ಮೂರನೆಯ ಮಂತ್ರ

Author : ಸರಜೂ ಕಾಟ್ಕರ್‌

Pages 90

₹ 90.00




Year of Publication: 2019
Published by: ಯಾಜಿ ಪ್ರಕಾಶನ
Address: ಭೂಮಿ, ನಹರ್ ಕಾಲೋನಿ, ಎಂ.ಪಿ ಪ್ರಕಾಶ ನಗರ, ಹೊಸಪೇಟೆ-583201
Phone: 9481042400

Synopsys

'ಮೂರನೆಯ ಮಂತ್ರ' ಹಿಂದಿ ಮೂಲದ ಅನುವಾದಿತ ನಾಟಕ. ಯೋಗೇಶ್‌ ತ್ರಿಪಾಠಿ ಅವರ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಸರಜೂ ಕಾಟ್ಕರ್‌.

ಬೋಧಿಸತ್ವನ ಸತ್ಯ, ದಯೆ, ಕರುಣೆಯ ನೆಲೆಯಲ್ಲಿಯೇ ಮೂಡಿರುವ ನಾಟಕದ ಕಥಾ ಹಂದರ. ನಾಟಕದ ಕಥಾವಸ್ತು ಬುದ್ಧನಿಗೆ ಸಂಬಂಧಿಸಿದ್ದು, ಆತನ ಪೂರ್ವ ಜನ್ಮದ ಕಥೆಗಳನ್ನು ಜಾತಕ ಕಥೆಗಳೆಂದು ಕರೆಯುತ್ತಾರೆ. ಆತ ಅನೇಕ ಸಲ ಇಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ, ಪ್ರತಿಷ್ಠೆಯ ಮಿಥ್ಯೆಯನ್ನು ಮುರಿಯುತ್ತಾನೆ. 

About the Author

ಸರಜೂ ಕಾಟ್ಕರ್‌
(14 August 1953)

ವೃತ್ತಿಯಲ್ಲಿ ಪತ್ರಕರ್ತರು ಆಗಿರುವ ಕವಿ ಸರಜೂ ಕಾಟ್ಕರ್ ಅವರು ಜನಿಸಿದ್ದು (1953 ಆಗಸ್ಟ್‌ 14ರಂದು) ಹುಬ್ಬಳ್ಳಿಯಲ್ಲಿ . ತಂದೆ ಹಣಮಂತರಾವ್, ತಾಯಿ ಗೌರಾಬಾಯಿ.  ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ (ಕನ್ನಡ) ಪದವೀಧರರು.ಕರ್ನಾಟಕ ವಿ.ವಿ.ಯಿಂದ ‘ಕನ್ನಡ-ಮರಾಠಿ ದಲಿತ ಸಾಹಿತ್ಯ: ಒಂದು ಅಧ್ಯಯನ’ ವಿಷಯವಾಗಿ (1994) ಪಿಎಚ್ ಡಿ ಪಡೆದರು. ಸಂಯುಕ್ತ ಕರ್ನಾಟಕದಲ್ಲಿ ವರದಿಗಾರರಾಗಿ ವೃತ್ತಿ ಆರಂಭಿಸಿ, ನಂತರ ಇಂಡಿಯನ್‌ ಎಕ್ಸ್‌ಪ್ರೆಸ್‌ ಬಳಗದ ಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರು ಸೇರಿದಂತೆ ಸರ್ಕಾರದ ಹಲವಾರು ಅಕಾಡೆಮಿ, ಸಮಿತಿ ಹೀಗೆ ವಿವಿಧ ಜವಾಬ್ದಾರಿತ ಸ್ಥಾನಗಳನ್ನು ನಿರ್ವಹಿಸಿದ್ದಾರೆ.  ಕೃತಿಗಳು: ಬೆಂಕಿ-ನೀರು, ಹಸಿದ ನೆಲ, ಸೂರ್ಯ, ...

READ MORE

Reviews

ಡಾ. ಸರಜೂ ಕಾಟ್ಕರ್‌ ಕನ್ನಡಕೆ ತಂದಿರುವ 'ಮೂರನೆಯ ಮಂತ್ರ' ನಾಟಕವನ್ನು ಎಲ್ಲರೂ, ವಿಶೇಷವಾಗಿ ನಮ್ಮನ್ನಾಳುವ ಜನಪ್ರತಿನಿಧಿಗಳು ಕಡ್ಡಾಯವಾಗಿ ಓದಬೇಕು. ಹಿಂದಿ ಸಾಹಿತ್ಯದ ಪ್ರಮುಖ ನಾಟಕಕಾರ ಯೋಗೇಶ್ ಮೂರನೆಯ ಮಂತ್ರ ತ್ರಿಪಾಠಿ ಅವರ 'ತೀಸ್ತಿ ಮಂತ್ರ'ವೇ ಕನ್ನಡದಲ್ಲಿ ’ಮೂರನೆಯ ಮಂತ್ರ'ವಾಗಿ ನಮ್ಮ ನೆಲದ ನಾಟಕವೇ ಆಗಿ ರೂಪಾಂತರಗೊಂಡಿದೆ. ಕತೆಯ ಕ್ಯಾನ್ವಾಸ್ ಅನ್ನು ನಾಟಕಕಾರರು ಬೋಧಿಸತ್ವನ ಸತ್ಯ, ದಯೆ, ಕರುಣೆಯ ನೆಲೆಯಲ್ಲಿಯೇ ವಿಸ್ತರಿಸಿದ್ದಾರೆ. ಅಂದಿನ ಕತೆ ಇಂದಿಗೂ ಅನ್ವಯವಾಗುವಂತಿದೆ.

15 ಡಿಸೆಂಬರ್‌ 2019 

ಕೃಪೆ : ವಿಜಯ ಕರ್ನಾಟಕ

Related Books