ಶಿವನಾಪುರ ರಮೇಶ್

Author : ಕೆ. ರೇಖಾ ಸಂಪತ್

Pages 56

₹ 60.00




Year of Publication: 2017
Published by: ಕೃಷಿ ಮಾಧ್ಯಮ ಕೇಂದ್ರ
Address: 113, 2ನೇ ಮಹಡಿ, 6ನೇ ಮುಖ್ಯರಸ್ತೆ, 7ನೇ ಅಡ್ದರಸ್ತೆ ಗಂಗಾನಗರ, ಅಂಚೆ: ಆರ್.ಟಿ. ನಗರ ಬೆಂಗಳೂರು 560032
Phone: 9483757707

Synopsys

ಮೂಲತಃ ಕೃಷಿಕರಾದ ಶಿವನಾಪುರ ರಮೇಶ್, ಒಕ್ಕಲುತನದಲ್ಲಿ ಬಗೆಬಗೆಯ ಪ್ರಯೋಗ ಮಾಡಿದವರು. ಪಶುಸಂಗೋಪನೆಯಲ್ಲಿ ಪಳಗಿದವರು. ಅನುಭವದಿಂದಲೆ ರಾಸಾಯನಿಕ ಕೃಷಿಯ ಕೆಡುಕು ಮತ್ತು ಸಾವಯವ ಕೃಷಿಯ ಒಳಿತನ್ನು ಅರ್ಥಮಾಡಿಕೊಂಡವರು. ಅಲಂಕಾರಿಕ ಸಸ್ಯಗಳಿಂದ ಆರಂಭವಾಗಿ ಪ್ರವರ್ಧಮಾನಕ್ಕೆ ಬಂದ ಅವರ ತೇಜ ನರ್ಸರಿ ಈಗ ಸಾವಯವ ಸಸ್ಯಕಾಶಿ. ಸಾಟಿಯಿಲ್ಲದ ಫಲವೈವಿಧ್ಯ. ಎಲ್ಲಕ್ಕಿಂತ ಮಿಗಿಲಾಗಿ ಸಾವಿರಾರು ರೈತರ ಪಾಲಿಗೆ ರಮೇಶ್ ಸ್ಫೂರ್ತಿಯ ಚಿಲುಮೆ, ಆಪ್ತಮಿತ್ರ, ಮಾರ್ಗದರ್ಶಕ, ಹಿತಚಿಂತಕ. ಕರ್ನಾಟಕ ಮಾತ್ರವಲ್ಲದೆ ಸುತ್ತಮುತ್ತಲ ರಾಜ್ಯಗಳಲ್ಲೆಲ್ಲ ಸಾವಯವ ತೋಟಗಾರಿಕೆಯ ಬೆಳವಣಿಗೆಯಲ್ಲಿ ರಮೇಶ್ ಅವರ ಪಾತ್ರ ಮಹತ್ವದ್ದು. ಒಂದೊಂದು ಗಿಡವನ್ನು ನೀಡುವಾಗಲೂ ಅವರ ಸಾವಯವ ಪಾಠ ಇದ್ದದ್ದೇ. ಸಾವಯವ ಗಿಡಗಳ ಪೂರೈಕೆ, ಅವುಗಳ ಪೋಷಣೆ ಬಗ್ಗೆ ಮಾರ್ಗದರ್ಶನ ಮಾತ್ರವಲ್ಲದೆ ರೈತರಿಗಾಗಿ ಸಾವಯವ ತರಬೇತಿ ಕಾರ್ಯಾಗಾರಗಳನ್ನೂ ನಡೆಸುತ್ತಿದ್ದಾರೆ. ಕೃಷಿರಂಗದಲ್ಲಿನ ಹತಾಶ ಮನಸ್ಸುಗಳಿಗೆ ರಮೇಶ್ ಚೇತನಾದಾಯಿ ಶಕ್ತಿ. ಬೇಸಾಯದಿಂದ ಗಿಟ್ಟುವುದಾದರೂ ಏನು ಎಂಬ ಪ್ರಶ್ನೆಗೆ ಅವರ ಬಳಿ ಹತ್ತಾರು ಉತ್ತರ; ನೂರಾರು ದೃಷ್ಟಾಂತ. ಮಹಾತ್ಮ ಗಾಂಧಿ ಅವರ ಮನಗೆದ್ದಿದ್ದ ದೇವನಹಳ್ಳಿಯ ವಿಶಿಷ್ಟ ಚಕ್ಕೋತ ತಳಿಯ ಉಳಿವು-ಬೆಳವಣಿಗೆಯಲ್ಲಿ ರಮೇಶ್ ಮುತುವರ್ಜಿಯಿಂದ ಕೆಲಸ ಮಾಡಿದ್ದರಿಂದ, ಅದಕ್ಕೆ ಭೌಗೋಳಿಕ ಸೂಚ್ಯಂಕ (ಜಿಐ) ಪ್ರಾಪ್ತವಾಯಿತು.

ಬೆಂಗಳೂರು ಹೊರವಲಯದ ದೇವನಹಳ್ಳಿಯ ತೇಜ ನರ್ಸರಿಯಲ್ಲಿ ಕಾಲಿಟ್ಟರೆ ಒಂದೆಡೆ ರೈತರು ತಮಗೆ ಬೇಕಾದ ಗಿಡಗಳ ಆಯ್ಕೆಯಲ್ಲಿ ಹಾಗೂ ಇನ್ನೊಂದೆಡೆ ನರ್ಸರಿಯ ಮಾಲಿಕ ಶಿವನಾಪುರ ರಮೇಶ್ ಸಾವಯವ ಕೃಷಿಯ ಮೂಲಸೂತ್ರಗಳನ್ನು ಎಳೆಎಳೆಯಾಗಿ ವಿವರಿಸುತ್ತಿರುವುದು ಕಂಡುಬರುತ್ತದೆ.

ಈ ಪುಸ್ತಕ ಶಿವನಾಪುರ ರಮೇಶ್ ಅವರ ವ್ಯಕ್ತಿಚಿತ್ರಣದ ಜತೆಗೆ ಸಾವಯವ ಕೃಷಿ ಮಾಡಬಯಸುವವರಿಗೆ ಅವರು ನೀಡುವ ಕಿವಿಮಾತುಗಳನ್ನು ಸಾದರಪಡಿಸುತ್ತದೆ.

About the Author

ಕೆ. ರೇಖಾ ಸಂಪತ್

ಹವ್ಯಾಸಿ ಪತ್ರಕರ್ತೆ. ಪಿಯುಸಿ ನಂತರ ಹಿಂದಿ ಶಿಕ್ಷಕ ತರಬೇತಿ ಪಡೆದು ಗೃಹಶೋಭಾ ಪತ್ರಿಕೆಯಲ್ಲಿ ಉದ್ಯೋಗ. ಜತೆಯಲ್ಲೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಪದವಿ, ಹಿಂದಿ ಅನುವಾದದಲ್ಲಿ ಸ್ನಾತಕೋತ್ತರ ಡಿಪ್ಲೋಮಾ, ಕೃಷಿ ಬರಹದಲ್ಲಿ ಆಸಕ್ತಿ. ಕೃಷಿಯಲ್ಲಿ ಮಹಿಳೆ, ಕೈತೋಟ, ಹೂಮರಗಳು, ತಾರಸಿ ತೋಟಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆಯಲು ಆದ್ಯತೆ. 11 ವರ್ಷಗಳ ನಂತರ ಉದ್ಯೋಗಕ್ಕೆ ವಿದಾಯ. ಮನೆಯಿಂದಲೇ ವಿವಿಧ ಪ್ರಕಾಶನಗಳಿಗೆ ಹಿಂದಿ-ಕನ್ನಡ ಅನುವಾದಕಿಯಾಗಿ ಕೆಲಸ. 20ಕ್ಕೂ ಹೆಚ್ಚು ಪುಸ್ತಕಗಳು, ನೂರಾರು ಲೇಖನಗಳ ಅನುವಾದ ಕಾರ್ಯ. ಉಷಾಕಿರಣ ಪತ್ರಿಕೆಯಲ್ಲಿ ಮಹಿಳಾ ಪುಟಕ್ಕೆ ಅಂಕಣ. ಕೃಷಿ ಮಾಧ್ಯಮ ಕೇಂದ್ರದಿಂದ 2005-06ರಲ್ಲಿ ‘ಕೃಷಿ ಮತ್ತು ಗ್ರಾಮೀಣ ...

READ MORE

Related Books