ಕೆಂಪು ಕಣಗಿಲೆ ರಾಜ ಮತ್ತು ರಾಣಿ

Author : ಕೆ.ವಿ. ಸುಬ್ಬಣ್ಣ

Pages 144

₹ 90.00

Buy Now


Year of Publication: 2011
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ತಾ: ಸಾಗರ-577417

Synopsys

ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಠಾಕೂರ ಅವರ ನಾಟಕಗಳ ಕನ್ನಡಾನುವಾದಗಳು. ಕೆಂಪು ಕಣಗಿಲೆ ಹಾಗೂ ರಾಜ ಮತ್ತು ರಾಣಿ ಎಂಬುದು ಆ ಎರಡು ನಾಟಕಗಳು. ನೀನಾಸಂ ತಂಡದ ಪ್ರಯೋಗಗಳಿಗಾಗಿ ಕೆ.ವಿ. ಸುಬ್ಬಣ್ಣ ಅವರು ಅನುವಾದಿಸಿದ್ದರು. ಠಾಕೂರರ ‘ರಕ್ತ ಕರಬೀ’ ನಾಟಕವನ್ನು ‘ಕೆಂಪು ಕಣಗಿಲೆ’ ಹಾಗೂ ರಾಜಾ ಓ ರಾಣಿ ನಾಟಕವನ್ನು ರಾಜ ರಾಣಿ ಎಂದೂ ಅನುವಾದಿಸಿದ್ದರು.

About the Author

ಕೆ.ವಿ. ಸುಬ್ಬಣ್ಣ
(20 February 1931)

ಕೆ.ವಿ. ಸುಬ್ಬಣ್ಣ ಕನ್ನಡದ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಎ. ಪದವಿ ಪಡೆದ ನಂತರ ಅವರು ಕೃಷಿಕಾಯಕ ಆರಂಭಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಅಚ್ಚರಿಪಡುವ ಹಾಗಿದೆ. ಕವಿ, ನಾಟಕಕಾರ, ಅನುವಾದಕರಾಗಿದ್ದ ಅವರು 'ಅಕ್ಷರ ಪ್ರಕಾಶನ' 'ನೀನಾಸಂ ರಂಗ ಚಟುವಟಿಕೆ'ಗಳನ್ನು ನಿರ್ವಹಿಸಿದವರು. ಭಾರತೀಯ ಸಂಸ್ಕೃತಿಗೆ ವಿಶಿಷ್ಟ ಮಾದರಿ ಎನ್ನುವ ಹಾಗೆ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಪುಟ್ಟಹಳ್ಳಿಯಲ್ಲಿ ನಡೆಸಿದ್ದು ಒಂದು ದಾಖಲೆ. ಮ್ಯಾಗ್ಸೆಸ್ಸೆ ಪ್ರಶಸ್ತಿಯಿಂದ ಹೆಗ್ಗೋಡು ಅಂತರರಾಷ್ಟ್ರೀಯ ನಕ್ಷೆಯಲ್ಲಿ ದಾಖಲಾಯಿತು. ಕೆ.ವಿ. ಸುಬ್ಬಣ್ಣ ಒಬ್ಬ ವ್ಯಕ್ತಿಯಲ್ಲ, ಮಹಾನ್ ಶಕ್ತಿ. ಅವರ ಬೆಳವಣಿಗೆ ವೈಯಕ್ತಿಕವಾದದ್ದಲ್ಲ, ಸಾಂಘಿಕವಾದದ್ದು. 'ಅಕ್ಷರ ಪ್ರಕಾಶನದ ಮೂಲಕ , 'ನೀನಾಸಂ' ಮೂಲಕ ಅನೇಕ ಪ್ರತಿಭೆಗಳನ್ನು ಅವರು ...

READ MORE

Related Books