ಕೃಷಿ ಯಾಕೆ ಖುಶಿ ?

Author : ನರೇಂದ್ರ ರೈ ದೇರ್ಲ

Pages 120

₹ 140.00




Year of Publication: 2022
Published by: ವೀರಲೋಕ ಪ್ರಕಾಶನ

Synopsys

ಲೇಖಕ ನರೇಂದ್ರ ರೈ ದೇರ್ಲ ಅವರು ಕೃಷಿಯ ಬಗ್ಗೆ ಬರೆದ ಲೇಖನ ಸಂಕಲನ ಕೃಷಿ ಯಾಕೆ ಖುಶಿ?. "ಕೃಷಿ ಯಾಕೆ ಖುಷಿ" ಪುಸ್ತಕ ಓದೋಕೆ ಖುಷಿ ನೀಡುವ ಜೊತೆಗೆ ಅನೇಕ ಭಾವನೆಗಳನ್ನು, ತುಮುಲಗಳನ್ನು, ವಿಚಾರಗಳನ್ನು ಓದುಗರಿಗೆ ಸಮರ್ಥವಾಗಿ ವರ್ಗಾಯಿಸುವಲ್ಲಿ ಯಶಸ್ವಿಯಾಗುತ್ತದೆ. ಲೇಖಕ ನರೇಂದ್ರ ರೈ, ತಮ್ಮ ಸುತ್ತ ಮುತ್ತಲಿನ ಪರಿಸರದ ನಡುವೆ ಗುಡ್ಡದಂತೆ ಇರುವ ಆತಂಕಗಳನ್ನು ಹೇಳುತ್ತಾ ಹೋಗುವಾಗ ಅದ್ಯಾವುದೂ ಸುಳ್ಳೆನಿಸುವುದಿಲ್ಲ. ಹಳ್ಳಿಯ ಜನರ ಜೊತೆ ಸಾಂಗತ್ಯ ಹೊಂದಿದ ಪ್ರತಿಯೊಬ್ಬರಿಗೂ ಇದು ನನ್ನದೇ ಊರಿನ, ಮನೆಯ ಕಥೆ ಎನಿಸುತ್ತದೆ. ಅದರ ಜೊತೆಯೇ ಒಂದಷ್ಟು ಆಶಾವಾದದ ಕಥೆಗಳ ಮೂಲಕ, ಸಾಧಕರ ನಿದರ್ಶನಗಳ ಮೂಲಕ ಸಣ್ಣದಾದ ಭರವಸೆಯ ಕಿಡಿಯನ್ನು ಹೊತ್ತಿಸಿದ್ದಾರೆ ಲೇಖಕರು. ಮತ್ತದು ಅಗತ್ಯ ಸಹ!

About the Author

ನರೇಂದ್ರ ರೈ ದೇರ್ಲ
(14 October 1965)

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಡಾ. ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಡಾ. ನರೇಂದ್ರ ರೈ ದೇರ್ಲ ಅವರು ಪತ್ರಕರ್ತರೂ ಹೌದು. ಹಾಗೆಯೇ  ಕವಿಗಳೂ ಕೂಡ. 'ತೊದಲು' ಕವನ ಸಂಕಲನದ ನಂತರ ಗದ್ಯ ಬರವಣಿಗೆ ಮುಂದುವರಿಸಿದರು.  ಆದರೆ, ಪದ್ಯದ ಗುಣ ಅವರ ಗದ್ಯಕ್ಕಿದೆ. ಅವರಿಗೆ ಸಾವಯವ ಕೃಷಿಯಲ್ಲಿ ವಿಶೇಷ ಆಸಕ್ತಿ . ಹಾಗಯೇ ಪರಿಸರದ ಬಗ್ಗೆ ಗಾಢ ಅನುರಕ್ತಿ.  ತೇಜಸ್ವಿಯೊಳಗಿನ ಕಲಾವಿದ'ನನ್ನು ಕಂಡರಿಸಿದ ನರೇಮದ್ರ ಅವರು  'ನಮ್ಮೆಲ್ಲರ ತೇಜಸ್ವಿ'ಯ ಅನಾವರಣಗೊಳಿಸಿದ್ದಾರೆ. ’ವಿಶುಕುಮಾರ್ ಬದುಕು ಬರೆಹ'; 'ಹೊನ್ನಯ ಶೆಟ್ಟಿ ಬದುಕು ಬರೆಹ'; 'ಡಾ. ಮೋಹನ ...

READ MORE

Related Books