ಕನ್ನಡ ಆಶ್ವರ್ಯ ಚೂಡಾಮಣಿ

Author : ಕೆ.ಕೃಷ್ಣಮೂರ್ತಿ

Pages 103

₹ 80.00




Year of Publication: 2010
Published by: ಡಾ. ಕೆ. ಕೃಷ್ಣಮೂರ್ತಿ ಸಂಸ್ಕೃತಿ ರಿಸರ್ಚ್ ಫೌಂಡೇಶನ್
Address: #450, 9ನೇ, ಮುಖ್ಯ ರಸ್ತೆ, 39ನೇ ಬಿ-ಬ್ಲಾಕ್, ಜಯನಗರ, ಬೆಂಗಳೂರು-560041
Phone: 9448553797

Synopsys

ಶಕ್ತಿಭದ್ರನ”ಆಶ್ಚರ್ಯ ಚೂಡಾಮಣಿ’ ಮೊಟ್ಟಮೊದಲು ಗಮನ ಸೆಳದಿದ್ದು-1926ರಲ್ಲಿ. ಕೇರಳದಲ್ಲಿ ದೊರೆತ ತಾಳೆಯೋಲೆಗಳ ಸಹಾಯದಿಂದ ಮದ್ರಾಸಿನ ಬಾಲ ಮನೋರಮಾದವರು ಮೊದಲು ಇದನ್ನು ಪ್ರಕಟಿಸಿದರು. ಮೂಲಕವಿ ಶಕ್ತಿಭದ್ರ ಈತನ ಕಾಲ 16ನೇ ಶಮಾನ ಎಂದು ಹೇಳಲಾಗಿದೆ. ಆಶ್ಚರ್ಯ ಚೂಡಾಮಣಿಗೆ ರಾಮಾಯಣದ ಕಥೆಯೇ ಮೂಲ. ಬಾಲಕಾಂಡವೊಂದನ್ನು ಹೊರತುಪಡಿಸಿ ಉಳಿದ ಎಲ್ಲ ಅಂದರೆ ಅರಣ್ಯಕಾಂಡ, ಅಯೋಧ್ಯೆ ಕಾಂಡ ಸೇರಿದಂತೆ ಎಲ್ಗವೂ ಈ ನಾಟಕದಲ್ಲಿ ಅಡಕವಾಗಿವೆ.

ಮಾನವ ಸ್ವಭಾವದ ಆಳಗಳನ್ನು ಸಹ ಶಕ್ತಿಭದ್ರನು ಕಲೆ ಬರೆಹದ ಮೂಲಕ ಕಾಣಿಸಿದ್ದಾನೆ. ಭಾಸನ ಸಂಸ್ಕೃತ ನಾಟಕಗಳನ್ನೂ ಸಹ ಕನ್ನಡಕ್ಕೆ ಅನುವಾದಿಸಿರುವ ಡಾ. ಕೆ. ಕೃಷ್ಣಮೂರ್ತಿ ಅವರು ಶಕ್ತಿಭದ್ರನ ಆಶ್ಚರ್ಯ ಚೂಡಾಮಣಿಯೂ ಕನ್ನಡಕ್ಕೆ ತಂದಿದ್ದಾರೆ.

ಪುಸ್ತಕದ ಆರಂಭದಲ್ಲಿ ಶಕ್ತಿಭದ್ರನ ಕಾಲ-ದೇಶ-ನಾಟಕಗಳು, ಕೃತಿಗಳ ರಸ-ರಸಾಭಾವ ಇತ್ಯಾದಿಗಳ ಬಗ್ಗೆ ಸವಿಸ್ತಾರವಾದ ಪರಿಚಯವಿದ್ದರಿಂದ ಕೃತಿಯನ್ನು ಅರ್ಥಮಾಡಿಕೊಳ್ಳಲು ಅನುಕೂಲವಾಗಿದೆ. ಕನ್ನಡದ ಆಶ್ಚರ್ಯ ಚೂಡಾಮಣಿಯು 1959ರಲ್ಲಿ ಮೊದಲ ಮುದ್ರಣ ಕಂಡಿತ್ತು.

About the Author

ಕೆ.ಕೃಷ್ಣಮೂರ್ತಿ

ಕೆ.ಕೃಷ್ಣಮೂರ್ತಿ- ಹುಟ್ಟಿದ್ದು ಹಾಸನ ಜಿಲ್ಲೆ ಕೇರಳಾಪುರದಲ್ಲಿ. ಮಹಾರಾಜ ಕಾಲೇಜಿನಲ್ಲಿ ಬಿ.ಎ ಮತ್ತು ಎಂ.ಎ. ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ ಸರ್ವಪ್ರಾವಿಣ್ಯ. ಬೊಂಬಾಯಿ ವಿಶ್ವವಿದ್ಯಾಲಯದಿಂದ ಧ್ವಾನ್ಯಾಲೋಕ ಮತ್ತು ಅದರ ವಿಮರ್ಶೆ ಡಾಕ್ಟರೇಟ್ ಪದವಿ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕೆಲಸ. ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ ಮುಖ್ಯಪುಸ್ತಕಗಳು ಧ್ವನ್ಯಾಲೋಕ ಮತ್ತು ಆನಂದವರ್ಧನನ ಕಾವ್ಯಮೀಮಾಂಸೆ, ಮಮ್ಮಟನ ಕಾವ್ಯ ಪ್ರಕಾಶ. ರಾಜಶೇಖರನ ಕಾವ್ಯ ಮೀಮಾಂಸೆ, ದಂಡಿಯ ಕಾವ್ಯದರ್ಶನ, ವಾಮನನ ಕಾವ್ಯಲಂಕರಸೂತ್ರವೃತ್ತಿ, ಕ್ಷೇಮೇಂದ್ರನ ಕವಿಕಂಠಾಭರಣ, ಔಚಿತ್ಯಚರ್ಚೆ, ಭಾಮಹನ ಕಾವ್ಯಾಲಂಕಾರ, ಹಾಗೆಯೇ ಇಂಗ್ಲಿಷಿನಲ್ಲಿ ವಕ್ರೋಕ್ತಿಜೀವಿತ, ಧ್ವನ್ಯಾಲೋಕ, ನಾಟ್ಯಶಾಸ್ತ್ರ ಮತ್ತು ಅಭಿನವ ಭಾರತಿ, ...

READ MORE

Related Books