ಸುಸ್ಥಿರ ಕೃಷಿಗೆ ಹತ್ತಾರು ಹಾದಿ

Author : ಗಣೇಶ ಹೆಗಡೆ ನೀಲೆಸರ

Pages 32

₹ 30.00




Year of Publication: 2013
Published by: ಕೃಷಿ ಮಾಧ್ಯಮ ಕೇಂದ್ರ

Synopsys

ಸುಸ್ಥಿರ ಕೃಷಿಗೆ ಹತ್ತಾರು ಹಾದಿ ಗಣೇಶ ಎಂ. ನೀಲೇಸರ ಅವರ ಕೃತಿಯಾಗಿದೆ. ಕೃಷಿಗೀಗ ಇಳಿಗಾಲ, ಕೃಷಿಕರಿಗೆ ಭವಿಷ್ಯವಿಲ್ಲ ಎಂಬ ಭಾವನೆ ದಟ್ಟವಾಗುತ್ತಿರುವ ಸದ್ಯದ ಸಂದರ್ಭದಲ್ಲಿ ಬೆಂಗಳಿ ಕುಟುಂಬ ಸಾಗುತ್ತಿರುವಂತಹ ಸ್ವಾವಲಂಬನೆಯ ಕಾಲುದಾರಿಗಳ ಮೂಲಕ ಸುಸ್ಥಿರತೆಯ ಹೆದ್ದಾರಿ ಕಟ್ಟಬೇಕಾಗಿದೆ. ಕೃಷಿ ಮಾಧ್ಯಮ ಕೇಂದ್ರ ಇದುವರೆಗೆ ಇಂತಹ ವಿವಿಧ ಯಶಸ್ಸಿನ ಕಥೆಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಿದೆ. ಬೆಂಗಳಿ ಕುಟುಂಬದ ಕೃಷಿ ಪ್ರಯತ್ನಗಳನ್ನು ಕಾಮ್ ಫೆಲೋ ಡಾ. ಗಣೇಶ ಎಂ. ನೀಲೇಸರ ಅವರು ವಿಸ್ಕೃತವಾಗಿ ದಾಖಲಿಸಿದ್ದಾರೆ. ಅವರಿಗೆ ಅಭಿನಂದನೆಗಳು. ಇನ್ನೊಂದಷ್ಟು ಜನರಿಗೆ ಕೃಷಿಯಲ್ಲಿ ತೊಡಗಿಸಿಕೊಳ್ಳಲು, ಈ ಕೃತಿ ಹುರುಪಿನೊಡನೆ ಮುಂದುವರಿಯಲು ಮಾನಸಿಕ ಧೈರ್ಯ ನೀಡಬಹುದು ಎಂದು ಅನಿತಾ ಪೈಲೂರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಗಣೇಶ ಹೆಗಡೆ ನೀಲೆಸರ

ಪಶು ವೈದ್ಯಕೀಯದಲ್ಲಿ ಸ್ನಾತಕೋತ್ತರ ಹಾಗೂ ಅಭಿವೃದ್ಧಿ ಪತ್ರಿಕೋದ್ಯಮದ ಡಿಪ್ಲೊಮಾ ಪದವೀಧರರು. ಪ್ರಸ್ತುತ ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಅಡಿಯಲ್ಲಿ ಶಿರಸಿಯಲ್ಲಿರುವ 'ಪಶುರೋಗ ತನಿಖಾ ಪ್ರಯೋಗಾಲಯ ಮತ್ತು ಮಾಹಿತಿ ಕೇಂದ್ರ'ದಲ್ಲಿ ಉತ್ತರ ಕನ್ನಡ ಜಿಲ್ಲಾ ಪ್ರಾದೇಶಿಕ ಸಂಶೋಧನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 'ಸ್ವದೇಶಿ ವಿಜ್ಞಾನ ಆಂದೋಲನ, 6ನೇ ಕನ್ನಡ ವಿಜ್ಞಾನ ಸಮ್ಮೇಳನದಲ್ಲಿ 'ಅತ್ಯುತ್ತಮ ಪ್ರಬಂಧ ಮಂಡನೆ' ಪ್ರಶಸ್ತಿ. ಕೃಷಿಮಾಧ್ಯಮ ಕೇಂದ್ರ ಧಾರವಾಡ  ಸಂಸ್ಥೆಯಿಂದ ಅಭಿವೃದ್ಧಿ ಪತ್ರಿಕೋದ್ಯಮಕ್ಕಾಗಿ ಅತ್ಯುತ್ತಮ ಅಭ್ಯರ್ಥಿ ಪುರಸ್ಕೃತರು. 2012-13ನೇ ಸಾಲಿನಲ್ಲಿ ಸರ್ಕಾರಿ ನೌಕರರಿಗೆ ನೀಡುವ ಸರ್ವೋತ್ತಮ ಸೇವಾ ಪ್ರಶಸ್ತಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ 'ಹೈನು ಹೊನ್ನು' ಕೃತಿಗಾಗಿ ಶ್ರೇಷ್ಠ ಲೇಖಕ ಪ್ರಶಸ್ತಿ, 2016 ...

READ MORE

Related Books