಞಾನ ಸಮಿತಿ ಪ್ರಕಟಿಸುತ್ತಿದ್ದ ‘ಟೀಚರ್’ ಮಾಸಿಕದ ಮುಖ್ಯ ಸಂಪಾದಕರಾಗಿದ್ದರು. ಕರ್ನಾಟಕದ ಗೌರಿಬಿದನೂರು ನಗರದಲ್ಲಿ ವಾಸವಿದ್ದು, ವಿದುರಾಶ್ವತ ಫ್ರೀಡಂ ಮೆಮೊರಿಯಲ್ ಮ್ಯೂಜಿಯಂ ಸಂಸ್ಥೆಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.  ...

READ MORE

Related Books