ವೈಜ್ಞಾನಿಕ ಕೃಷಿ

Author : ಎಂ. ಮಹದೇವಪ್ಪ

Pages 200

₹ 160.00




Year of Publication: 2017
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ
Phone: 08022372388

Synopsys

ಭಾರತ ಕೃಷಿ ಪ್ರಧಾನ ದೇಶ. ಕೃಷಿಯನ್ನು ಕಾಲಕಾಲಕ್ಕೆ ಉನ್ನತೀಕರಿಸಲು ಬೇಕಾದ ವೈಜ್ಞಾನಿಕ ಅರಿವನ್ನು ರೈತರಿಗೆ ಸರಿಯಾಗಿ ಸಿಗುತ್ತಿರಲಿಲ್ಲ. ಆದರೆ ಇಂದಿನ ಕೃಷಿ ಅಭಿವೃದ್ಧಿ ಹೊಂದಿದ್ದು, ರೈತರು ಹೆಚ್ಚುವರಿ ಇಳುವರಿ ಹಿಂದೆ ಬಿದ್ದಿದ್ದಾರೆ. ಇಂತಹ ವಾಸ್ತವ ಪರಿಸ್ಥಿತಿಯಲ್ಲಿ ಕೃಷಿಯ ವೈಜ್ಞಾನಿಕತೆ ಬಗ್ಗೆ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಅರಿವು ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ, ಎಂ. ಮಹದೇವಪ್ಪನವರ ವೈಜ್ಞಾನಿಕ ಕೃಷಿ ಕೃತಿಯು ಸಹಕಾರಿ ಯಾಗಬಲ್ಲದು. ಇದರಲ್ಲಿ ಕೃಷಿ, ನೈಸರ್ಗಿಕ ಸಂಪನ್ಮೂಲಗಳು, ಬೀಜಗಳು, ಕಳೆಗಳು, ಕೃಷಿ ಸಂಬಂಧಿತ ಸಂಗತಿಗಳ ಕುರಿತು ತಳಸ್ಪರ್ಶಿ ಅಧ್ಯಯನದಿಂದ ಬರೆದಿರುವ ಲೇಖನಗಳು ಸಂಶೋಧನಾ ನಿರತರಿಗೆ ಆಕರ ಸಾಮಗ್ರಿ ಎಂತಲೂ ಆಗಿದೆ.

About the Author

ಎಂ. ಮಹದೇವಪ್ಪ
(04 August 1937)

ಕೃಷಿ ವಿಜ್ಞಾನಿಗಳ ನೇಮಕಾತಿ ಸಮಿತಿಯ ನಿವೃತ್ತ ಅಧ್ಯಕ್ಷರಾಗಿ ಡಾ.ಎಂ.ಮಹಾದೇವಪ್ಪ ಸೇವೆ ಸಲ್ಲಿಸಿದ್ದಾರೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಪದ್ಮಶ್ರೀ ಡಾ. ಎಂ. ಮಹದೇವಪ್ಪ ಅವರ ಸೇವೆ ಅನನ್ಯ. ವಿವಿಧ ತೆರನಾದ ಹೈಬ್ರಿಡ್ ಅಕ್ಕಿಯನ್ನು ಬೆಳೆಸಿದ ಕೀರ್ತಿ ಅವರಿಗಿದೆ.  ಹೂಕರ್ ಪ್ರಶಸ್ತಿ (1981), ಕರ್ನಾಟಕ ರಾಜೋತ್ಸವ ಪ್ರಶಸ್ತಿ (1984), ಭಾರತ ರತ್ನ ಎಂ.ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ (1999) ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ರೇಷ್ಮೆ ವಿಜ್ಞಾನಗಳ ರಾಷ್ಟ್ರೀಯ ಅಕಾಡೆಮಿ, ಭಾರತೀಯ ವಿಜ್ಞಾನ ಬರೆಹಗಾರರ ಸಂಸ್ಥೆ ಸೇರಿದಂತೆ ಹಲವು ಪ್ರತಿಷ್ಠಿತ ರಾಷ್ಟ್ರೀಯ ಸಂಸ್ಥೆಗಳಿಂದ ಪ್ರಶಸ್ತಿ ಹಾಗೂ ಫೆಲೋಶಿಪ್ ಗಳನ್ನು ...

READ MORE

Related Books