ಮತ್ತೆ ಆ ಸಮೃದ್ಧಿಯೆಡೆಗೆ

Author : ಮಂಜುನಾಥ ಚಾರ್ವಾಕ

Pages 145

₹ 25.00




Year of Publication: 2001
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

ಮತ್ತೆ ಆ ಸಮೃದ್ಧಿಯೆಡೆಗೆ ಲೇಖನ ಬರಹದ ಪುಸ್ತಕವನ್ನು ಲೇಖಕ ವಿ.ಎನ್‌. ಮಂಜುನಾಥ್‌ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಕೃಷಿಯೋಗ್ಯ ಭೂಮಿ, ಇತರ ಪ್ರಕೃತಿದತ್ತ ಸಂಪನ್ಮೂಲಗಳನ್ನು ಪರಿಗಣಿಸಿದಲ್ಲಿ ಭಾರತವು ವಿಶ್ವದ ಭಾಗ್ಯಶಾಲಿ ಭೂಭಾಗಗಳಲ್ಲಿ ಪ್ರಮುಖವಾದದ್ದು. ಈಗ್ಗೆ ಇನ್ನೂರು ವರ್ಷ ಹಿಂದಿನವರೆಗೆ ದೇಶೀಯ ಹಾಗೂ ವಿದೇಶೀ ಪ್ರವಾಸಿಗರ ದಾಖಲೆಗಳು ಈ ದೇಶದಲ್ಲಿ ಉನ್ನತಮಟ್ಟದ ಕೃಷಿಯೂ ಆಹಾರಸಮೃದ್ಧಿಯೂ ಇದ್ದುದನ್ನು ಸ್ಫುಟಪಡಿಸಿವೆ. ಆದರೆ ಅಲ್ಪಕಾಲದಲ್ಲಿ ಸಮೃದ್ಧಿಯ ಸ್ಥಿತಿ ಹೋಗಿ ಅಭಾವದ ಸ್ಥಿತಿ ಉಂಟಾದುದು ಹೇಗೆ? ಮತ್ತು ಸ್ವಾತಂತ್ರ್ಯಾನಂತರವೂ ಆ ಸ್ಥಿತಿ ಮುಂದುವರಿದುದು ಹೇಗೆ ? ಈಗಿನ ಆಹಾರೋತ್ಪಾದನೆಯೂ ಬಳಕೆಯೂ ಕೆಳಮಟ್ಟದಲ್ಲಿಯೇ ಇವೆ. ಈ ವಾಸ್ತವತೆಯ ವೈಜ್ಞಾನಿಕ ವಿಶ್ಲೇಷಣೆ ಈ ಕಿರುಪುಸ್ತಕದಲ್ಲಿದೆ. ಹಾಗೂ ಹಿಂದಿನ ಸಮೃದ್ಧಿಯ ಸ್ಥಿತಿಯ ಮರುಗಳಿಕೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ದಿಶಾದರ್ಶನ ಇಲ್ಲಿದೆ.

About the Author

ಮಂಜುನಾಥ ಚಾರ್ವಾಕ

ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಮಂಜುನಾಥ ಚಾರ್ವಾಕ ಅವರು, ಲ್ಯಾಂಡ್ ಸ್ಕೇಪ್ ಪೋಟೋಗ್ರಫಿ, ಕಥನ, ಕಲಾವಿಮರ್ಶೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಇವರು ಸದ್ಯ ಬೆಂಗಳೂರು ನಿವಾಸಿ. ಕೃತಿಗಳು: ಕಿನೊ ಮತ್ತು ಇತರ ಕತೆಗಳು ...

READ MORE

Related Books