ಅದ್ಭುತ ಸಿರಿಧಾನ್ಯ ಕೊರಲೆ

Author : ಮಲ್ಲಿಕಾರ್ಜುನ ಹೊಸಪಾಳ್ಯ

Pages 26

₹ 6.00

Synopsys

ಕಳೆದ ಎರಡು ದಶಕಗಳಿಂದ ದೇಶಿ ಬಿತ್ತನೆ ಬೀಜಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ತುಮಕೂರಿನ ಮಲ್ಲಿಕಾರ್ಜುನ ಹೊಸಪಾಳ್ಯ ಅವರ ಕೊರಲೆ ಎಂಬ ಸಿರಿಧಾನ್ಯದ ಬೆಳೆಯ ಮಹತ್ವವನ್ನು ಪರಿಚಯಿಸುವ ಈ ಕೃತಿ ಬರದ ನಾಡಿಗಾಗಿ ಬರೆದ ಸಂವಿಧಾನ ಕೃತಿಯಂತಿದೆ. ಕೊರಲೆ ಎಂಬ ಕಿರುಧಾನ್ಯದ ಬೆಳೆಯನ್ನು ಬೆಳೆಯುವ ವಿಧಾನದಿಂದ ಹಿಡಿದು, ಇದನ್ನು ಸಂಸ್ಕರಿಸುವ ವಿಧಾನ, ಈ ಧಾನ್ಯದಿಂದ ತಯಾರಿಸಬಹುದಾದ ಆಹಾರ ಪದಾರ್ಥಗಳು ಮತ್ತು ಅವುಗಳಲ್ಲಿರುವ ವಿಟಮಿನ್ ಮತ್ತು ಪ್ರೊಟೀನ್ ವಿವರಗಳನ್ನು ಸವಿವರವಾಗಿ ವಿವರಿಸಲಾಗಿದೆ. ಕೊರಲೆ ಕಿರು ಧಾನ್ಯದ ಬೆಳೆಯ ಮತ್ತೊಂದು ವಿಶೇಷವೆಂದರೆ, ಇದನ್ನು ಕೇವಲ ಮಳೆಯಾಶ್ರಿತ ಭೂಮಿ ಮಾತ್ರವಲ್ಲದೆ, ಕರ್ನಾಟಕದ ಎಲ್ಲ ಪ್ರದೇಶಗಳಲ್ಲೂ ಬೆಳೆಯಬಹುದಾಗಿದೆ. ಅಡಿಕೆ ಮತ್ತು ತೆಂಗು ಬೆಳೆಗಾರರ ಅತಿ ದೊಡ್ಡ ಸಮಸ್ಯೆಯೆಂದರೆ, ಅಳಿಲುಗಳ ಕಾಟ. ಆದರೆ, ತೋಟಗಳಲ್ಲಿ ಮರಗಳ ನಡುವೆ ಕೊರಲೆಯನ್ನು ಬೆಳೆಯುವುದರಿಂದ ಅಳಿಲುಗಳ ಆಹಾರ ಸಮಸ್ಯೆ ನೀಗುವುದರ ಜೊತೆಗೆ ಅಡಿಕೆ, ತೆಂಗು ಫಸಲುಗಳನ್ನು ಉಳಿಸಿಕೊಳ್ಳಬಹುದು ಎಂಬುದರ ಕುರಿತು ರೈತರ ಅನುಭವವನ್ನು ಸಹ ಲೇಖಕರು ದಾಖಲಿಸಿದ್ದಾರೆ.

About the Author

ಮಲ್ಲಿಕಾರ್ಜುನ ಹೊಸಪಾಳ್ಯ

ಲೇಖಕ ಮಲ್ಲಿಕಾರ್ಜುನ ಹೊಸಪಾಳ್ಯ ಅವರ ಹುಟ್ಟೂರು ತುಮಕೂರು ಜಿಲ್ಲೆಯ ಹೊಸಪಾಳ್ಯ. ಮಧುಗಿರಿ, ತುಮಕೂರು, ಬೆಂಗಳೂರು ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಅವರು ಅರ್ಥಶಾಸ್ತ್ರ ಹಾಗೂ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ್ಯಾಂಕ್ ನೊಂದಿಗೆ ಎರಡು ಚಿನ್ನದ ಪದಕ ಮತ್ತು ಪದವಿಯಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚಿನ ಅಂಕಗಳಿಕೆಗಾಗಿ ಚಿನ್ನದ ಪದಕ ಪಡೆದಿದ್ದಾರೆ.  ದೇಸಿ ತಳಿ, ನಾಟಿ ಬೀಜಗಳ ಸಂರಕ್ಷಣೆ ಕುರಿತು ವಿಶೇಷ ಆಸಕ್ತಿ, ಜಲಸಂರಕ್ಷಣೆ, ಸುಸ್ಥಿರ ಕೃಷಿ, ಸಿರಿಧಾನ್ಯ ಚಟುವಟಿಕೆಗಳಿಗೆ ಬೆಂಬಲ. ಜಲಜಾಗೃತಿಗಾಗಿ ಕಾರ್ಯಕ್ರಮ ಸಂಘಟನೆ. ಪಾರಂಪರಿಕ ...

READ MORE

Related Books