ಭೂಸಾರ ಸಂರಕ್ಷಣೆ

Author : ವಿರೂಪಾಕ್ಷ ಬಡಿಗೇರ

Pages 68

₹ 17.00




Year of Publication: 1981
Published by: ಕನ್ನಡ ಅಧ್ಯಯನ ವಿಭಾಗ
Address: ಕೃಷಿ ವಿಶ್ವವಿದ್ಯಾಲಯ ಬೆಂಗಳೂರು-560065

Synopsys

‘ಭೂಸಾರ ಸಂರಕ್ಷಣೆ’ ಕೃತಿಯು ವಿರೂಪಾಕ್ಷ ಬಡಿಗೇರ ಅವರ ಕೃಷಿಯ ಕುರಿತ ಬರಹಗಳ ಸಂಕಲನವಾಗಿದೆ. ಕೃತಿಯ ಕುರಿತು ವಿಶ್ಲೇಷಣೆ ಮಾಡಿರುವ ವೀ.ಚ ಹಿತ್ತಲಮನಿ ಅವರು, ಮಣ್ಣು ಪ್ರಕೃತಿಯ ಅಮೂಲ್ಯ ಸಂಪತ್ತು ಹಾಗೂ ವ್ಯವಸಾಯಕ್ಕೆ ಮೂಲ ಆಧಾರ ವಸ್ತು. ಸಸ್ಯ, ಪ್ರಾಣಿ ಹಾಗೂ ಮಾನವರಿಗೆ ಅಗತ್ಯವಾಗಿರುವ ಆಹಾರ, ವಸತಿ, ಉಡುಗೆಗಳನ್ನು ಒದಗಿಸುವಿಕೆಯಲ್ಲಿಯೂ ಮಹತ್ವದ ಪಾತ್ರವಹಿಸಿದೆ. ಮಣ್ಣು ನಿರ್ಮಾಣವಾಗಲು ಅಸಂಖ್ಯಾತ ವರ್ಷಗಳೇ ಬೇಕು. ಮಣ್ಣಿನ ಫಲವತ್ತತೆ ಹೆಚ್ಚಿಸಿ ಸಾರ ನಷ್ವವಾಗದಂತೆ ಕೈಗೊಳ್ಳುವ ಕಾರ್ಯ ಬೆಳೆ ಉತ್ಪಾದನೆಗೆ ಬಹಳ ಸಹಕಾರಿ. ಮಣ್ಣನ್ನು ಕಾಪಾಡದೆ ಅದರ ಸಾರ ನಷ್ಟಗೊಳ್ಳುವುದಕ್ಕೆ ಬಿಟ್ಟರೆ ಅದನ್ನು ಅವಲಂಬಿಸಿದ ರೈತರಿಗೂ ಇತರ ಮಾನವರಿಗೂ ಜೀವನಾಧಾರ ಕಷ್ಟವಾಗುತ್ತದೆ. ಈ ಕಿರು ಹೊತ್ತಗೆಯಲ್ಲಿ ಮಣ್ಣು, ನೀರು, ಭೂಸವಕಳಿ, ಭೂಸಾರ ಸಂರಕ್ಷಣೆ, ಸಮಪಾತಳಿ ಬದುಗಳು, ಹೊಳೆಗಟ್ಟಿಗಳು ಹಾಗೂ ಭೂಫಲವತ್ತತೆ ಈ ಕೆಲವು ಸಂಗತಿಗಳನ್ನು ಸಂಕ್ಷಿಪ್ತವಾಗಿ ಚರ್ಚಿಸಲಾಗಿದೆ.

About the Author

ವಿರೂಪಾಕ್ಷ ಬಡಿಗೇರ

ಲೇಖಕ, ಬರಹಗಾರ ವಿರೂಪಾಕ್ಷ ಬಡಿಗೇರ ಅವರು ಮೂಲತಃ ಐಹೊಳೆ ಯವರು. ಮಂಗಳೂರು ಮತ್ತು ಧಾರವಾಡ ಆಕಾಶವಾಣಿ ಕೇಂದ್ರಗಳಲ್ಲಿ ಸೇವೆಸಲ್ಲಿಸಿ ನಿವೃತ್ತರಾಗಿರುವ ಇವರು ಶಿಲ್ಪಕಲಾ ಅಕಾಡೆಮಿಯ ಸದಸ್ಯರಾಗಿ ಕರಾವಳಿಯ ಅನೇಕ ಕಲಾವಿದರಿಗೆ ನೆರವಾಗಿದ್ದಾರೆ. ಕಲಾ ಶಿಬಿರಗಳನ್ನು ಏರ್ಪಡಿಸಿ ಯುವ ಕಲಾವಿದರಿಗೆ ಮಾರ್ಗದರ್ಶನ ನೀಡಿದ್ದಾರೆ. ಶಿಲ್ಪಕಲೆ, ಚರಿತ್ರೆ, ಕಾವ್ಯ, ನಾಟಕ, ಮನೋವಿಜ್ಞಾನ ಇತ್ಯಾದಿ ಕ್ಷೇತ್ರಗಳಿಗೆ ಸಂಬಂಧಿಸಿದ 32 ಕೃತಿಗಳನ್ನು ರಚಿಸಿದ ಡಾ. ಬಡಿಗೇರ ಅವರು ಹಂಪಿ ವಿ.ವಿ.ಯಿಂದ ಡಿ.ಲಿಟ್. ಪದವಿ ಪಡೆದಿದ್ದಾರೆ. 'ಕೃಷಿ ಕಾಮಧೇನು' ಎಂಬ ಪತ್ರಿಕೆಯನ್ನು 13 ವರ್ಷಗಳಿಂದ ನಡೆಸುತ್ತಿರುವ ಇವರು, ವಿಶ್ವೇಶ್ವರಯ್ಯ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಶ್ರೀ ...

READ MORE

Related Books