ಕೃಷಿ ಪಾರಂಪರಿಕ ಜ್ಞಾನ

Author : ಸ.ಚಿ. ರಮೇಶ

Pages 210

₹ 120.00




Year of Publication: 2011
Published by: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ
Address: ಕನ್ನಡ ವಿಶ್ವವಿದ್ಯಾಲಯ ಪ್ರಾದೇಶಿಕ ಕಚೇರಿ ನಂ. 1, ಹಳೆಯ ಕಾನೂನು ಕಾಲೇಜು ಕಟ್ಟಡ ಮೈಸೂರು ಬ್ಯಾಂಕ್ ವ್ಯತ್ಯ, ಅರಮನೆ ರಸ್ತೆ ಬೆಂಗಳೂರು- 560009 ದೂರವಾಣಿ:
Phone: 08022372388

Synopsys

ಕೃಷಿ ಪದ್ಧತಿಯು ಮಾಯಾಜಾಲವಾಗಿ ಪರಿವರ್ತನೆಗೊಂಡು ರೈತಾಪಿ ಬದುಕಿನ ದಿಕ್ಕು ತಪ್ಪಿಸಿದೆ. ಭೂಮಿಯು ಜೈವಿಕ ಸತ್ವವನ್ನು ಕಳೆದುಕೊಂಡು ವ್ಯವಸಾಯಕ್ಕೆ ಅಯೋಗ್ಯವಾಗಿದೆ. ರಾಸಾಯನಿಕ ಗೊಬ್ಬರವಿಲ್ಲದೇ ಏನೂ ಬೆಳೆಯಲಾರದ ಸ್ಥಿತಿಗೆ ತಲುಪಿದೆ. ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡ ರೈತನ ಸ್ಥಿತಿ ಇಂದು ಅತಂತ್ರವಾಗಿದೆ. ರೈತರು ಈ ವಾತಾವರಣದಲ್ಲಿ ತನ್ನನ್ನು ಬಂಡವಾಳಶಾಹಿ ವ್ಯವಸ್ಥೆಗೆ ಅರ್ಪಿಸಿಕೊಂಡಿದ್ದಾರೆ. ರಸಗೊಬ್ಬರ, ಕೀಟನಾಶಕ, ಕೃಷಿ ಉಪಕರಣ ಇತ್ಯಾದಿಗಳನ್ನು ತಯಾರು ಮಾಡುವ ಹಾಗೂ ವ್ಯಾಪಾರಿಗಳ ಮುಷ್ಟಿಯಲ್ಲಿ ಬಂದಿಯಾಗಿದ್ದಾನೆ. ಇಂದು ದೇಶದಲ್ಲಿ ಎಲ್ಲಿ ಏನು ತೊಂದರೆಯಾದರೂ ಪಟ್ಟು ಬೀಳುವುದು ರೈತನಿಗೆ, ಇಂಥ ಸಂದಿನ ಸಂದರ್ಭದಲ್ಲಿ ರೈತ ಪಾರಂಪರಿಕ ಕೃಷಿಯತ್ತ ಮುಖವಾಡುವುದೊಳಿತು. ಸಹಜ ಸಾವಯವ ಕೃಷಿಯ ಮೂಲಕ ರೋಗ ರುಜಿನಗಳಿಂದ ಮುಕ್ತರಾಗುವುದು ಇಂದಿನ ಅತ್ಯವಶ್ಯಕಗಳಲ್ಲಿ ಒಂದು. ಈ  ಹಿನ್ನೆನಲೆಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ವಿಭಾಗವು ಹಾಸನದಲ್ಲಿ ಏರ್ಪಡಿಸಿದ್ದ ’ಕೃಷಿ ಪಾರಂಪರಿಕ ಜ್ಞಾನ' ಎಂಬ ವಿಷಯದ ಬಗೆಗಿನ ದೇಸಿ ಸಮ್ಮೇಳನದಲ್ಲಿ ಮಂಡಿಸಿದ ಲೇಖನಗಳನ್ನು ಈ ಪುಸ್ತಕ ಒಳಗೊಂಡಿದೆ.

About the Author

ಸ.ಚಿ. ರಮೇಶ
(24 February 1961)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಸ.ಚಿ. ರಮೇಶ್ ಅವರು ಜಾನಪದ ವಿದ್ವಾಂಸರಲ್ಲಿ ಒಬ್ಬರು. ಡಾ.ಎಸ್.ಎಚ್ ರಮೇಶ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ, ಜಾನಪದ ಪದವಿ ಪಡೆದಿರುವ ಅವರು ಕನ್ನಡ ವಿಶ್ವವಿದ್ಯಾಲಯದಿಂದ ಎಂ.ಫಿಲ್, ಪಿಎಚ್.ಡಿ ಪದವಿ ಪಡೆದಿದ್ದಾರೆ. ಜಾನಪದ ಸಾಹಿತ್ಯ, ಕನ್ನಡ ಸಾಹಿತ್ಯ, ಪರಿಸರ ಚಿಂತನೆ, ಪಾರಂಪರಿಕ ಕೃಷಿ  ಅವರ ಅಸಕ್ತಿಯ ಕ್ಷೇತ್ರಗಳು. ಜಾನಪದ ಕರ್ನಾಟಕ ಸಂಪುಟ-3, ಸಂಚಿಕೆ-1, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, (2004),   ಮಾಟ–ಮಂತ್ರ–ಮೋಡಿ,   ಅಲೆಮಾರಿಗಳ ಸ್ಥಿತಿಗತಿ, ನೀರು : ಒಂದು ಜಾನಪದ ನೋಟ,ದಕ್ಷಿಣ ಭಾರತೀಯ ಜಾನಪದ ಕೋಶ, ಸಂಪುಟ-2 ಅವರ ಪ್ರಕಟಿತ ಕೃತಿಗಳು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕುಲಸಚಿವರಾಗಿ (ಮೌಲ್ಯಮಾಪನ)  ಕಾರ್ಯ ನಿರ್ವಹಿಸಿದ ಅವರು ಕರ್ನಾಟಕ ವಸ್ತು ಸಂಗ್ರಹಾಲಯ, ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ...

READ MORE

Related Books