ಛಾವಣಿ ಮುಗಿಲ ಕೊಯ್ಲು

Author : ಎ.ಎಸ್. ಕುಮಾರಸ್ವಾಮಿ

Pages 42

₹ 40.00




Year of Publication: 2014
Published by: ಸಂವಹನ ಕೇಂದ್ರ
Address: ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ

Synopsys

ನೀರು ಸಂಗ್ರಹಕ್ಕೆ ವಿವಿಧ ಮಾದರಿಗಳು ಈಗಾಗಲೇ ಚಾಲ್ತಿಯಲ್ಲಿವೆ. ಅದರಲ್ಲಿ ಛಾವಣಿ ಮುಗಿಲ ಕೊಯ್ಲು ಕೂಡ ಒಂದು ಬಗೆ. ಈ ಕೃತಿಯಲ್ಲಿ ಛಾವಣಿ ಮುಗಿಲ ಕೊಯ್ಲಿನ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಜಲಚಕ್ರ, ಜಲ ಸಂಪನ್ಮೂಲ - ಸಮೃದ್ಧಿಯ ನಡುವೆ ಬರ, ಸಿಹಿ ನೀರಿನ ಬಳಕೆಯ ಆದ್ಯತೆಗಳು ಹಾಗೂ ವಿವಿಧ ಮೂಲಗಳು, ಮನೆ ಬಳಕೆಗೆ ನೀರಿನ ಅವಶ್ಯಕತೆ ಮಾನವನ ಪ್ರತ್ಯಕ್ಷ ಮತ್ತು ಪರೋಕ್ಷ ಬೇಡಿಕೆಗೆ ಒಟ್ಟು ನೀರಿನ ಬಳಕೆ, ಅಶುದ್ಧ ನೀರಿನ ಬಳಕೆಯಿಂದಾಗುವ ಹಾನಿಗಳು, ಶುದ್ಧ ನೀರು ಪಡೆಯಲು ಆಗುವ ಶ್ರಮ ಮತ್ತು ವೆಚ್ಚ, ನೀರಿನ ಪೂರೈಕೆಗೆ ಜಾಗತಿಕ ಆರೋಗ್ಯ ಸಂಸ್ಥೆಯವರು ನಿಗದಿಪಡಿಸಿರುವ ಮಾನದಂಡಗಳು, ಮನೆ ಬಳಕೆಗೆ ನೀರಿನ ಸೂಕ್ತತೆ, ಛಾವಣಿ ಮಳೆಕೊಯ್ಲು ಯಾವ ಸನ್ನಿವೇಶದಲ್ಲಿ ಸೂಕ್ತ?, ಸಂಗ್ರಹಿಸಲು ಲಭ್ಯವಿರುವ ಮಳೆ ನೀರಿನ ಪ್ರಮಾಣ, ಸಂಗ್ರಹಿಸಬಹುದಾದ ಮಳೆಯ ನೀರಿನ ಪ್ರಮಾಣ, ಛಾವಣಿ ಮಳೆ ನೀರು ಕೊಯ್ಲಿನ ವಿಧಾನ, ಬಳಕೆಯ ಉದ್ದೇಶಕ್ಕನುಗುಣವಾಗಿ ತೊಟ್ಟಿಯ ರಚನೆ, ಒಂದು ಸಾಧಾರಣ ಮನೆಯಲ್ಲಿ ಛಾವಣಿ ಮಳೆಕೊಯ್ಲು ವ್ಯವಸ್ಥೆಯ ಉದಾಹರಣೆ, ಛಾವಣಿ ಮಳೆಕೊಯ್ಲು ನೀರಿನಿಂದ ಅಂತರ್ಜಲ ಮರುಪೂರಣೆಯ ಸಾಧ್ಯತೆಗಳು ಕುರಿತ ಸಂಪೂರ್ಣ ಮಾಹಿತಿ ಈ ಕೃತಿಯಲ್ಲಿದೆ.

About the Author

ಎ.ಎಸ್. ಕುಮಾರಸ್ವಾಮಿ
(20 January 1953)

ಲೇಖಕ, ಕೃಷಿ ವಿಜ್ಞಾನಿ ಡಾ.ಎ.ಎಸ್. ಕುಮಾರಸ್ವಾಮಿ (ಅಬ್ಬಿಗೆರೆ ಶಿವಲಿಂಗಪ್ಪ ಕುಮಾರಸ್ವಾಮಿ) ಜನಿಸಿದ್ದು 1953 ಜನವರಿ 20 ರಂದು. ದಾವಣಗೆರೆ ಜಿಲ್ಲೆ ದೊಡ್ಡಬ್ಬೀಗೆರೆ ಗ್ರಾಮದವರು. ಸಂತೇಬೆನ್ನೂರಿನಲ್ಲಿ ಎಸ್‌ಎಸ್‌ಎಲ್‌ಸಿ ವರೆಗೂ ಶಿಕ್ಷಣ ಪಡೆದು, ಧಾರವಾಡ ಹಾಗೂ ಬೆಂಗಳೂರಿನಲ್ಲಿ ಕೃಷಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪಡೆದಿದ್ದಾರೆ. ಬೆಂಗಳೂರಿನ ಕೃಷಿ ಮಹಾವಿದ್ಯಾಲಯದಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿ, ಪ್ರಾಧ್ಯಾಪಕರಾಗಿ, ವಲಯ ಕೃಷಿ ಸಂಶೋಧನ ಕೇಂದ್ರದಲ್ಲಿ ತಂಬಾಕು ಬೆಳೆ ಬೇಸಾಯ ಶಾಸ್ತ್ರಜ್ಞರಾಗಿ, ಹಾಸನ ಕೃಷಿ ಕಾಲೇಜು ಸ್ಥಾಪಕ ನಿರ್ದೇಶಕರು ಹಾಗೂ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಹ ಸಂಶೋಧನಾ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ತಮ್ಮ ಅನುಭವ, ...

READ MORE

Related Books