ಕೃಷಿಜ್ಞಾನ ಪ್ರದೀಪಿಕೆ

Author : ಫ.ಗು. ಹಳಕಟ್ಟಿ

Pages 390




Year of Publication: 1936
Published by: ಫ.ಗು. ಹಳಕಟ್ಟಿ
Address: ವಿಜಾಪುರ

Synopsys

ನಾಗಭೂಷಣ ಘನಮಠದಾರ್ಯರ ಕೃಷಿ ಜ್ಞಾನ ಪ್ರದೀಪಿಕೆ-ಕೃಷಿ ವಲಯದಲ್ಲಿ ಅತ್ಯುತ್ತಮ ಗ್ರಂಥ ಎಂಬ ಖ್ಯಾತಿ ಪಡೆದಿದೆ. ವಚನ ಸಾಹಿತ್ಯ ಪಿತಾಮಹ ಫ.ಗು.ಹಳಕಟ್ಟಿ ಅವರು ಘನಮಠದಾರ್ಯರ ಕೃಷಿ ಜ್ಞಾನವನ್ನು ಸಂಪಾದಿಸಿ ಕಾಲದೊಂದಿಗೆ ತಳಕು ಹಾಕಿಕೊಂಡು ಜೀವಂತವಾಗಿರುವಂತೆ ಮಾಡಿದ್ದಾರೆ.

ನಾಗಭೂಷಣ ಅವರು ಒಕ್ಕಲುತನವನ್ನುಗಾಢವಾಗಿ ಪ್ರೀತಿಸುತ್ತಿದ್ದು, ಅವರ ಶಿಷ್ಯ ಸಿದ್ಧರಾಮಪ್ಪ ಕುನ್ನಾಳ ಅವರು ನೀಡಿದ ಸಲಹೆ ಹಾಗೂ ಮಾಹಿತಿ ಆಧರಿಸಿ, ತಾವು ಈ ಕೃತಿ ರಚಿಸಿದ್ದಾಗಿ ಫ.ಗು.ಹಳಕಟ್ಟಿ ಅವರು ಕೃತಿಯ ಪ್ರಸ್ತಾವನೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಕೃತಿಯ ಮೊದಲ ಭಾಗದಲ್ಲಿ, ಹೊಲಗಳನ್ನು ತಿದ್ದುವ ಪರಿಗಳು ಹಾಗೂ ಬೇರೆ ಬೇರೆ ಪೈರುಗಳನ್ನು ಮಾಡುವ ರೀತಿ ವಿವರಿಸಿದ್ದರೆ, 2ನೇ ಭಾಗದಲ್ಲಿ-ತೋಟಗಳನ್ನು ಮಾಡುವ ಪದ್ಧತಿಯ ವಿವರಗಳಿವೆ. ನಾಗಭೂಷಣ ಘನಮಠದಾರ್ಯ ಶಿವಯೋಗಿಗಳ ಕೃಷಿಯಲ್ಲಿಯ ಅಗಾಧ ಜ್ಞಾನದ ದ್ಯೋತಕವೇ ಈ ಕೃತಿ.

About the Author

ಫ.ಗು. ಹಳಕಟ್ಟಿ
(02 July 1880 - 29 June 1964)

‘ವಚನ ಪಿತಾಮಹ’ ಎಂದೇ ಪ್ರಸಿದ್ಧರಾದ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಹನ್ನೆರಡನೇ ಶತಮಾನದ ವಚನ ಸಾಹಿತ್ಯವನ್ನು ಬೆಳಕಿಗೆ ತಂದವರು. ಧಾರವಾಡದಲ್ಲಿ 1880ರ ಜುಲೈ 2ರಂದು ಜನಿಸಿದರು. ತಂದೆ ಗುರುಬಸಪ್ಪ, ತಾಯಿ ದಾನಾದೇವಿ. ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ನಂತರ ಉನ್ನತ ಶಿಕ್ಷಣವನ್ನು ಮುಂಬಯಿನಲ್ಲಿ ಪಡೆದರು. 1904ರಲ್ಲಿ ಎಲ್ಎಲ್ ಬಿ ಪದವಿ ಪಡೆದ ನಂತರ ವಕೀಲಿ ವೃತ್ತಿ ಆರಂಭಿಸಿದರು. 1923ರಲ್ಲಿ ಬಿಜಾಪುರದಲ್ಲಿ ಸರ್ಕಾರಿ ವಕೀಲರಾಗಿ ನೇಮಕಗೊಂಡ ಅವರು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯಾಗಿದ್ದರು. ಮುಂಬಯಿ ವಿಧಾನಸಭಾ ಸದಸ್ಯರೂ ಆಗಿ ಆಯ್ಕೆಯಾಗಿದ್ದರು. ಜಿಲ್ಲಾ ಗ್ರಾಮಾಂತರ ಅಭಿವೃದ್ಧಿ ಮಂಡಳಿಯು ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದರು. ...

READ MORE

Related Books